Advertisement
ವಿಶೇಷ ವರದಿಗಳು

65 ವರ್ಷಗಳಿಂದ ಜನರನ್ನು ಒಂದಾಗಿಸುತ್ತಿರುವ “ಭಜನೆ ” | ಕೊಕ್ಕಡದಲ್ಲೊಂದು ಸಂಭ್ರಮದ ಉತ್ಸವ |

Share

ಒಂದೆರಡಲ್ಲ…! ಬರೋಬ್ಬರಿ 65 ವರ್ಷಗಳಿಂದ ಭಜನೆ ನಡೆಯುತ್ತಿದೆ ಇಲ್ಲಿ..!, ಈ ಮೂಲಕ ಜನರು ಒಂದಾಗುತ್ತಿದ್ದಾರೆ. ಜಾತಿಯ ಬೇಧವಿಲ್ಲದೆ ಒಂದಾಗಿಸುವ ಈ ಭಜನೆ ಇಲ್ಲಿ ಒಂದು ಉತ್ಸವ..!. ಇಂತಹ ಸಂಭ್ರಮ ನಡೆಯುತ್ತಿರುವುದು ಕೊಕ್ಕಡದಲ್ಲಿ.

ವಿಶ್ವ ಹಿಂದೂ ಪರಿಷದ್ ಕೊಕ್ಕಡ ಮತ್ತು ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ವತಿಯಿಂದ ನಡೆಯುತ್ತಿರುವ 65ನೇ ವರ್ಷದ ಸಾರ್ವಜನಿಕ ಭಜನಾ ಸಂಕೀರ್ತನೆ ನಡೆಯಿತು. ಸುಮಾರು 65 ವರ್ಷಗಳ ಹಿಂದೆ ಆರಂಭವಾದ ಈ ನಗರ ಭಜನೆಯು ಕೊಕ್ಕಡದ ಒಂದು ದೊಡ್ಡ ಉತ್ಸವ.

ಸುಮಾರು 60 ರ ದಶಕದಲ್ಲಿ, ಕೊಕ್ಕಡದಲ್ಲಿ ಹಿಂದೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಶಿಶಿಲದ ಬರ್ಗುಲ ನಿವಾಸಿ ದಿವಂಗತ ಪುರುಷೋತ್ತಮ ನಾಯಕ್ ಅವರ ಮುಂದಾಳತ್ವದಲ್ಲಿ ಹುಟ್ಟಿಕೊಂಡ ನಗರ ಭಜನೆಯೂ ಇವರ ಸಮಕಾಲೀನರ ಉತ್ಸಾಹದೊಂದಿಗೆ ಇದೀಗ ಭಜನಾ ಸಪ್ತಾಹದ ಮೂಲಕ ಮುಂದುವರೆದುಕೊಂಡು ಬಂದಿದೆ.

ದೀಪಾವಳಿ ನಂತರದ ಮೊದಲ ಷಷ್ಠಿಯಂದು ಸಂಜೆ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವರಿಗೆ ರಂಗಪೂಜೆ ಯನ್ನು ಅರ್ಪಿಸಿ ಭಜನೆ ಆರಂಭಗೊಳ್ಳುತ್ತದೆ. ಬಳಿಕ ಎರಡನೆಯ ದಿನ ಸಂಜೆ ಶಿಶಿಲದ ಬರ್ಗುಲದಲ್ಲಿರುವ ದಿವಂಗತ ಪುರುಷೋತ್ತಮ ನಾಯಕರ ಮನೆಯಲ್ಲಿರುವ ರಾಮ ಸೀತೆ ಲಕ್ಷ್ಮಣ ಮತ್ತು ಹನುಮಂತರ ಬೆಳ್ಳಿಯ ಭಾವಚಿತ್ರದೊಂದಿಗೆ ಮನೆಯಿಂದ ಕೊಕ್ಕಡದವರೆಗೆ ಶೋಭ ಯಾತ್ರೆಯ ಮೂಲಕ ವೈಭವಪೂರಿತವಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳಕ್ಕೆ ಪ್ರವೇಶಿಸುತ್ತದೆ.

ಪ್ರಾರ್ಥನೆಯ ಬಳಿಕ ಅಲ್ಲಿ ಭಜನೆಗಳನ್ನು ನಡೆಸಿ ಬೆಳ್ಳಿಯ ರಥದಲ್ಲಿ ದೇವರು ಸಮೇತ ಅಶ್ವತ್ಥಕಟ್ಟೆ ವರೆಗೆ ಕುಣಿತ ಭಜನೆಯ ಮೂಲಕ ಸಾಗಿ ಬಳಿಕ ಅಲ್ಲಿ ಪೂಜೆ ನೆರವೇರಿಸಿ ಕಾರ್ತಿಕ ಕಟ್ಟೆಯವರೆಗೆ ಭಜನೆಯು ಸಾಗುತ್ತದೆ. ನಂತರ ಅಲ್ಲಿಂದ ಹರಿಹರ ಕಟ್ಟೆಗೆ ಭಜನಾರ್ಥಿಗಳು ಸಾಗಿ ಮತ್ತೆ ಭಜನಾ ಮಂದಿರಕ್ಕೆ ಬಂದು ಅಲ್ಲಿ ದೇವರನ್ನು ಇರಿಸಿ, ದೇವರ ಸುತ್ತಲೂ ಕುಣಿತ ಭಜನೆ ಯನ್ನು ಆರಂಭಿಸುತ್ತಾರೆ. ಹೀಗೆ ಸುಮಾರು 3 ಗಂಟೆಗಳಿಗಿಂತ ಹೆಚ್ಚು ಕಾಲ ಭಜನೆ ಮುಂದುವರೆಯುತ್ತದೆ.

ವಾರಗಳ ಕಾಲ ನಡೆಯುವ ಭಜನಾ ಸಂಕೀರ್ತನೆಯಲ್ಲಿ ಪ್ರತಿನಿತ್ಯ ಇನ್ನೂರರಿಂದ ಮುನ್ನೂರು ಜನರು ಭಾಗವಹಿಸುತ್ತಾರೆ. ಈ ಭಜನಾ ಕಾರ್ಯಕ್ರಮದ ಮೂಲಕ ಊರ ಜನರೆಲ್ಲಾ ಒಂದಾಗುತ್ತಾರೆ. ಸಂಘಟನೆಯ ದೃಷ್ಟಿಯಿಂದ ಆರಂಭವಾದ ಭಜನಾ ಕಾರ್ಯಕ್ರಮ ಇಂದಿಗೂ ಮಹತ್ವ ಪಡೆದಿದೆ. ಜನರು ಸಂಭ್ರಮದಿಂದ ಭಾಗವಹಿಸುತ್ತಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

20 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

1 day ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago