ದೀಪಾವಳಿಯ ಸಂದರ್ಭ ಸರಣಿ ಸಾಮೂಹಿಕ ಗೋಪೂಜೆ ಮೂಲಕ ಸಮಾಜದಲ್ಲಿ ದೇಸೀ ಗೋ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಳೆದ ಎಂಟು ವರ್ಷಗಳಿಂದ ಗುತ್ತಿಗಾರಿನಲ್ಲಿ ನಡೆಯುತ್ತಿದೆ.
ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಗುತ್ತಿಗಾರು ವಲಯದ ವೈದಿಕ ವಿಭಾಗದ ಆಶ್ರಯದಲ್ಲಿ ದೇಸೀ ಗೋವಿಗೆ ಸರಣಿ ಗೋಪೂಜೆಯ ಕಾರ್ಯಕ್ರಮ ಪ್ರತೀ ವರ್ಷ ನಡೆಯುತ್ತಿದೆ. ಈ ಬಾರಿ ಕೂಡಾ ಸರಣಿ ಗೋಪೂಜೆ ನಡೆಯಿತು. ಸುಬ್ರಹ್ಮಣ್ಯ ಘಟಕದಲ್ಲಿ ಆರಂಭಗೊಂಡ ಗೋಪೂಜಾ ಕಾರ್ಯಕ್ರಮವು ಬಳಿಕ ವಳಲಂಬೆ, ಕೊಲ್ಲಮೊಗ್ರ, ಕಮಿಲ, ಮೇಲ್ತೋಟ ,ಮರ್ಕಂಜ, ನೆಲ್ಲೂರುಕೆಮ್ರಾಜೆ ಘಟಕಗಳಲ್ಲಿ ನಡೆದು ಮೊಗ್ರ ಸತ್ಯನಾರಾಯಣ ಅವರ ಮನೆಯಲ್ಲಿ ಸಮಾರೋಪಗೊಂಡಿತು.
ಸಾಮೂಹಿಕ ಗೋಪೂಜೆಯ ಮೂಲಕ ದೇಸೀ ಗೋವಿನ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದೇಸೀ ಗೋತಳಿ ಅಭಿವೃದ್ಧಿಯತ್ತ ಕೃಷಿಕರು ಮನಸ್ಸು ಮಾಡಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮುರಳಿಕೃಷ್ಣ ಭಟ್ ವಳಲಂಬೆ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯನಾರಾಯಣ ಮೊಗ್ರ, ದೇವಕಿ. ಜಿ. ಭಟ್ ಪನ್ನೆ, ಶ್ರೀಕೃಷ್ಣ ಶರ್ಮ.ಪಿ., ಶ್ರೀಕೃಷ್ಣ ಭಟ್ ಗುಂಡಿಮಜಲು, ಮೊದಲಾದವರು ಇದ್ದರು.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…