ಒಂದು ಗೋವಿನ ಕಥೆ…. ! | ತುಂಡಾದ ಗೋವಿನ ಕಾಲಿಗೆ ಪ್ಲಾಸ್ಟರ್‌ | 24 ದಿನಗಳಿಂದ ನಿರಂತರ ಚಿಕಿತ್ಸೆ |

October 14, 2021
7:00 AM

ದೊಂದು ಗೋವಿನ ಕಥೆ. ರಸ್ತೆ ಬದಿಯಲ್ಲಿ ಕಾಲು ಮುರಿದು ಬಿದ್ದ ಸ್ಥಿತಿಯಲ್ಲಿದ್ದ ಹೋರಿಯನ್ನು ಗೋಪ್ರೇಮಿಗಳು ರಕ್ಷಣೆ ಮಾಡಿದ್ದರು. ಇದೀಗ ಈ ಗೋವಿಗೆ ಪ್ಲಾಸ್ಟರ್‌ ಹಾಕಿ ಬ್ಯಾಂಡೇಜ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಿಗೂ ಈಗ ವಿಶ್ರಾಂತಿ. 24 ದಿನಗಳಿಂದ ನಿರಂತರ ಚಿಕಿತ್ಸೆ ಮುಂದುವರಿದಿದೆ.

ಗೋವು ಎಂದರೆ ಪ್ರೀತಿ ಮಾತ್ರವಲ್ಲ ಕೃಷಿಕರಿಗೆ ಅದೊಂದು ಭಾವನಾತ್ಮಕ ಸಂಬಂಧ. ಹಾಗಿದ್ದರೂ ಹೋರಿಗಳು ಕಟುಕರ ಪಾಲಾಗುವುದು ಇದ್ದೇ ಇದೆ. ಅದೇಗೋ ಸುಬ್ರಹ್ಮಣ್ಯದ ಬಳಿ ಕಾಲು ಕಟ್ಟಿದ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಹೋರಿಯ ಕಾಲು ಮುರಿದುಕೊಂಡಿತ್ತು. ಸ್ಥಳೀಯರು ಹಾಗೂ ಗೋಪ್ರೇಮಿಗಳು ರಕ್ಷಣೆ ಮಾಡಿದರು. ಆ ಬಳಿಕ ಪಶುವೈದ್ಯ ಡಾ.ವೆಂಕಟಾಚಲಪತಿ ಅವರ ಮೂಲಕ ಚಿಕಿತ್ಸೆ ನಡೆಯಿತು.

ಈಗ ಗೋವಿನ ಕಾಲು ಸರಿ ಮಾಡುವುದಕ್ಕೆ ಪ್ಲಾಸ್ಟರ್‌ ಹಾಕಿ ಮಲಗಿಸಲಾಗಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗೂ ಅತ್ಯಂತ ಚೆನ್ನಾಗಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಡಾದ ಕಾಲಿಗೆ ಪ್ಲಾಸ್ಟರ್‌ ಹಾಕಿ ಕಾಲು ಕಟ್ಟಲಾಗಿದೆ. ಸದ್ಯ ಸುಬ್ರಹ್ಮಣ್ಯದ ಕಲ ವಿಲೇವಾರಿ ಘಟಕದ ಬಳಿಯಲ್ಲಿ ಆಶ್ರಯ ಪಡೆದಿರುವ ಈ ಹೋರಿಗೆ ಸ್ಥಳೀಯರು ಹುಲ್ಲು, ನೀರು ನೀಡುತ್ತಾರೆ, ಪಶುವೈದ್ಯ ಡಾ.ವೆಂಕಟಾಚಲಪತಿ ನಿತ್ಯವೂ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ( ವಿಡಿಯೋ ಇಲ್ಲಿದೆ….. )

 

ಮನುಷ್ಯರಷ್ಟೇ ಕೇರ್‌ ತೆಗೆದುಕೊಂಡು ಚಿಕಿತ್ಸೆ ನೀಡುವುದು ಗೋ ಪ್ರೇಮಿಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ವೈದ್ಯರು ಸಾರಿ ಹೇಳಿದರೆ, ರಕ್ಷಣೆಯ ಬಳಿಕ ನಿತ್ಯವೂ ಹುಲ್ಲು, ನೀರು ನೀಡುವ ಆ ತಂಡ ನಿಜವಾದ ಗೋಸೇವೆಯಲ್ಲಿ ಈಗ ತೊಡಗಿಸಿಕೊಂಡಿದೆ. ಳೆದ 24  ದಿನಗಳಿಂದ ಡಾ.ವೆಂಕಟಾಚಲಪತಿ, ಅಂಬರೀಶ್‌ ಹಾಗೂ ಸ್ಥಳೀಯರಾದ ಶೇಖರ ಸುಬ್ರಹ್ಮಣ್ಯ, ಶರತ್ ಕೊಲ್ಲಮೊಗ್ರ, ಅಶ್ವತ್ಥ್‌ ಬಿಳಿನೆಲೆ  ಸೇವೆ ಮಾಡುತ್ತಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ
June 6, 2026
9:23 AM
by: ಮಿರರ್‌ ಡೆಸ್ಕ್
ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ
June 5, 2026
10:04 PM
by: ಮಿರರ್‌ ಡೆಸ್ಕ್
ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ
June 5, 2026
8:53 PM
by: ಮಿರರ್‌ ಡೆಸ್ಕ್
ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ
June 5, 2026
8:20 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror