ಮಣ್ಣು ಕುಸಿತ ತಡೆಗೆ ಹಸಿರು ಹೊದಿಕೆ |ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಐಡಿಯಾ |

June 13, 2024
2:01 PM

ಮಣ್ಣು ಸವಕಳಿ(Soil Erosion) ಬಗ್ಗೆ ಎಲ್ಲರೂ ಶಾಲಾ ಪಠ್ಯ ಪುಸ್ತಕದಲ್ಲಿ ಓದಿರುತ್ತೀರಿ. ಇದನ್ನು ತಡೆಯಲು ಮರಗಳನ್ನು ನೆಡಬೇಕು(Planting trees) ಹಾಗೆ ಹುಲ್ಲುಗಾವಲನ್ನು(Grass land) ಸೃಷ್ಠಿಸಿದರೆ ಮಣ್ಣಿನ ಸವಕಳಿ ನಿಲ್ಲುತ್ತದೆ ಎನ್ನುವ ಬಗ್ಗೆ ಕೇಳಿದ್ದೇವೆ. ಅದೇ ರೀತಿ ನಮ್ಮ ಹಿರಿಯರು ಅದನ್ನು ಅನುಸರಿಸ್ತಿದ್ರು ಕೂಡ. ಆದರೆ ಆಧುನಿಕತೆ(Modernization) ಹೊಕ್ಕಂತೆ ಹುಲ್ಲು ನೆಡುವ ಬದಲು ಕಾಂಕ್ರೀಟೀಕರಕ್ಕೆ ಹೆಚ್ಚು ಒತ್ತು ನೀಡಲಾಯ್ತು. ಆದರೆ ಸಿಕ್ಕ ಫಲಿತಾಂಶ ಶೂನ್ಯ. ಆದರೆ ಈಗ ಮತ್ತೆ ಮರಳಿ ಅದೇ ಹಳೇ ಕ್ರಮಕ್ಕೆ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHDA) ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿ ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅದಕ್ಕೆ ಹಸಿರು ಹೊದಿಕೆಹಾಕಲು  ಕಾಮಗಾರಿ ಪಡೆದುಕೊಂಡ ಗುತ್ತಿಗೆ ಸಂಸ್ಥೆಗಳ ಮೂಲಕ ಹಸಿರು ಹುಲ್ಲು(Green grass) ನೆಡುವ ಕೆಲಸ ಮಾಡಿಸುತ್ತಿದೆ.

ಈಗಾಗಲೇ ಬಿ.ಸಿ.ರೋಡ್​ನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆವರೆಗೆ ಹಾಕಲಾದ ಮಣ್ಣು ಜರಿಯುವುದನ್ನು ತಡೆಯಲು ಹೆದ್ದಾರಿಯ ಇಕ್ಕೆಲಗಳಲ್ಲಿ ಹಸಿರು ಹುಲ್ಲು ನೆಡುವ ಕಾರ್ಯವನ್ನು ನಡೆಸಲಾಗಿದೆ. ಬಿ.ಸಿ.ರೋಡ್​ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಯ ಹಲವೆಡೆ ಮಣ್ಣು ತುಂಬಿಸಿ ರಸ್ತೆ ಎತ್ತರಗೊಳಿಸಲಾಗಿದ್ದರೆ, ಕೆಲವೆಡೆ ಗುಡ್ಡ ಅಗೆದು, ರಸ್ತೆ ಅಗಲಗೊಳಿಸಲಾಗಿತ್ತು.

 ಮಳೆಗಾಲ ಆರಂಭಗೊಂಡು ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಲಾದ ಕಡೆಗಳಲ್ಲಿ ಮಣ್ಣು ಸಡಿಲಗೊಂಡು, ಜರಿಯುವ ಸಾಧ್ಯತೆ ಇದೆ. ಈ ಸಂದರ್ಭ ರಸ್ತೆ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹೊಸದಾಗಿ ಮಣ್ಣು ತುಂಬಿಸಿ, ರಸ್ತೆ ನಿರ್ಮಿಸಲಾಗಿದ್ದು, ರೋಲರ್ ಹಾಕಿ ಮಣ್ಣನ್ನು ಹದ ಮಾಡಿ ಕೂರಿಸಲಾಗಿದೆ. ಇಲ್ಲಿನ ಅತಿಯಾದ ಮಳೆಗೆ ಹೊದಿಕೆಯೊಳಗಿನಿಂದ ಮಣ್ಣು ಜರಿಯಲು ಆರಂಭವಾದರೆ, ನಿಲ್ಲುವುದು ಕಷ್ಟ ಎಂಬ ಅಭಿಪ್ರಾಯ ಸ್ಥಳೀಯರದ್ದು. ಕಲ್ಲು ಕಟ್ಟಿದರಷ್ಟೇ ಈ ಭಾಗದಲ್ಲಿ ಬಾಳಿಕೆ ಬರುತ್ತದೆ ಎಂಬ ಮಾತುಗಳಿವೆ.

ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ಇಕ್ಕೆಲಗಳಲ್ಲೂ ಹುಲ್ಲು ನೆಡುವ ಕಾರ್ಯವನ್ನು ತಮಿಳುನಾಡಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿ ನೀಡಿದೆ. ತೆಂಗಿನ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಕಿ, ಲಾವಂಚವನ್ನು ನಾಟಿ ಮಾಡಲಾಗುತ್ತಿದೆ. ಹುಲ್ಲು ಬೆಳೆದು ಮಣ್ಣಿನ ರಕ್ಷಣೆ ಮಾಡಲು ಒಂದು ವರ್ಷವಾದರೂ ಬೇಕು. ಆದರೆ ಮಣ್ಣು ಮಳೆನೀರಿಗೆ ಕೊಚ್ಚಿಕೊಂಡು ಹೋಗದಂತೆ ರಕ್ಷಣೆ ನೀಡಲು, ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಸಲಾಗಿದೆ. ಅದರ ಮೇಲೆ ನೆಡುವ ಹುಲ್ಲು ಒಂದು ವರ್ಷದ ಬಳಿಕ ಶಕ್ತಿಶಾಲಿಯಾಗಿ ಮಣ್ಣು ಕರಗದಂತೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್‌ ಶಿಪ್‌ ಗೆ ಸಜ್ಜು – ಆಗಸ್ಟ್ 2 ರಿಂದ 8 ರವರೆಗೆ ದೇಶದ 600ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
July 25, 2026
7:44 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
July 24, 2026
9:05 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror