ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾದಂತಹ ಹಸಿರು ಕಪ್ಪೆಗಳು ಪತ್ತೆಯಾಗಿವೆ. ಮಲೆನಾಡಿನಲ್ಲಿ ಮೇ-ಜೂನ್ ತಿಂಗಳಿನ ಮಳೆಗಾಲದಲ್ಲಿ ಮಾತ್ರ ಈ ಹಸಿರು ಕಪ್ಪೆಗಳು ಕಾಣಸಿಗುತ್ತವೆ. ಇದು ತೇವಾಂಶ ಅಧಿಕವಾಗಿರುವ ಮಳೆಕಾಡಿನಲ್ಲಿ ಕಾಣಸಿಗುವ ಕಪ್ಪೆಯ ಒಂದು ಪ್ರಭೇದವಾಗಿದೆ.
ಮಲೆನಾಡಿನಲ್ಲಿ ಪ್ರಾರಂಭದ ಮಳೆ ಬಿದ್ದಾಗ ಹಸಿರು ಕಪ್ಪೆಗಳ ಚಟುವಟಿಕೆಗಳು ನೀರು ಇರುವ ಜಾಗದಲ್ಲಿ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಕಾಣ ಸಿಗುವುದಿಲ್ಲ. ತಂಪಾದ ಜಾಗದಲ್ಲಿ ಹೋಗಿ ಮರ – ಗಿಡಗಳ ಸಂಧಿಯಲ್ಲಿ ವಾಸಿಸುತ್ತವೆ. ಮೊದಲ ಮಳೆ ಪ್ರಾರಂಭವಾಗುತ್ತಿದ್ದ ಹಾಗೆ ನೀರಿರುವ ಜಾಗದಲ್ಲಿ ಬಂದು ಸಂತಾನೋತ್ಪತ್ತಿಗಾಗಿ ಸೇರುವುದು ವಿಶೇಷವಾಗಿದೆ.
ಈ ಹಸಿರು ಕಪ್ಪೆಯ ಇನ್ನೊಂದು ವಿಶೇಷ ಏನೆಂದರೆ, ಮಿಲನ ಪ್ರಕ್ರಿಯೆ ಇಲ್ಲದೇ ಬಾಹ್ಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಜರಗುವ ಅಪರೂಪದ ಸಂಗತಿ ಘಟಿಸುತ್ತದೆ. ನೀರು ಇರುವ ಜಾಗವನ್ನು ಆಯ್ಕೆ ಮಾಡಿ ತನ್ನ ಮೊಟ್ಟೆಯನ್ನ ನೊರೆ ರೂಪದಲ್ಲಿ ಗೂಡು ಇಡುತ್ತದೆ. ನಂತರದ ದಿನಗಳಲ್ಲಿ ಅದು ಕರಗಿ ನೀರಿಗೆ ಬಿದ್ದು ಅಲ್ಲಿ ಮರಿಗಳಾಗುವುದು ವಿಶೇಷ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…