ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾದಂತಹ ಹಸಿರು ಕಪ್ಪೆಗಳು ಪತ್ತೆಯಾಗಿವೆ. ಮಲೆನಾಡಿನಲ್ಲಿ ಮೇ-ಜೂನ್ ತಿಂಗಳಿನ ಮಳೆಗಾಲದಲ್ಲಿ ಮಾತ್ರ ಈ ಹಸಿರು ಕಪ್ಪೆಗಳು ಕಾಣಸಿಗುತ್ತವೆ. ಇದು ತೇವಾಂಶ ಅಧಿಕವಾಗಿರುವ ಮಳೆಕಾಡಿನಲ್ಲಿ ಕಾಣಸಿಗುವ ಕಪ್ಪೆಯ ಒಂದು ಪ್ರಭೇದವಾಗಿದೆ.
ಮಲೆನಾಡಿನಲ್ಲಿ ಪ್ರಾರಂಭದ ಮಳೆ ಬಿದ್ದಾಗ ಹಸಿರು ಕಪ್ಪೆಗಳ ಚಟುವಟಿಕೆಗಳು ನೀರು ಇರುವ ಜಾಗದಲ್ಲಿ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಕಾಣ ಸಿಗುವುದಿಲ್ಲ. ತಂಪಾದ ಜಾಗದಲ್ಲಿ ಹೋಗಿ ಮರ – ಗಿಡಗಳ ಸಂಧಿಯಲ್ಲಿ ವಾಸಿಸುತ್ತವೆ. ಮೊದಲ ಮಳೆ ಪ್ರಾರಂಭವಾಗುತ್ತಿದ್ದ ಹಾಗೆ ನೀರಿರುವ ಜಾಗದಲ್ಲಿ ಬಂದು ಸಂತಾನೋತ್ಪತ್ತಿಗಾಗಿ ಸೇರುವುದು ವಿಶೇಷವಾಗಿದೆ.
ಈ ಹಸಿರು ಕಪ್ಪೆಯ ಇನ್ನೊಂದು ವಿಶೇಷ ಏನೆಂದರೆ, ಮಿಲನ ಪ್ರಕ್ರಿಯೆ ಇಲ್ಲದೇ ಬಾಹ್ಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಜರಗುವ ಅಪರೂಪದ ಸಂಗತಿ ಘಟಿಸುತ್ತದೆ. ನೀರು ಇರುವ ಜಾಗವನ್ನು ಆಯ್ಕೆ ಮಾಡಿ ತನ್ನ ಮೊಟ್ಟೆಯನ್ನ ನೊರೆ ರೂಪದಲ್ಲಿ ಗೂಡು ಇಡುತ್ತದೆ. ನಂತರದ ದಿನಗಳಲ್ಲಿ ಅದು ಕರಗಿ ನೀರಿಗೆ ಬಿದ್ದು ಅಲ್ಲಿ ಮರಿಗಳಾಗುವುದು ವಿಶೇಷ.
ಆಗಸ್ಟ್ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್…
ಮ್ಯಾನ್ಮಾರ್ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…
ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…