MIRROR FOCUS

#ArecanutCrop | ಅಡಿಕೆ‌ ಬೆಳೆ ರೋಗದಿಂದ ಸಂಕಷ್ಟದಲ್ಲಿ ಬೆಳೆಗಾರರು | ಜಮೀನು ಮಾರಿ ಊರು ಬಿಡುತ್ತಿರುವ ಜನ..! | ರೈತರೇ ಪರ್ಯಾಯ ಬೆಳೆಯ ಕಡೆಗೆ ಗಮನಿಸಿ… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಬೆಲೆ #ArecanutPrice ಅದೆಷ್ಟೇ ಏರಿಕೆ ಆದರೂ ಅಡಿಕೆ ಬೆಳೆಯುವ ನಾಡಿನ ರೈತರ ಬದುಕು ಕೆಲವು ಕಡೆ ಸಂಕಷ್ಟದಲ್ಲೇ ಇದೆ. ರೇಟು ಜಾಸ್ತಿಯಾಯ್ತು ಅನ್ನೋ ಖುಷಿಗಿಂತ, ಅಡಿಕೆ ಬೆಳೆಗೆ ಕಾಣಿಸಿಕೊಳ್ಳುವ ವಿವಿಧ ರೋಗಗಳದ್ದೇ ಚಿಂತೆ ಹೆಚ್ಚು. ಹಳದಿ ರೋಗ, ಎಲೆ ಚುಕ್ಕಿ ರೋಗ, ಬೇರು ಹುಳ ರೋಗ, ಕಾಂಡ ಕೊರಕ, ಸಿಂಗಾರ ರೋಗ, ನಳ್ಳಿ ಬಿಳೋದು.. ಹೀಗೆ ಒಂದಾ.. ಎರಡಾ..? ಬೆಳೆ ಕೈಗೆ ಬರುವಷ್ಟಕ್ಕೆ ಅರ್ಧಕ್ಕಿಂತ ಕಡಿಮೆ ಉಳಿದರೆ ಹೆಚ್ಚು. ಅದರಲ್ಲೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಳದಿ ರೋಗ, ಎಲೆಚುಕ್ಕಿ ರೋಗ ಅಡಿಕೆ ಬೆಳೆಗಾರರ ಬದುಕನ್ನು ಅತಂತ್ರ ಮಾಡಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಳದಿ ರೋಗ ಎಲೆಚುಕ್ಕಿ ರೋಗಕ್ಕೆ ಅಡಿಕೆ ಬೆಳೆ ನಾಶವಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ.. ಹುಟ್ಟಿ ಬೆಳೆದ ಊರಿನ ಮನೆ, ಅಡಿಕೆ ತೋಟ ಮಾರಿ ಅಡಿಕೆ ಬೆಳೆಗಾರರು ಊರು ಬಿಡುತ್ತಿದ್ದಾರೆ.

Advertisement
Advertisement

ಅಡಿಕೆ ಬೆಳಗೆ ನಿರಂತರವಾಗಿ ಎಲೆಚುಕ್ಕಿ ರೋಗದ ಜೊತೆಗೆ ಹಳದಿ‌ರೋಗ ಹೆಚ್ಚಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ,ಎನ್‌ ಆರ್ ಪುರ ಭಾಗದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಣ್ಣ ಮುಂದೆಯೇ ಅಡಿಕೆ ಮರಗಳು ನಾಶವಾಗುತ್ತಿದ್ದರೂ ಅಡಿಕೆ ಮರಗಳನ್ನ ರಕ್ಷಿಸಿಕೊಳ್ಳಲು ಯಾವುದೇ ಔಷಧಿಗಳಿಲ್ಲದೆ ಕೈ ಚೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಊರುಗಳನ್ನ ಬಿಡುತ್ತಿದ್ದು, ಮನೆ ಅಡಿಕೆ ತೋಟವನ್ನ ಮಾರಿ ಪಟ್ಟಣ ಸೇರಿ ಕೆಲಸ ಮಾಡುತ್ತಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲಿ ಊರು ಬಿಟ್ಟ ಒಂದೇ ಗ್ರಾಮದ‌ 18 ಕುಟುಂಬ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಿನ ಕೊಡಿಗೆ ಗ್ರಾಮದ ಅಡಿಕೆ ಬೆಳೆಗಾರರು ಒಬ್ಬರೇ ಊರು ಬಿಡುವ ಸ್ಥಿತಿ ತಲುಪಿದೆ. ಬೆಳವಿನಕೊಡಿಗೆ ಗ್ರಾಮದಲ್ಲಿದ್ದ 40 ಮನೆಗಳ ಪೈಕಿ 18 ಕುಟುಂಬಗಳು ಅಡಿಕೆ ತೋಟ ಮನೆಯನ್ನ ಮಾರಿ ಪಟ್ಟಣ ಸೇರಿದ್ದಾರೆ . ಅಡಿಕೆ ಬೆಳೆಗೆ ಹೆಚ್ಚಾದ ಹಳದಿ, ಎಲೆಚುಕ್ಕಿ ರೋಗದಿಂದ ಬೆಳೆ ನಾಶವಾಗಿ ಬೆಳೆಗಾರರು ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನೆ ಅಡಿಕೆ ತೋಟವನ್ನ ಮಾರಿ ಊರು ಬಿಟ್ಟು ಪಟ್ಟಣ ಸೇರುತ್ತಿರುವ  ಅಂಶ ಮಲೆನಾಡಿನಲ್ಲಿ ಬೆಳಕಿಗೆ ಬಂದಿದೆ

ಅಡಿಕೆ ಬೆಳೆಗಾರರು ಕಂಗಾಲು : ವರ್ಷದಿಂದ ವರ್ಷಕ್ಕೆ ವಾಣಿಜ್ಯ ಬೆಳೆ ಅಡಿಕೆಗೆ ಹಳದಿ ರೋಗ ,ಎಲೆಚುಕ್ಕಿ ರೋಗ ಹೆಚ್ಚಾಗಿದ್ದು ಅಡಿಕೆ ಬೆಳೆ ಮಲೆನಾಡು ಭಾಗದಲ್ಲಿ ನಾಶವಾಗುತ್ತಿದೆ.  ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ ಎಲೆಚುಕ್ಕಿ ರೋಗ ನಿಯಂತ್ರಿಸುವ ಔಷಧಿಗಳೂ ಇಲ್ಲವಾಗಿದೆ.  ಇದೀಗ ಅಡಿಕೆ ರೋಗ ಹೆಚ್ಚುತ್ತಿದ್ದು ಅಡಿಕೆ ಬೆಳೆಗಾರರು ಕಂಗಲಾಗಿದ್ದಾರೆ.

Advertisement

ಮಲೆನಾಡಿನಲ್ಲಿ ಹೆಚ್ಚಿದ ಲ್ಯಾಂಡ್ ಮಾಫಿಯಾ: ಸಂಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರ ಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ಲ್ಯಾಂಡ್‌ ಮಾಫಿಯಾ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ಅಡಿಕೆ ತೋಟ ಖರೀದಿ ಮಾಡಿ ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳಿಗೆ ಮಾರಾಟ ಮಾಡುತ್ತಿವೆ. ಮೊದಲೇ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರು ಕಡಿಮೆ ಬೆಲೆಗೆ ಅಡಿಕೆ ತೋಟ, ಮನೆ ಮಾರಾಟ ಮಾಡಿ ಪಟ್ಟಣ ಸೇರುತ್ತಿದ್ದಾರೆ.

ರೈತರೇ ಪರ್ಯಾಯ ಬೆಳೆಯ ಕಡೆಗೆ ಗಮನಿಸಿ : ಅಡಿಕೆ ಆರ್ಥಿಕ ಬೆಳೆ. ಹೀಗಾಗಿ ಅಡಿಕೆಗೆ ಪರ್ಯಾಯ ಬೆಳೆ ಇನ್ನೊಂದಿಲ್ಲ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರು ತಕ್ಷಣಕ್ಕೆ ಪರ್ಯಾಯ ಬೆಳೆಯತ್ತ ಹೆಜ್ಜೆ ಇಡಲೇಬೇಕಿದೆ. ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಸ್ಥಿತಿಗೆ ಅಡಿಕೆ ಬೆಳೆಗಾರರು ಬರಬೇಕಾಗಿಲ್ಲ. ಅಡಿಕೆಯ ಬಗ್ಗೆ ವಿವಿಧ ಅಧ್ಯಯನ ನಡೆಯುತ್ತಿದೆ. ಅದುವರೆಗೂ ತಕ್ಷಣಕ್ಕೆ ಪರ್ಯಾಯ ಬೆಳೆಯತ್ತ ಅಡಿಕೆ ಬೆಳೆಗಾರರು ಮನಸ್ಸು ಮಾಡಬೇಕಿದೆ.

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?

ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…

1 hour ago

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

16 hours ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

1 day ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

1 day ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

1 day ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

2 days ago