Advertisement
MIRROR FOCUS

ಅಡಿಕೆ ಆಮದು ಪ್ರಕರಣ | ತೆರಿಗೆ ವಂಚನೆಗೆ ನಕಲಿ ಬಿಲ್ ಸೃಷ್ಟಿಸಿದ ಆರೋಪ | ಐವರು ಉದ್ಯಮಿಗಳ ವಿರುದ್ಧ ಪ್ರಕರಣ ದಾಖಲು |

Share

ಮುಂದ್ರಾ ಬಂದರು ಮೂಲಕ ತೆರಿಗೆ ತಪ್ಪಿಸಿ, ನಕಲಿ ಬಿಲ್‌ ಸೃಷ್ಟಿಸಿ ಅಡಿಕೆ ಆಮದು ಮಾಡುತ್ತಿದ್ದ ಪ್ರಕರಣವನ್ನು ಡಿಆರ್‌ಐ  ಪತ್ತೆಮಾಡಿತ್ತು. ಇದೀಗ ನಕಲಿ ಬಿಲ್‌ ಸೃಷ್ಟಿಸಿದ ಐವರು ಉದ್ಯಮಿಗಳ ವಿರುದ್ಧ ಗುಜರಾತ್‌ನ ಕಚ್ ವೆಸ್ಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಮೂಲದ ಉದ್ಯಮಿ ಅನಿಲ್ ಪಂಡಿತ್ ಮತ್ತು ಇತರ ಐವರ ವಿರುದ್ಧ  21.48 ಕೋಟಿ ರೂಪಾಯಿ ಮೌಲ್ಯದ ಆಮದು ಮಾಡಿದ ಅಡಿಕೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

Advertisement
Advertisement

ಆರೋಪಿಗಳು ಅಡಿಕೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡು , ಸರಕನ್ನು ಅಡಿಕೆಯ ಬದಲಾಗಿ ಸುಳ್ಳು  ಘೋಷಿಸುವ ಮೂಲಕ ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದ್ದರು. ಇದೀಗ  21.48 ಕೋಟಿ ರೂಪಾಯಿ ಮೌಲ್ಯದ ಆಮದು ಮಾಡಿದ ಅಡಿಕೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ  ಸರಿಯಾದ ದಾಖಲೆಗಳಿಲ್ಲದೆ ಗೋಡೌನ್‌ನಲ್ಲಿ ಸರಕುಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಮುಂದ್ರಾದಲ್ಲಿರುವ  ಗೋಡೌನ್‌ಗೆ ಸೀಲ್‌ ಪೊಲೀಸರು ಸೀಲ್‌ ಮಾಡಿದ್ದಾರೆ.

Advertisement

ಮುಂಬೈ ಮೂಲದ ಉದ್ಯಮಿ ಅನಿಲ್ ಪಂಡಿತ್ ಹಾಗೂ ವ್ಯಾಪಾರ ಪಾಲುದಾರರಾದ ದಿನೇಶ್  ಮತ್ತು ಸುರೇಖಾ ಶೇಠ್  ಮೋಹಿತ್ ಎಂಟರ್‌ಪ್ರೈಸ್‌ನ ಮಾಲಕ ನಾಗಪುರದ ಉದ್ಯಮಿ ಮೋಹಿತ್ , ನಾಗ್ಪುರದ ಹಿಮಾಂಶು ಭಾನುಶಾಲಿ ಮತ್ತು ಮೋಹಿತ್ ಎಂಟರ್‌ಪ್ರೈಸಸ್‌ನ ಮುಂಬೈನ ಮೆಹುಲ್ ಭಾನುಶಾಲಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಫೆಬ್ರವರಿ 2023 ಮತ್ತು ಸೆಪ್ಟೆಂಬರ್ 2023 ರ ನಡುವೆ ಮೋಹಿತ್ ಎಂಟರ್‌ಪ್ರೈಸ್ ತೆರಿಗೆ ಮತ್ತು ಇ-ವೇ ಬಿಲ್‌ಗಳನ್ನು ನಕಲಿ ಮಾಡುವ ಮೂಲಕ ರೂ 21.48 ಕೋಟಿ ಮೌಲ್ಯದ ಅಡಿಕೆಗಳನ್ನು ಮಾರಾಟ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಇತರ ದೇಶಗಳಿಂದ ಅಡಿಕೆಯನ್ನು ಆಮದು ಮಾಡಿ ನಂತರ ಅದನ್ನು ಅನಿಲ್ ಪಂಡಿತ್ ಅವರ ಮುಂದ್ರಾ ಗೋಡೌನ್‌ನಲ್ಲಿ ಸಂಗ್ರಹಿಸುತ್ತಿದ್ದರು. ಹಣವನ್ನು ಗಳಿಸುವ ಉದ್ದೇಶದಿಂದ, ಅವರು ಅದನ್ನು ದೆಹಲಿ, ನಾಗ್ಪುರ ಇತ್ಯಾದಿಗಳಿಗೆ ಕಳುಹಿಸಿ ಮಾರಾಟ ಮಾಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಇದೀಗ ತನಿಖೆ ನಡೆಯುತ್ತಿದೆ. ಬೃಹತ್‌ ಪ್ರಮಾಣದಲ್ಲಿ ಅಡಿಕೆ ಆಮದು ತಡೆಗೆ ಇದೀಗ ಕ್ರಮವಾಗುತ್ತಿದೆ.

Advertisement
DRI had detected a case of importing arecanuts through Mundra port by evading taxes and creating fake bills. Now the Kutch West Police of Gujarat have registered a case against five businessmen who created fake bills.

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

21 hours ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

22 hours ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

22 hours ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

22 hours ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

2 days ago