#GulabCyclone | ಗುಜರಾತ್ ತೀರದಲ್ಲೂ ವಾಯುಭಾರ ಕುಸಿತ | ಅಪ್ಪಳಿಸುತ್ತಿದೆ “ಗುಲಾಬ್‌” ಚಂಡಮಾರುತ |

September 26, 2021
10:37 AM

“ಗುಲಾಬ್” ಚಂಡಮಾರುತ ಇಂದು ಸಂಜೆ ಅಥವಾ ರಾತ್ರಿ ಒಡಿಶಾದ ಭುವನೇಶ್ವರ ಹಾಗೂ ಆಂಧ್ರ ಕರಾವಳಿಯ ವಿಶಾಖಪಟ್ಟಣ ಮೂಲಕ ಭೂಭಾಗಕ್ಕೆ ಪ್ರವೇಶಿಸುವ ಚಂಡಮಾರುತವು, ಛತ್ತೀಸಗಡ, ಮಹಾರಾಷ್ಟ್ರ ಹಾಗೂ ಗುಜರಾತ್ ಭಾಗಗಳಲ್ಲಿ ಸಂಚರಿಸಿ ಸೆ.30 ರ ಮಧ್ಯಾಹ್ನ  ಅರಬ್ಬಿ ಸಮುದ್ರ ಪ್ರವೇಶಿಸಲಿದೆ.
ಈಗಾಗಲೇ ಗುಜರಾತ್ ತೀರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಉಂಟಾಗಿದೆ. ಸದ್ಯ ಚಂಡಮಾರುತವು ಗೋಪಾಲ್‌ ಪುರದಿಂದ 270 ಕಿಮೀ ದೂರದಲ್ಲಿ  ಹಾಗೂ ಕಳಿಂಗಪಟ್ಟಣದಿಂದ 330 ಕಿಮೀ ದೂರದಲ್ಲಿ  ಚಂಡಮಾರುತದ ಪ್ರಭಾವ ಕಂಡುಬಂದಿದೆ.

ಈಗಾಗಲೇ ಗುಜರಾತ್ ತೀರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಉಂಟಾದ ಕಾರಣ ” ಗುಲಾಬ್” ನ ಪರಿಣಾಮ ಕರ್ನಾಟಕ ಮೇಲೆ ಅಷ್ಟೇನು ಇಲ್ಲದಿದ್ದರೂ, ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಅನಾಹುತ ಸೃಷ್ಟಿಸುವ ಮುನ್ಸೂಚನೆ ಇದೆ.

ಸೆ. 29 ರಿಂದ  ಇದರ ಪ್ರಭಾವ ಕ್ಷೀಣಿಸುತ್ತಿದ್ದು. ಸೆ.30 ನೇ ತಾರೀಕಿನಂದು ಆಂಧ್ರ ಹಾಗೂ ತಮಿಳುನಾಡು ನೇರಕ್ಕೆ ಬಂಗಾಳಕೂಲ್ಲಿಯಲ್ಲಿ ಬೃಹತ್ ಚಂಡಮಾರುತ ತಿರುಗುವಿಕೆ (Cyclonic Circulation) ಉಂಟಾಗುವ ಲಕ್ಷಣಗಳಿರುವುದರಿಂದ ಅ.1 ತಾರೀಕಿನಿಂದ ಕಾಸರಗೋಡು ಹಾಗೂ ಕರ್ನಾಟಕ ಕರಾವಳಿ ಭಾಗಗಳೂ ಸೇರಿದಂತೆ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.

This is box title

27.9.2021ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ :

ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.

ರಾಯಚೂರು, ವಿಜಾಪುರ, ಯಾದಗಿರಿ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಆಗಾಗ ಸ್ವಲ್ಪ ಮೋಡದ ವಾತಾವರಣದ ಮುನ್ಸೂಚನೆ ಇದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ
ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?
September 2, 2026
10:52 PM
by: ದ ರೂರಲ್ ಮಿರರ್.ಕಾಂ
ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ
September 2, 2026
7:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ
September 2, 2026
2:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror