ಚುನಾವಣೆಯ ಹೆಸರಿನಲ್ಲಿ ಕೃಷಿಕರ ಕೋವಿ ಠೇವಣಾತಿ | ವಿಶೇಷ ಸಭೆ ಸೇರಿ ವಿನಾಯಿತಿ ನೀಡಿದ ಸ್ಕ್ರೀನಿಂಗ್‌ ಕಮಿಟಿ…! |

April 3, 2024
7:30 PM
ಚುನಾವಣೆಯ ನೆಪದಲ್ಲಿ ಯಾವುದೇ ಕ್ರಮಿನಲ್‌ ಹಿನ್ನೆಲೆ ಇಲ್ಲದ ಕೃಷಿಕರು, ತಮ್ಮ ಬೆಳೆ ರಕ್ಷಣೆಗಾಗಿ ಪರವಾನಿಗೆ ಪಡೆದು ಹೊಂದಿರುವ ಕೋವಿಯನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಾತಿ ಇಡುವ ಕ್ರಮ ನಿಲ್ಲಬೇಕು. ಇದೀಗ ನ್ಯಾಯಾಲಯದ ಮೆಟ್ಟಿಲೇರಿದ ಕೃಷಿಕರಿಗೆ ಈ ಅವಕಾಶ ಲಭಿಸಿದೆ.

ಚುನಾವಣೆಯ ಸಂದರ್ಭ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ವಿವಿಧ ಕ್ರಮಗಳನ್ನು ಚುನಾವಣಾ ಆಯೋಗ ಜಾರಿಗೊಳಿಸುತ್ತದೆ. ಅದರಲ್ಲಿ  ಕೃಷಿ ರಕ್ಷಣೆಗೆ ಪರವಾನಿಗೆಯನ್ನು ಪಡೆದ ಕೋವಿಯನ್ನು ಠಾಣೆಗಳಲ್ಲಿ ಕೃಷಿಕರು ಠೇವಣಾತಿ ಇಡುವ ಪ್ರಕ್ರಿಯೆಯೂ ಒಂದು. ಆದರೆ ಕೃಷಿ ರಕ್ಷಣೆಗೆಂದು ಹೊಂದಿರುವ ಕೋವಿಯನ್ನು ಠೇವಣಾತಿ ಇಡುವುದು ಸ್ಥಗಿತಗೊಳ್ಳಬೇಕು ಎನ್ನುವ ಬೇಡಿಕೆಯ ನಡುವೆ ನ್ಯಾಯಾಲಯ ಮೆಟ್ಟಿಲೇರಿದ್ದ ಕೃಷಿಕರ ಕೋವಿ ಠೇವಣಾತಿಗೆ ಈ ಬಾರಿ ವಿನಾಯಿತಿ ಸಿಕ್ಕಿದೆ. ಇದಕ್ಕಾಗಿ ಸ್ಕ್ರೀನಿಂಗ್‌ ಕಮಿಟಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದು, ಸಂಬಂಧಿತ ಕೃಷಿಕರಿಗೆ ಆದೇಶವನ್ನೂ ಕಳುಹಿಸಿದೆ.

Advertisement
Advertisement

ಚುನಾವಣೆಯ ಸಂದರ್ಭ ಕೃಷಿಕರ ಕೋವಿಯನ್ನು ಠೇವಣಾತಿ ಇಡುವ ಪ್ರಕ್ರಿಯೆ ಸ್ಥಗಿತಗೊಳ್ಳಬೇಕು, ಯಾವುದೇ ಕ್ರಮಿನಲ್‌ ಹಿನ್ನೆಲೆ ಇಲ್ಲದ ಕೃಷಿಕರು ಕೂಡಾ ಕೋವಿಯನ್ನು ಹಣ ಪಾವತಿ ಮಾಡಿ ಡಿಪಾಸಿಟ್‌ ಮಾಡಬೇಕಾದ ಸ್ಥಿತಿ ಹಲವು ಸಮಯಗಳಿಂದ ಇದೆ. ಕಳೆದ ಮೂರು ವರ್ಷಗಳಿಂದ ಅಂದರೆ ಮೂರು ಚುನಾವಣೆಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಈ ಬಗ್ಗೆ ಕೃಷಿಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಂದರ್ಭ ಸ್ಕ್ರೀನಿಂಟ್‌ ಕಮಿಟಿ ರಚನೆ ಮಾಡಿ ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬೇಕು ಎಂದು ಮಾನ್ಯ ಹೈಕೋರ್ಟ್‌ ನಿರ್ದೇಶನ ನೀಡಿತ್ತು.  ಚುನಾವಣೆ ಘೋಷಣೆಯಾಗುವ ಜೊತೆಗೇ ಕಮಿಟಿ ರಚನೆಯಾಗಬೇಕು, ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.

Advertisement

ಈ ಬಾರಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸ್ಕ್ರೀನಿಂಗ್‌ ಕಟಿಮಿ ರಚನೆಯಾಗಿತ್ತು. ಈ ಸಮಿತಿ ಅರ್ಜಿ ಸಲ್ಲಿಸಿದ ಬಹುತೇಕ ಎಲ್ಲಾ ಕೃಷಿಕರದೂ ಅರ್ಜಿ ತಿರಸ್ಕಾರಗೊಂಡು ಎಲ್ಲಾ ಕೃಷಿಕರೂ ಕೋವಿ ಠೇವಣಾತಿ ಇಡಬೇಕು ಎಂದು ಸೂಚನೆ ನೀಡಿತ್ತು. ಇದಕ್ಕೆ ಕಾರಣ ನೀಡಿದ ಸ್ಕ್ರೀನಿಂಗ್‌ ಕಮಿಟಿಯು, ಈಗ ಯಾವುದೇ ಕೃಷಿಗೆ ಮಂಗಗಳು ಹಾನಿ ಮಾಡುವುದಿಲ್ಲ, ಇದರಿಂದ ಸಮಸ್ಯೆಯೂ ಇಲ್ಲ ಎಂದು ಹೇಳಿತ್ತು.

ಈ ಬಗ್ಗೆ ಕೃಷಿಕರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಂಟ್ವಾಳದ ಗೋವಿಂದ ಭಟ್‌ ಮಾಣಿಮೂಲೆ ಹಾಗೂ ಬೆಳ್ಳಾರೆಯ ಜಯಪ್ರಸಾದ್‌ ಜೋಶಿ, ಪುರುಷೋತ್ತಮ ಮಲ್ಕಜೆ ಹಾಗೂ ಗಿರಿಜಾ ಶಂಕರ್‌ ಮತ್ತುಸುದರ್ಶನ್‌ ಕುಮಾರ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಒಟ್ಟು ಒಂಭತ್ತು ಮಂದಿ ಕೃಷಿಕರು ಜೊತೆಯಾಗಿದ್ದರು. ಈ ಅರ್ಜಿ ವಿಚಾರಣೆ ನಡೆದಿದ್ದು, ಎರಡು ದಿನದಲ್ಲಿ ತೀರ್ಪು ಪ್ರಕಟವಾಗಲಿದೆ.

Advertisement

ಈ ನಡುವೆ ಸ್ಕ್ರೀನಿಂಗ್‌ ಕಮಿಟಿ ಸಭೆ ಸೇರಿ ತಕ್ಷಣವೇ ನ್ಯಾಯಾಲಯದ ಮೊರೆ ಹೋದ ಕೃಷಿಕರಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿ ಆದೇಶ ನೀಡಿದೆ. ಕೃಷಿ ರಕ್ಷಣೆ, ಕಾಡು ಪ್ರಾಣಿಗಳ ಹಾವಳಿ ಇದೆ ಎಂದು ಕೃಷಿಕರು ತಿಳಿಸಿದ್ದು, ಕೃಷಿಕರು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲದೇ ಇರುವುದರಿಂದ ಹಾಗೂ ಕೃಷಿ ಭೂಮಿಯು ತೀರಾ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಸ್ಕ್ರೀನಿಂಗ್‌ ಕಮಿಟಿಯು ಕೋವಿ ಠೇವಣಾತಿ ಇರಿಸುವುದನ್ನು ವಿನಾಯಿತಿ ನೀಡಿದೆ ಎಂದು ಆದೇಶಿಸಿದೆ.ನ್ಯಾಯಾಲಯದ ತೀರ್ಪು ಎರಡು ದಿನದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಮೊನ್ನೆ ಇದೇ ಸ್ಕ್ರೀನಿಂಗ್‌ ಕಮಿಟಿ ಕೃಷಿಕರ ವಾಸ್ತವ ಸ್ಥಿತಿಯನ್ನು ಅರಿಯದೇ ಈಗ ಕೃಷಿಗೆ ಯಾವುದೇ ಕಾಡು ಪ್ರಾಣಿಯ ಹಾವಳಿ ಇಲ್ಲ ಎಂದು ಹೇಳಿತ್ತು.

ಚುನಾವಣಾ ಕಣದಲ್ಲಿ ರೈತ ದೇಶದ ಬೆನ್ನೆಲುಬು…? ಎರಡನೇ ದರ್ಜೆಯ ನಾಗರಿಕನೋ…? ವಿಶ್ವಾಸಕ್ಕೆ ಅಯೋಗ್ಯನಾ…? | ಚುನಾವಣೆ ಬಹಿಷ್ಕಾರದ ಚರ್ಚೆ ನಡೆಸುತ್ತಿರುವ ಕೃಷಿಕರು |

Advertisement

 

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |
April 29, 2024
3:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror