ಸುದ್ದಿಗಳು

ಕೋವಿ ಠೇವಣಾತಿ ಸಮಸ್ಯೆ | ಹೈಕೋರ್ಟ್‌ ಮೊರೆ ಹೋದ ಕೃಷಿಕರು | ಕೋವಿ ಠೇವಣಾತಿ ವಿನಾಯತಿಗೆ ಸ್ಕ್ರೀನಿಂಗ್‌ ಕಮಿಟಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರತೀ ಚುನಾವಣೆಯ ಸಂದರ್ಭ ಕೃಷಿಕರಿಗೆ ಸಮಸ್ಯೆ ಕೋವಿ ಠೇವಣಾತಿಯದ್ದು. ಕಳೆದ ಕೆಲವು ಸಮಯಗಳಿಂದ ಈ ಬಗ್ಗೆ ವಿವಾದ, ಚರ್ಚೆ ನಡೆಯುತ್ತಿತ್ತು. ಈ ಬಾರಿ  ದಕ್ಷಿಣ ಕನ್ನಡ ಜಿಲ್ಲೆಯ 56 ಕೃಷಿಕರು ಒಟ್ಟಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ತೀರ್ಪು ಕೂಡಾ ಪ್ರಕಟವಾಗಿದೆ. ಚುನಾವಣೆ ಘೋಷಣೆ ಜೊತೆಗೇ ಸ್ಕ್ರೀನಿಂಗ್‌ ಕಮಿಟಿ ಕೂಡಾ ರಚನೆಯಾಗಿ, ಕೃಷಿಕರು ಈ ಕಮಿಟಿಗೆ ಕೋವಿ ವಿನಾಯತಿಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಸ್ಕ್ರೀನಿಂಗ್‌ ಕಮಿಟಿಯು ಚುನಾವಣೆ ಘೋಷಣೆಯ ಜೊತೆಗೇ ರಚನೆಯಾಗಬೇಕಿದೆ.

Advertisement
Advertisement

ಚುನಾವಣಾ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರು ತೀವ್ರ ಅಸಮಾಧಾನಗೊಂಡಿದ್ದರು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇಡೀ ದೇಶಕ್ಕೆ ಚುನಾವಣೆ ನಡೆಯಲು ಆಯೋಗಕ್ಕೆ ಒಂದೇ ನಿಯಮ ಇದ್ದರೂ,  ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಅಧಿಕಾರ  ಇರುತ್ತದೆ. ಆದರೆ ಇಲ್ಲಿ ಕೃಷಿಕರು ಕೋವಿ ಠೇವಣಾತಿ ಇರಿಸುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪರಿಹಾರ ಸಿಕ್ಕಿರಲಿಲ್ಲ.

ಈ ಬಗ್ಗೆ ಸುಳ್ಯ ತಾಲೂಕಿನ ಗುತ್ತಿಗಾರಿನ  ಗಂಗಾಧರ ಭಟ್‌ ಪುಚ್ಚಪ್ಪಾಡಿ ಅವರ ನೇತೃತ್ವದಲ್ಲಿ 56 ಮಂದಿ ಕೋವಿ ಲೈಸನ್ಸ್‌ ಹೊಂದಿದವರು ದಕ ಜಿಲ್ಲೆಯ ಚುನಾವಣಾಧಿಕಾರಿಗಳು ಚುನಾವಣೆಯ ಸಮಯದಲ್ಲಿ  ಹೊರಡಿಸಿದ ಆದೇಶದಲ್ಲಿ ಕಂಡುಬಂದಿರುವ ಕೋವಿ ಠೇವಣಾತಿಯ ವಿನಾಯಿತಿ ಕೃಷಿಕರಿಗೆ ಸಿಗಬೇಕು ಎಂದು ಒತ್ತಾಯಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ ನಾಗಪ್ರಸನ್ನ ಅವರು, ಚುನಾವಣೆಯ ಘೋಷಣೆ ಸಂದರ್ಭದಲ್ಲಿಯೇ ಸ್ಕ್ರೀನಿಂಗ್‌ ಕಮಿಟಿ ರಚನೆ ಮಾಡಿ ಕೃಷಿಕರು ಈ ಸಮಿತಿಗೆ ಅರ್ಜಿ ಸಲ್ಲಿಸಿ ವಿನಾಯಿತಿ ಪಡೆಯಬೇಕು ಹಾಗೂ ಠೇವಣಾತಿಗೆ ಸಂಬಂಧಿಸಿ ನೋಟೀಸು ಬಂದ 7 ದಿನಗಳ ಒಳಗಾಗಿ ಕೋವಿ ಠೇವಣಾತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಹೀಗಾಗಿ ಇನ್ನು ಚುನಾವಣೆಯ ಸಮಯದಲ್ಲಿ ತಕ್ಷಣವೇ ಸ್ಕ್ರೀನಿಂಗ್‌ ಕಮಿಟಿ ರಚನೆಯಾಗಿ ಕೃಷಿಕರು ಅರ್ಜಿ ಸಲ್ಲಿಸುವ ವ್ಯವಸ್ಥೆ ಹಾಗೂ ಕೃಷಿಕರಿಗೆ ಕೋವಿ ಠೇವಣಾತಿ ವಿನಾಯತಿಗೆ ಅವಕಾಶ ಸಿಗಬೇಕಿದೆ.

Advertisement

ಕೃಷಿಕರ ಪರವಾಗಿ ಹೈಕೋರ್ಟ್‌ ನ್ಯಾಯವಾದಿ ಕೃಷ್ಣಮೂರ್ತಿ ಡಿ ವಾದಿಸಿದ್ದರು. ಸುಳ್ಯದ ನ್ಯಾಯವಾದಿ ಶಂಕರ್‌ ಕುಮಾರ್‌ ಕೆ, ಕರಿಕಳ ಸಹಕರಿಸಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳೆವಿಮೆ ಯೋಜನೆ | ರೈತರಿಗೆ ತೋಟಗಾರಿಕಾ ಇಲಾಖೆ ಸೂಚನೆ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…

3 hours ago

41 ವರ್ಷಗಳ ಬಳಿಕ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳ ಅಂತರಿಕ್ಷ ಯಾನ

ಬಹುನಿರೀಕ್ಷಿತ ಆಕ್ಸಿಯಮ್​ ಮಿಷನ್​-4 ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆ 1ನಿಮಿಷಕ್ಕೆ…

8 hours ago

ದೇಶದ ಬಡತನ ಪ್ರಮಾಣ ಗಣನೀಯ ಇಳಿಕೆ

ಕಳೆದ 11 ವರ್ಷಗಳಲ್ಲಿ ದೇಶದ ಬಡತನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ…

10 hours ago

ರೈತರು ನ್ಯಾನೋ ಯೂರಿಯಾ ಬಳಸುವಂತೆ ಕೃಷಿ ಇಲಾಖೆ ಸಲಹೆ

ಗದಗ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸಾಕಷ್ಟು ಮಳೆಯಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಈ…

10 hours ago

ಮಾವಿನ ಬೆಳೆಗೆ ಬೆಂಬಲ ಬೆಲೆ ಘೋಷಣೆ

ರಾಜ್ಯದ ಮಾವು ಬೆಳೆಗಾರರ ಹಿತ ಕಾಪಾಡುವಂತೆ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ…

10 hours ago

ಹವಾಮಾನ ವರದಿ | 25-06-2025 | ಜೂ.29 ರ ನಂತರ ಹೇಗಿರಲಿದೆ ಹವಾಮಾನ..? | ಜು.4 ರಿಂದ ಮತ್ತೆ ಮಳೆ ಚುರುಕಾಗುತ್ತದೆಯೇ..?

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ, ಒಡಿಶಾ ಕರಾವಳಿಗೆ ತಲುಪಿರುವ ತಿರುವಿಕೆಯು ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುವ…

11 hours ago