ಭಾರೀ ಮಳೆಯ ನಡುವೆ ಅಧಿಕಾರಿಗಳು ಸೇವೆ ನೆರವೇರಿಸಿದರು. ಮಳೆಯ ಕಾರಣದಿಂದ ಕಡಿತಗೊಂಡಿದ್ದ ಸಂಪರ್ಕ ರಸ್ತೆಯನ್ನು ಮರು ನಿರ್ಮಾಣ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಮಳೆಯ ಕಾರಣದಿಂದ ಹಲವು ಸಮಸ್ಯೆಗಳಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮಾಡಬಹುದಾದ ಕಾರ್ಯಗಳಿಗೆ ಇದೊಂದು ಮಾದರಿ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಡಿಟ್ಟೆ ಡೈಮ್-ಮಿಗ್ಗಿಂಗ್ ರಸ್ತೆಯ ಸಿಯಾಂಗ್ ನದಿಯ ಉಪನದಿಗೆ ಕಟ್ಟಲಾಗಿರುವ 80 ಅಡಿ ಸೇತುವೆಯ ಮೇಲೆ ಮಣ್ಣು, ಕಲ್ಲು ಕುಸಿದ ಕಾರಣದಿಂದ ರಸ್ತೆ ಸಂಪರ್ಕವು ಕಡಿತಗೊಂಡಿತು. ಪರಿಣಾಮವಾಗಿ ಟ್ಯೂಟಿಂಗ್ ಉಪವಿಭಾಗದಂತಹ ಗಡಿ ಪ್ರದೇಶಗಳು ಸಂಪೂರ್ಣವಾಗಿ ಕಡಿತಗೊಂಡವು.
ತಕ್ಷಣವೇ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಸಿಬಂದಿಗಳು 72 ಗಂಟೆಗಳಲ್ಲಿ ಮರುಸಂಪರ್ಕ ಕಲ್ಪಿಸಿದ್ದಾರೆ. ಬಾರ್ಡರ್ ರೋಡ್ಸ್ ಟಾಸ್ಕ್ ಫೋರ್ಸ್ (ಬಿಆರ್ಟಿಎಫ್) ಅಧಿಕಾರಿ ಒ ಟಾಕಿ ಮಾತನಾಡಿ, ಭಾರಿ ಮಳೆಯ ನಡುವೆಯೂ, ಬಿಆರ್ಒ ಸಿಬ್ಬಂದಿ ರಸ್ತೆ ತಿರುವುವನ್ನು ಪೂರ್ಣಗೊಳಿಸಿ ಎಲ್ಲಾ ರೀತಿಯ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದರು ಎಂದು ಹೇಳಿದ್ದಾರೆ.
(Source : ANI)
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜುಲೈ 5ರಿಂದ 9ರವರೆಗೆ ಒಂದು ಅಥವಾ ಎರಡು…
ರಾಜ್ಯದಲ್ಲಿ ಮುಂಗಾರು ಚಟುವಟಿಕೆ ಮುಂದುವರಿದಿದ್ದು, ಜು. 4ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ…
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಕೆಲವು ದಿನಗಳು ಬಿಟ್ಟು ಬಿಟ್ಟು ಸಾಧಾರಣ ಮಳೆ…
ಜೀವನೋಪಾಯದ ಒತ್ತಡದಿಂದ ಗ್ರಾಮಸಭೆಗೆ 55.5% ಗ್ರಾಮೀಣರು ಹಾಜರಾಗುತ್ತಿಲ್ಲ ಎಂದು ರಾಷ್ಟ್ರೀಯ ಅಧ್ಯಯನ ತಿಳಿಸಿದೆ.…