ಭಾರೀ ಮಳೆಯ ನಡುವೆ ಅಧಿಕಾರಿಗಳು ಸೇವೆ ನೆರವೇರಿಸಿದರು. ಮಳೆಯ ಕಾರಣದಿಂದ ಕಡಿತಗೊಂಡಿದ್ದ ಸಂಪರ್ಕ ರಸ್ತೆಯನ್ನು ಮರು ನಿರ್ಮಾಣ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಮಳೆಯ ಕಾರಣದಿಂದ ಹಲವು ಸಮಸ್ಯೆಗಳಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮಾಡಬಹುದಾದ ಕಾರ್ಯಗಳಿಗೆ ಇದೊಂದು ಮಾದರಿ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಡಿಟ್ಟೆ ಡೈಮ್-ಮಿಗ್ಗಿಂಗ್ ರಸ್ತೆಯ ಸಿಯಾಂಗ್ ನದಿಯ ಉಪನದಿಗೆ ಕಟ್ಟಲಾಗಿರುವ 80 ಅಡಿ ಸೇತುವೆಯ ಮೇಲೆ ಮಣ್ಣು, ಕಲ್ಲು ಕುಸಿದ ಕಾರಣದಿಂದ ರಸ್ತೆ ಸಂಪರ್ಕವು ಕಡಿತಗೊಂಡಿತು. ಪರಿಣಾಮವಾಗಿ ಟ್ಯೂಟಿಂಗ್ ಉಪವಿಭಾಗದಂತಹ ಗಡಿ ಪ್ರದೇಶಗಳು ಸಂಪೂರ್ಣವಾಗಿ ಕಡಿತಗೊಂಡವು.
ತಕ್ಷಣವೇ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಸಿಬಂದಿಗಳು 72 ಗಂಟೆಗಳಲ್ಲಿ ಮರುಸಂಪರ್ಕ ಕಲ್ಪಿಸಿದ್ದಾರೆ. ಬಾರ್ಡರ್ ರೋಡ್ಸ್ ಟಾಸ್ಕ್ ಫೋರ್ಸ್ (ಬಿಆರ್ಟಿಎಫ್) ಅಧಿಕಾರಿ ಒ ಟಾಕಿ ಮಾತನಾಡಿ, ಭಾರಿ ಮಳೆಯ ನಡುವೆಯೂ, ಬಿಆರ್ಒ ಸಿಬ್ಬಂದಿ ರಸ್ತೆ ತಿರುವುವನ್ನು ಪೂರ್ಣಗೊಳಿಸಿ ಎಲ್ಲಾ ರೀತಿಯ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದರು ಎಂದು ಹೇಳಿದ್ದಾರೆ.
(Source : ANI)
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…