ಚುನಾವಣೆ ಘೋಷಣೆಯಾದ ತಕ್ಷಣವೇ ಕೃಷಿ ರಕ್ಷಣೆಯ ಬಂದೂಕು ಡಿಪಾಸಿಟ್ ಇಡಲು ಪೊಲಿಸ್ ಇಲಾಖೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಯ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೃಷಿಕರು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ವರ್ಷ ವರ್ಷವೂ ಒಂದಲ್ಲ ಒಂದು ಚುನಾವಣೆ ಇದೆ. ಪ್ರತಿ ಬಾರಿಯೂ ಚುನಾವಣೆ ನಡೆಯುವ ಹಂತದಲ್ಲಿ ಠೇವಣಿ ಇಟ್ಟಲ್ಲಿ ನಮ್ಮ ಬೆಳೆರಕ್ಷಣಾ ಉದ್ದೇಶಕ್ಕೆ ಕೊಟ್ಟ ಕೋವಿಯಿಂದ ಪ್ರಯೋಜನವೇನು? ಬೆಳೆ ರಕ್ಷಣೆ ಬಿಟ್ಟು ಇನ್ನು ಯಾವುದೇ ಉದ್ದೇಶಕ್ಕೆ ತನ್ನ ಬಂದೂಕನ್ನು ಬಳಸಬಾರದೆಂಬ ಸ್ಪಷ್ಟ ಕಲ್ಪನೆಯೂ, ಜವಾಬ್ದಾರಿಯೂ ಕೃಷಿಕರಲ್ಲಿದೆ. ಹಾಗೊಂದು ವೇಳೆ ಅಪರಾಧಿ ಹಿನ್ನೆಲೆ ಇದ್ದವರಿಗೆ, ಅಥವಾ ಅಪರಾಧಕ್ಕೆ ಬಳಸಿಕೊಂಡವರಿಗೆ ಈ ಮಾನದಂಡ ಅಳವಡಿಸಿದ್ದರೆ ಅದಕ್ಕೊಂದು ಅರ್ಥವಿದೆ, ಆದರೆ ಪರವಾನಗಿದಾರ ರೈತರೆಲ್ಲರೂ ಚುನಾವಣಾ ಅಪರಾಧಕ್ಕೆ ತನ್ನ ಬಂದೂಕನ್ನು ಬಳಸುತ್ತಾರೆ ಎಂಬಂತೆ ಘೋಷಣೆಯಾದ ದಿನವೇ ಬಂದೂಕನ್ನು ಠೇವಣಿ ಇರಿಸುವ ಸೂಚನೆಯನ್ನು ಹೊರಡಿಸುವುದು ಸರಿಯಲ್ಲ ಎಂಬುದು ಕೃಷಿಕರ ಬೇಡಿಕೆ.
ಯಾವ ಕಾರಣಕ್ಕೂ ಬೆಳೆ ರಕ್ಷಣೆಗೆ ನೀಡಿದ ಬಂದೂಕನ್ನು ಠೇವಣಿ ಇಡಲು ಹೇಳಬೇಡಿ. ರೈತರದ ನಾವು ಬೆಳೆ ರಕ್ಷಣೆಗಲ್ಲದೆ ಯಾವುದೇ ಅಪರಾಧ ಪ್ರಕ್ರಿಯೆಗೆ ಬಳಸುವುದಿಲ್ಲ ಮತ್ತು ಬಳಸಬಾರದೆಂಬ ಎಂಬ ಸಂಪೂರ್ಣ ಎಚ್ಚರಿಕೆ ನಮಗಿದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಬಂದೂಕು ಠೇವಣಿ ಇಡುವ ಮತ್ತೆ ತರುವ ಈ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…