ಚುನಾವಣೆ ಘೋಷಣೆಯಾದ ತಕ್ಷಣವೇ ಕೃಷಿ ರಕ್ಷಣೆಯ ಬಂದೂಕು ಡಿಪಾಸಿಟ್ ಇಡಲು ಪೊಲಿಸ್ ಇಲಾಖೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಯ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೃಷಿಕರು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ವರ್ಷ ವರ್ಷವೂ ಒಂದಲ್ಲ ಒಂದು ಚುನಾವಣೆ ಇದೆ. ಪ್ರತಿ ಬಾರಿಯೂ ಚುನಾವಣೆ ನಡೆಯುವ ಹಂತದಲ್ಲಿ ಠೇವಣಿ ಇಟ್ಟಲ್ಲಿ ನಮ್ಮ ಬೆಳೆರಕ್ಷಣಾ ಉದ್ದೇಶಕ್ಕೆ ಕೊಟ್ಟ ಕೋವಿಯಿಂದ ಪ್ರಯೋಜನವೇನು? ಬೆಳೆ ರಕ್ಷಣೆ ಬಿಟ್ಟು ಇನ್ನು ಯಾವುದೇ ಉದ್ದೇಶಕ್ಕೆ ತನ್ನ ಬಂದೂಕನ್ನು ಬಳಸಬಾರದೆಂಬ ಸ್ಪಷ್ಟ ಕಲ್ಪನೆಯೂ, ಜವಾಬ್ದಾರಿಯೂ ಕೃಷಿಕರಲ್ಲಿದೆ. ಹಾಗೊಂದು ವೇಳೆ ಅಪರಾಧಿ ಹಿನ್ನೆಲೆ ಇದ್ದವರಿಗೆ, ಅಥವಾ ಅಪರಾಧಕ್ಕೆ ಬಳಸಿಕೊಂಡವರಿಗೆ ಈ ಮಾನದಂಡ ಅಳವಡಿಸಿದ್ದರೆ ಅದಕ್ಕೊಂದು ಅರ್ಥವಿದೆ, ಆದರೆ ಪರವಾನಗಿದಾರ ರೈತರೆಲ್ಲರೂ ಚುನಾವಣಾ ಅಪರಾಧಕ್ಕೆ ತನ್ನ ಬಂದೂಕನ್ನು ಬಳಸುತ್ತಾರೆ ಎಂಬಂತೆ ಘೋಷಣೆಯಾದ ದಿನವೇ ಬಂದೂಕನ್ನು ಠೇವಣಿ ಇರಿಸುವ ಸೂಚನೆಯನ್ನು ಹೊರಡಿಸುವುದು ಸರಿಯಲ್ಲ ಎಂಬುದು ಕೃಷಿಕರ ಬೇಡಿಕೆ.
ಯಾವ ಕಾರಣಕ್ಕೂ ಬೆಳೆ ರಕ್ಷಣೆಗೆ ನೀಡಿದ ಬಂದೂಕನ್ನು ಠೇವಣಿ ಇಡಲು ಹೇಳಬೇಡಿ. ರೈತರದ ನಾವು ಬೆಳೆ ರಕ್ಷಣೆಗಲ್ಲದೆ ಯಾವುದೇ ಅಪರಾಧ ಪ್ರಕ್ರಿಯೆಗೆ ಬಳಸುವುದಿಲ್ಲ ಮತ್ತು ಬಳಸಬಾರದೆಂಬ ಎಂಬ ಸಂಪೂರ್ಣ ಎಚ್ಚರಿಕೆ ನಮಗಿದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಬಂದೂಕು ಠೇವಣಿ ಇಡುವ ಮತ್ತೆ ತರುವ ಈ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…