ಆಮೆನಡಿಗೆಯ ಕಾಮಗಾರಿ | ಗುತ್ತಿಗಾರಿನಲ್ಲಿ ಮಹಿಳೆಯ ನೇತೃತ್ವದಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ…..! | ಮಹಿಳೆಯ ಕಾಳಜಿಗೆ ಶ್ಲಾಘನೆ |

July 22, 2021
10:42 PM
ಅನೇಕ ಸಮಯಗಳಿಂದ ಆಮೆ ನಡಿಗೆಯಲ್ಲಿ ಗುತ್ತಿಗಾರಿನಲ್ಲಿ  ಮುಖ್ಯ ರಸ್ತೆಯ ಮೋರಿ ರಚನೆಯ ಕಾರ್ಯ ನಡೆಯುತ್ತಿತ್ತು. ದಿನವೂ ಸಾಕಷ್ಟು ಸಂಖ್ಯೆಯಲ್ಲಿ  ಜನರ ಓಡಾಟ ಇತ್ತು. ಈಚೆಗೆ ಅಪಘಾತಗಳು ನಡೆದವು. ಹೀಗಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಲೇ ಇಲ್ಲ. ಸಾರ್ವಜನಿಕರು ಮನವಿ ಮಾಡಿದರೂ ಕೆಲಸ ಆಗಿಲ್ಲ. ಕಳೆದ ಎರಡು ದಿನಗಳ ಹಿಂದೆ ಮತ್ತೊಂದು ಸಣ್ಣ ಅಪಘಾತವಾಗಿತ್ತು. ಇದೀಗ ಅಲ್ಲೇ ಪಕ್ಕದಲ್ಲಿ  ಕಬ್ಬಿಣದ  ಕೆಲಸ ಮಾಡುವ ಅಂಗಡಿ ಹೊಂದಿದ್ದ ಲೀಲಾ ಎಂಬವರ ನೇತೃತ್ವದಲ್ಲಿ  ಗುಂಡಿಗೆ ಕಲ್ಲು ಹಾಕುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಇಲಾಖೆಗಳು ಎಚ್ಚರವಾಗಿದ್ದರೆ ತಕ್ಷಣವೇ ಸುರಕ್ಷತೆಯ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ಜನಪ್ರತಿನಿಧಿಗಳೂ ಗಮನಿಸಬೇಕಿದೆ.
ಕಬ್ಬಣದ ಕೆಲಸ ಮಾಡುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು  ತನ್ನ ಅಂಗಡಿ ಪಕ್ಕದಲ್ಲಿ ಅನೇಕ ದಿನಗಳಿಂದ ರಸ್ತೆಯ ಅವ್ಯವಸ್ಥೆ ಕಂಡು , ಅಪಘಾತದ ಸುದ್ದಿ ಕೇಳಿ, ಮಾಧ್ಯಮಗಳಲ್ಲಿನ ವರದಿ ಗಮನಿಸಿ ಗುರುವಾರ ಸಂಜೆ ಸ್ವತಃ ದುರಸ್ತಿ ಕಾರ್ಯ ಮಾಡಿದರು. ಸ್ಥಳೀಯ ಜನರೂ ಸಹಕಾರ ನೀಡಿದರು. ಮಹಿಳೆಯ ಈ ಮಾದರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಏನಾಯ್ತು..? | ವಿಘ್ನೇಶ್ವರ ಭಟ್‌ ವರ್ಮುಡಿ ಅವರ ವಿಶ್ಲೇಷಣೆ …
May 22, 2025
8:43 PM
by: The Rural Mirror ಸುದ್ದಿಜಾಲ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ
ಅಡಿಕೆ ಕ್ಯಾನ್ಸರ್‌ಕಾರಕ ಅಂಶ | ಅಡಿಕೆಯ ಶುದ್ಧತೆಯನ್ನು ಶ್ರುತ ಪಡಿಸಲು ಇರುವ ಸವಾಲುಗಳು ಏನು..?
November 30, 2024
6:34 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಮೇಲೆ ಕ್ಯಾನ್ಸರ್‌ ಗುಮ್ಮ | 20 ವರ್ಷಗಳಿಂದ ಏನೇನಾಯ್ತು..? | ಮುಂದೇನು ಮಾಡಬಹುದು..?
November 20, 2024
11:27 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror

Join Our Group