ಆಮೆನಡಿಗೆಯ ಕಾಮಗಾರಿ | ಗುತ್ತಿಗಾರಿನಲ್ಲಿ ಮಹಿಳೆಯ ನೇತೃತ್ವದಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ…..! | ಮಹಿಳೆಯ ಕಾಳಜಿಗೆ ಶ್ಲಾಘನೆ |

July 22, 2021
10:42 PM
ಅನೇಕ ಸಮಯಗಳಿಂದ ಆಮೆ ನಡಿಗೆಯಲ್ಲಿ ಗುತ್ತಿಗಾರಿನಲ್ಲಿ  ಮುಖ್ಯ ರಸ್ತೆಯ ಮೋರಿ ರಚನೆಯ ಕಾರ್ಯ ನಡೆಯುತ್ತಿತ್ತು. ದಿನವೂ ಸಾಕಷ್ಟು ಸಂಖ್ಯೆಯಲ್ಲಿ  ಜನರ ಓಡಾಟ ಇತ್ತು. ಈಚೆಗೆ ಅಪಘಾತಗಳು ನಡೆದವು. ಹೀಗಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಲೇ ಇಲ್ಲ. ಸಾರ್ವಜನಿಕರು ಮನವಿ ಮಾಡಿದರೂ ಕೆಲಸ ಆಗಿಲ್ಲ. ಕಳೆದ ಎರಡು ದಿನಗಳ ಹಿಂದೆ ಮತ್ತೊಂದು ಸಣ್ಣ ಅಪಘಾತವಾಗಿತ್ತು. ಇದೀಗ ಅಲ್ಲೇ ಪಕ್ಕದಲ್ಲಿ  ಕಬ್ಬಿಣದ  ಕೆಲಸ ಮಾಡುವ ಅಂಗಡಿ ಹೊಂದಿದ್ದ ಲೀಲಾ ಎಂಬವರ ನೇತೃತ್ವದಲ್ಲಿ  ಗುಂಡಿಗೆ ಕಲ್ಲು ಹಾಕುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಇಲಾಖೆಗಳು ಎಚ್ಚರವಾಗಿದ್ದರೆ ತಕ್ಷಣವೇ ಸುರಕ್ಷತೆಯ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ಜನಪ್ರತಿನಿಧಿಗಳೂ ಗಮನಿಸಬೇಕಿದೆ.
ಕಬ್ಬಣದ ಕೆಲಸ ಮಾಡುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು  ತನ್ನ ಅಂಗಡಿ ಪಕ್ಕದಲ್ಲಿ ಅನೇಕ ದಿನಗಳಿಂದ ರಸ್ತೆಯ ಅವ್ಯವಸ್ಥೆ ಕಂಡು , ಅಪಘಾತದ ಸುದ್ದಿ ಕೇಳಿ, ಮಾಧ್ಯಮಗಳಲ್ಲಿನ ವರದಿ ಗಮನಿಸಿ ಗುರುವಾರ ಸಂಜೆ ಸ್ವತಃ ದುರಸ್ತಿ ಕಾರ್ಯ ಮಾಡಿದರು. ಸ್ಥಳೀಯ ಜನರೂ ಸಹಕಾರ ನೀಡಿದರು. ಮಹಿಳೆಯ ಈ ಮಾದರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊನೆಗೂ ದಿನಾಂಕ ನಿಗಧಿಪಡಿಸಿದ ಸರ್ಕಾರ | ಸೋಮವಾರದಿಂದ 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ!
March 22, 2024
11:30 PM
by: The Rural Mirror ಸುದ್ದಿಜಾಲ
ರೈತರ ದೆಹಲಿ ಚಲೋ ಪ್ರತಿಭಟನೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ‘ಮಹಾಪಂಚಾಯತ್’
March 15, 2024
4:27 PM
by: The Rural Mirror ಸುದ್ದಿಜಾಲ
ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿ | 5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ ಚೀತಾ | ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ
March 11, 2024
12:58 PM
by: The Rural Mirror ಸುದ್ದಿಜಾಲ
ಮತ್ತಷ್ಟು ತೀವ್ರಗೊಂಡ ರೈತರ ʻದೆಹಲಿ ಚಲೋʼ ಹೋರಾಟ | ಇಂದು ರಾಷ್ಟ್ರ ರಾಜಧಾನಿ ತಲುಪಲಿರುವ ಬಹುತೇಕ ರೈತರು |
March 6, 2024
3:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror