ಇಂದಿನ ಆಧುನಿಕ ಯುಗದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆ ಕೂದಲು ಉದುರುವಿಕೆ.ಈ ಸಮಸ್ಯೆಗೆ ಹಲವು ಕಾರಣಗಳಿವೆ. ಹಾರ್ಮೋನ್ ಗಳ ಪ್ರಭಾವ,, ಅನುವಂಶಿಕ ಅಂಶಗಳು, ವೈದ್ಯಕೀಯ ಪರಿಸ್ಥಿತಿಗಳು, ಔಷಧಿಗಳು ಮತ್ತು ಇಂದಿನ ಆಧುನಿಕ ಜೀವನ ಶೈಲಿಯಲ್ಲಾದ ಬದಲಾವಣೆಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು.
ಪುರುಷರಲ್ಲಿ ಕೂದಲು ಉದುರುವಿಕೆಯ ಮಾದರಿಯನ್ನು ಬೋಳು ಅಥವಾ ಆಂಡ್ರೋಜನಿಟಿಕ್ ಆಲೋಫೆಶಿಯಾ ಎಂದು ಕರೆಯಲಾಗುತ್ತದೆ ಇದಕ್ಕೆ ಟೆಸ್ಟೊ ಸ್ಟೀರೋನ್ನ ಉಪ ಉತ್ಪನ್ನವಾದ ಡೈಹೈಡ್ರೋಟೆಸ್ಟೋಸ್ಟಿರಾನ್ ಹಾರ್ಮೋನ್ ಕಾರಣ. ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಆಂಡ್ರೋಜನ್ ಹಾರ್ಮೋನಿನ ಕಾರಣವಾಗಿರುತ್ತದೆ. ಅಲೋಪೇಶಿಯ ಏರಿಯಾಟ ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅನುವಂಶಿಕ ಹಾಗೂ ಪರಿಸರ ಅಂಶಗಳ ಪ್ರಭಾವದಿಂದ ಉಂಟಾಗುತ್ತದೆ.
ಟೆಲೋಜಿನ್ ಎಫ್ಲುವಿಯಮ್ ಇದು ಕೂದಲು ಉದುರುವಿಕೆಯ ತಾತ್ಕಾಲಿಕ ರೂಪವಾಗಿದ್ದು,ದೈಹಿಕ ಅಥವಾ ಮಾನಸಿಕ ಒತ್ತಡ, ಶಸ್ತ್ರ ಚಿಕಿತ್ಸೆ,ಪ್ರಮುಖ ಹಾರ್ಮೋನ್ ಗಳ ಬದಲಾವಣೆಗಳಿಂದ (ಹೆರಿಗೆ, ಋತುಚಕ್ರ ಸಮಸ್ಯೆ ), ಪೌಷ್ಟಿಕಾಂಶಗಳ ಕೊರತೆಗಳು ಹಾಗೂ ಕೆಲವು ಔಷಧಿಗಳು ಇವುಗಳಿಂದ ಕೂದಲು ಉದುರುವಿಕೆ ಹೆಚ್ಚಾಗುವುದು.ಸಾಮಾನ್ಯವಾಗಿ ಕೂದಲು ಬೆಳವಣಿಗೆ ಚಕ್ರವನ್ನು ಅಡ್ಡಿಪಡಿಸುತ್ತದೆ. ಗಮನಾರ್ಹ ಸಂಖ್ಯೆಯ ಕೂದಲ ಕಿರುಚೀಲಗಳನ್ನು ತಾತ್ಕಾಲಿಕವಾಗಿ ವಿಶ್ರಾಂತಿ ಹಂತಕ್ಕೆ ತಳ್ಳುತ್ತದೆ.
ವೈದ್ಯಕೀಯ ಪರಿಸ್ಥಿತಿಗಳು : ಹೈಪೋಥೈರಾಯಿಡಿಸಮ್ ಮತ್ತು ಹೈಪರ್ ಥೈರೊಯ್ಡಿಸಮ್ ಸಮಸ್ಯೆಗಳು, ನೆತ್ತಿಯ ಸೋಂಕುಗಳು, ಸ್ವಯಂ ನಿರೋಧಕ ಕಾಯಿಲೆಗಳು, ಕೆಲವು ಚರ್ಮದ ಅಸ್ವಸ್ಥತೆಗಳು , ಕೆಲವು ರೀತಿಯ ಕ್ಯಾನ್ಸರ್, ಕೀಮೊಥೆರಪಿ, ವಿಕಿರಣ ಚಿಕಿತ್ಸೆ, ಮತ್ತು ಕೆಲವು ಔಷಧಿಗಳಿಂದ ಅಡ್ಡ ಪರಿಣಾಮವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಪೌಷ್ಟಿಕಾಂಶದ ಕೊರತೆಗಳು : ಕಬ್ಬಿಣ,ಸತು, ಬಯೋಟಿನ್, ವಿಟಮಿನ್ಸ್,ಮತ್ತು ಪ್ರೋಟೀನ್ ಗಳoತ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯ ಮತ್ತು ಕೂದಲ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಕೇಶ ವಿನ್ಯಾಸದ ಅಭ್ಯಾಸಗಳು : ಬಿಗಿಯಾದ ಕೂದಲ ವಿನ್ಯಾಸದಿಂದ, ರಾಸಾಯನಿಕ ಚಿಕಿತ್ಸೆಗಳು,ಕಠಿಣ ಕೂದಲ ರಕ್ಷಣೆಯ ಉತ್ಪನ್ನಗಳು, ಕೂದಲನ್ನು ಹಾನಿಗೊಳಿಸಿ ಕೂದಲ ಉದುರುವಿಕೆಗೆ ಕಾರಣವಾಗುವುದು. ಮಾನಸಿಕ ಹಾಗೂ ಭಾವನಾತ್ಮಕ ಒತ್ತಡಗಳಿಂದ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುವುದು.
ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:
ಪಂಚಕರ್ಮ ಚಿಕಿತ್ಸೆ:
ಆರೋಗ್ಯಕರ ಆಹಾರ ಪದ್ಧತಿ ನೈಸರ್ಗಿಕ ಕೂದಲ ರಕ್ಷಣೆ ಉತ್ತಮ ವ್ಯಾಯಾಮ ಧ್ಯಾನ ಪ್ರಾಣಾಯಮ ಯೋಗಾಸನ ಮಾಡುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ನಿಯಮಿತವಾಗಿ ನಿಮ್ಮ ಕೂದಲು ಮತ್ತು ನಿತ್ಯ ಆರೋಗ್ಯವನ್ನು ವೈದ್ಯರೊಂದಿಗೆ ತಪಾಸಣೆ ಮಾಡಿ ಕೂದಲು ಉದುರುವಿಕೆಯ ಕಾರಣವನ್ನು ಅರಿತು ಉತ್ತಮವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ.
ಬರಹ :Dr Jyothi k Laxmi Clinic, Mangalore, 94481 68053
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…