ಹೊಸ ವರ್ಷದ ಶುಭಾಶಯಗಳು | ಅಸೂಯೆ, ಸ್ವಾರ್ಥವನ್ನು ತೊರೆದು ಬದುಕೋಣ…

January 1, 2024
2:30 PM
ಹೊಸ ವರ್ಷ ಹೊಸ ಯೋಚನೆಯೊಂದಿಗೆ ಶುಭ ತರಲಿ..

ಹೊಸ ವರ್ಷದ ಶುಭಾಶಯಗಳು(Happy New Year), 2023 ವರ್ಷ ಮುಗಿದೇ ಹೋಯಿತು…. 2024ರ ವರ್ಷ ಇಂದಿನ ದಿನದಿಂದ ಪ್ರಾರಂಭವಾಯಿತು. ಹೊಸ ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು.‌‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ಯಾವಾಗಲೂ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡ ನಾನು ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸುತ್ತೇನೆ ಹಾಗೂ ಸ್ಥಿರವಾಗಿರುತ್ತೇನೆಂದು ನಿಶ್ಚಯ ಮಾಡಿಕೋ, ಅಸೂಯೆ, ಸ್ವಾರ್ಥವನ್ನು ತೊರೆದು, ನನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರುತ್ತೇನೆಂದು ಮತ್ತು ಸತ್ಯ ನಿಷ್ಠೆಗೆ ಬದ್ಧನಾಗಿರುತ್ತೇನೆಂದು ನಿಶ್ಚಯಿಸು ಆಗ ಜಗತ್ತನ್ನೇ ಅಲ್ಲಾಡಿಸುವ ಶಕ್ತಿಯನ್ನು ಆ ಭಗವಂತನೇ ನಿನಗೆ ಕರುಣಿಸುತ್ತಾನೆ.

Advertisement
Advertisement

ನಿನ್ನ ಮನಸ್ಸಿನಲ್ಲಿ ಅಹಂಕಾರವೇನಾದರೂ ಬಂದರೆ ನಿನ್ನ ಹತ್ತಿರದಲ್ಲಿ ಇರುವ ಸ್ಮಶಾನಕ್ಕೆ ಒಮ್ಮೆಭೇಟಿ ಕೊಡು ಅಲ್ಲಿ ನಿನಗಿಂತ ಶ್ರೀಮಂತ, ಶಕ್ತಿವಂತ, ಸೌಂದರ್ಯವಂತ, ಹಾಗೂ ನಿನಗಿಂತ ಬಲಾಡ್ಯ ದೇಹವನ್ನು ಹೊ०ದಿದಂತಹ ವ್ಯಕ್ತಿ ,6×3,ಅಡಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೆ ಅಥವಾ ಕಟ್ಟಿಗೆಯ ನಡುವೆ ಬೂದಿಯಾಗುತ್ತಿದ್ದರೆ, ಒಂದಲ್ಲ ಒಂದು ದಿನ ನಿನಗೂ ಅದೇ ಸ್ಥಳಕ್ಕೆ ಹೋಗಲಿಕ್ಕೆ ಇದೆ. ಇದನ್ನು ಅರ್ಥಮಾಡಿಕೊಂಡವನ ಮನಸ್ಸಿನಲ್ಲಿ ಒಂದು ಅಣುವಿನಷ್ಟು ಅಹಂಕಾರ ಬರಲಾರದು.

Advertisement

ಚಿಂತಿಸುವವನಿಗೆ ದೃಷ್ಟಾಂತವಿದೆ. ನಮಗೆ ಸಿಹಿಯ ರುಚಿ ಅರಿವಾಗಬೇಕೆಂದರೆ ಮೊದಲು ಕಹಿಯ ಅನುಭವ ಇರಬೇಕು, ಕಷ್ಟದ ಬೆಲೆ ತಿಳಿದಿದ್ದರೆ ಸುಖದ ಅನುಭವ ಪ್ರತಿಫಲ ಏನು ಎಂದು ತಿಳಿಯುತ್ತದೆ.  ಅರ್ಥ ಮಾಡಿಕೊಂಡರೆ ಜೀವನ ತುಂಬ ಸುಂದರ, ಸಹಾಯ ಪಡೆದವರನ್ನು ಎಂದಿಗೂ ಮರೆಯಬಾರದು,
ಸಹಾಯ ಮಾಡಿದರೆ ಅದನ್ನು ಪದೇ ಪದೇ ನೆನಪಿಸಬಾರದು. ನಮ್ಮ ಶಕ್ತಿ ಹೆಚ್ಚಾಗುವುದು ನಮ್ಮ ಗೆಲುವುಗಳಿಂದಲ್ಲ. ಗೆಲುವಿಗಾಗಿ ನಾವುನಡೆಸುವ ಹೋರಾಟಗಳಿಂದ. ಆದುದರಿಂದ ಎಂತಹ ಪರಿಸ್ಥಿಯಲ್ಲೂ ಶರಣಾಗತರಾಗದಿರುವುದೇ ನಿಜವಾದ ಶಕ್ತಿ. ಆ ಅನುಭವ ನಮನ್ನು ಯಶಸ್ಸಿನಿಂದ ಜಗತ್ತಿಗೆ ಪರಿಚಯಿಸುತ್ತದೆ.

ಹಿಂದಿನ ವಷ೯ದ ಕೊನೆಯ ದಿನ ಮುಗಿದು ಹೊಸ ವರ್ಷ ಬಂದೇ ಬಿಟ್ಟಿತು, ನಮ್ಮ ಕಣ್ಣ್ ಗಳಲ್ಲಿ ನೀರು ತಂದವರಿಗೆ ಹಾಗೂ ಮುಖದಲ್ಲಿ ನಗು ತಂದವರಿಗೆ, ಇಬ್ಬರಿಗೂ ಧನ್ಯವಾದಗಳು ಹೇಳುವ ಮನಸ್ಸು ನಮ್ಮದಾಗಬೇಕು. 2024ರ ಹೊಸ ವರ್ಷ ದೊಡ್ಡ ಯಶಸ್ಸಿನ ವರ್ಷ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ..

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ಕರಾವಳಿ, ಮಾಲೆನಾಡಿನಲ್ಲಿ ಮಳೆ, ಪ್ರವಾಹ, ಭೂಕುಸಿತ – ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ : ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ ಏನು?
July 8, 2024
11:32 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 8-7-2024 | ರಾಜ್ಯದ ಬಹುತೇಕ ಕಡೆ ಮಳೆ | ಜು.9 ರಿಂದ ಎರಡು ದಿನಗಳ ಕಾಲ ಮಳೆ ಕಡಿಮೆ ನಿರೀಕ್ಷೆ |
July 8, 2024
11:03 AM
by: ಸಾಯಿಶೇಖರ್ ಕರಿಕಳ
ವರ್ಷಪೂರ್ತಿ ಜನರಿಗೆ ಮಾವು, ಹಲಸು..! | ಆಹಾರ ಭದ್ರತೆಯ ಕಡೆಗೆ ಹೆಜ್ಜೆ | ಹೊಸ ರೀತಿಯ ಹಣ್ಣುಗಳ ಪರಿಚಯಕ್ಕೆ ಇಳಿದ ಬಾಂಗ್ಲಾದೇಶ |
July 7, 2024
9:08 PM
by: ದ ರೂರಲ್ ಮಿರರ್.ಕಾಂ
ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವ ಪ್ರದಾನ
July 7, 2024
3:23 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror