Advertisement
ಸುದ್ದಿಗಳು

2024 ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ವಿಶ್ವ ಹವ್ಯಕ ಸಮ್ಮೇಳನ | ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಘೋಷಣೆ |

Share

2024 ರ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಈ ವಿಷಯ ಪ್ರಕಟಿಸಿದರು.

Advertisement
Advertisement
Advertisement
Advertisement

ವಿಶ್ವ ಹವ್ಯಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅಮೇರಿಕ, ಸಿಂಗಾಪುರ ಮತ್ತು ಇಂಗ್ಲೆಂಡಿನಲ್ಲಿ ಕೂಡಾ ಹವ್ಯಕ ಸಮಾವೇಶ ನಡೆಯಲಿದೆ. ಮುಂದಿನ 14 ತಿಂಗಳುಗಳಲ್ಲಿ ಹವ್ಯಕ ಮಹಾಸಭಾವು ಏರ್ಪಡಿಸಲಿರುವ ಸಮಾವೇಶಗಳನ್ನೂ ಅವರು ಇದೇ ಸಂದರ್ಭ ಪ್ರಕಟಿಸಿದರು.

Advertisement

ಸಮಾವೇಶಗಳು: ಹವ್ಯಕ ನ್ಯಾಯವಾದಿಗಳ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಶಿಕ್ಷಕರ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ , ಹವ್ಯಕ ಕಲಾ ಉತ್ಸವ, ಹವ್ಯಕ ಸಂಗೀತ ಉತ್ಸವ, ಯಕ್ಷಗಾನ ಉತ್ಸವ, ವೈದಿಕ ಉತ್ಸವ, ಗಾಯತ್ರಿ ಮಹೋತ್ಸವ, ಶಂಕರ ಸ್ಮರಣ, ಸಂಸ್ಕಾರೋತ್ಸವ, ಹವ್ಯಕ ವಾಣಿಜ್ಯ ಸಮಾವೇಶ, ಹವ್ಯಕ ಭಾಷಾ ಸಮಾವೇಶ, ಹವ್ಯಕ ಸಾಹಿತ್ಯ ಸಮಾವೇಶ, ಹವ್ಯಕ ಪತ್ರಕರ್ತರ ಸಮಾವೇಶ, ತಾಳಮದ್ದಳೆ ಸಪ್ತಾಹ, ಹವ್ಯಕ ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶಗಳು ನಡೆಯಲಿವೆ.

ಎಲೆಚುಕ್ಕಿ ರೋಗದ ಸಮಸ್ಯೆ: ಅಡಿಕ ಕೃಷಿಯಲ್ಲೇ ತೊಡಗಿರುವ ಹವ್ಯಕರು ಎಲೆಚುಕ್ಕಿ ರೋಗದಿಂದಾಗಿ ತೊಂದರೆಗೊಳಗಾಗಿದ್ದಾರೆ ಎಂದು ಸರ್ವಸದಸ್ಯರ ಸಭೆಯಲ್ಲಿ ಅನೇಕ ಸದಸ್ಯರು ಕಳವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಗಿರಿಧರ ಕಜೆ ಅವರು, ಹವ್ಯಕ ಮಹಾಸಭಾ ವತಿಯಿಂದ ಹವ್ಯಕ ಕೃಷಿಕರ ಸಮಾವೇಶ ಏರ್ಪಡಿಸಲಾಗುವುದು. ಇದಕ್ಕೆ ವಿಜ್ಞಾನಿಗಳನ್ನೂ ಆಹ್ವಾನಿಸಿ ಈ ಸಮಸ್ಯೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಯತ್ನಿಸಲಾಗುವುದು
ಎಂದರು.

Advertisement

ಬೆಳಕೆ ನಿವೇಶನ ಮತ್ತು ಅಭಿವೃದ್ಧಿ: ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶಿರೂರಿನ ಮಂಜುನಾಥ ಬಿಲ್ಲವ ಮತ್ತು ಕುಟುಂಬದವರು ಸೇವಾರೂಪದಲ್ಲಿ ನೀಡಿರುವ ಒಂದು ಎಕರೆ ಜಾಗದಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದರು. ಬೆಂಗಳೂರಿನ ಚಿಕ್ಕಪೇಟೆ ಮತ್ತು ಕಾಮರಾಜ್ ರಸ್ತೆಯಲ್ಲಿ ಮಹಾಸಭಾ ಅಧೀನಕ್ಕೆ ಬರಲಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿ ಹವ್ಯಕ ಸಮುದಾಯಕ್ಕೆ ಅನುಕೂಲಕರವನ್ನಾಗಿ ಮಾಡಲಾಗುವುದು ಎಂದು ಡಾ. ಕಜೆ ತಿಳಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ

ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…

6 hours ago

ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ

ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…

7 hours ago

ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ

ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…

7 hours ago

ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ

ರೈಲ್ವೆ ಇಲಾಖೆ ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

7 hours ago

ಈ ವರ್ಷ ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಆಮದು..?

ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…

7 hours ago

ಹೆಚ್ಚುತ್ತಿರುವ ಅಡಿಕೆ ವಂಚನೆ ಪ್ರಕರಣ | ಅಡಿಕೆ ಬೆಳೆಗಾರರಲ್ಲಿ ಇರಲಿ ಎಚ್ಚರ |

ಅಡಿಕೆ ವ್ಯಾಪಾರ ನಡೆಸಿ ಹಣ ಕೊಡದೆ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ…

9 hours ago