Advertisement
ವೈರಲ್ ಸುದ್ದಿ

ಮೀನು ಪ್ರಿಯರೇ ಗಮನಿಸಿ, ಎಲ್ಲಾ ಮೀನುಗಳು ಉತ್ತಮವಲ್ಲ…!

Share

ಮೀನು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಮೀನಿನಲ್ಲೂ ಅನೇಕ ರೀತಿಯ ವಿಧಗಳಿವೆ. ಅದರಲ್ಲೂ ಎಲ್ಲಾ ಥರದ ಮೀನಗಳನ್ನು ತಿನ್ನುವಂತಿಲ್ಲ. ಕೆಲವು ಬಗೆಯ ಮೀನುಗಳು ಆರೋಗ್ಯಕ್ಕೆ ಅತ್ಯುತ್ತಮ.  ಮಕ್ಕಳು, ಹಿರಿಯರು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮೀನು ಹೇಳಿ ಮಾಡಿಸಿದ ಔಷಧಿ. ಮೀನಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ, ರಂಜಕ, ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಅಯೋಡಿಯನ್ ಇವೆ. ಮಾತ್ರವಲ್ಲ ಪ್ರೋಟೋನ್ ಕೂಡ ಹೇರಳವಾಗಿದೆ. ಇದು ದೇಹಕ್ಕೆ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳ ಒಂದು ಗಣಿ.

ಮೀನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಕೊಬ್ಬಿನಾಮ್ಲದಿಂದ ಕೂಡಿದ ಮೀನನ್ನು ಸೇವಿಸುವುದು ಒಳ್ಳೆಯದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಮೀನನ್ನು ಹೆಚ್ಚು ಎಣ್ಣೆಯಲ್ಲಿ ಫ್ರೈ ಮಾಡಿ ಸೇವಿಸದಿರಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮೀನಿನ ಸಾರು ಮಾಡಿ ಸೇವಿಸಿದರೆ ಬಹಳ ಒಳ್ಳೆಯದು. ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲದ ಅಂಶದಿಂದಾಗಿ ಕೊಬ್ಬಿನ ರೀತಿಯ ಮೀನುಗಳು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧಕರು ನಂಬಿದ್ದಾರೆ.

ಆದರೆ, ಸಣ್ಣ ಮೀನು ಅಥವಾ ಹುಲಿ ಮೀನುಗಳು ( ಫಾರ್ಮ್ ಮೀನು) ಹೆಚ್ಚು ಪೌಷ್ಠಿಕ ನೀಡುತ್ತದೆ ಎಂದು ಹೇಳುವುದು ತಪ್ಪು. ಯಾಕೆಂದರೆ ಫಾರ್ಮ್ ಚುಚ್ಚುಮದ್ದು ನೀಡಿ ಬೆಳೆಸುತ್ತಾರೆ. ಇದು ದೇಹಕ್ಕೆ ತುಂಬ ಹಾನಿಕಾರಕವಾಗಿದೆ. ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳನ್ನು ಸಹ ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಟಿಲಾಪಿಯಾದಲ್ಲಿ ಹೆಚ್ಚು ಹಾನಿಕಾರಕ ಮತ್ತು ಕೊಬ್ಬು ಹೆಚ್ಚಾಗಿದೆ. ಇದು ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಇದು ಡೈಬ್ಯುಟಿಲೀನ್ ಎಂಬ ರಾಸಾಯನಿಕವನ್ನು ಸಂಗ್ರಹಿಸುತ್ತದೆ. ಇದರಿಂದ ಆಸ್ತಮಾ, ಬೊಜ್ಜು ಮತ್ತು ಅಲರ್ಜಿ ಬರಬಹುದು. ಇದಲ್ಲದೆ, ಡಯಾಕ್ಸಿನ್ ಎಂಬ ವಿಷಕಾರಿ ವಸ್ತುವೂ ಇದರಲ್ಲಿ ಕಾಣಿಸುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹುಲಿ ಮೀನುಗಳು ನೀರಿನಲ್ಲಿ ಬೀಳುವ ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯವನ್ನು ತಿನ್ನುತ್ತವೆ. ಆದ್ದರಿಂದ ಇವು ಸಂಪೂರ್ಣ ಕಲುಷಿತ. ಇದರಲ್ಲಿರುವ ಪಾದರಸ (ಮರ್ಕ್ಯುರಿ) ಮಟ್ಟ ಮನುಷ್ಯನ ದೇಹಕ್ಕೆ ಸಹಿಸಲಾಗದ್ದು. ಪಾದರಸದಿಂದ ನರವ್ಯೂಹ ಸಮಸ್ಯೆಗಳು, ಮೆದುಳಿನ ಹಾನಿ ಬರಬಹುದು. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಇಂತಹ ಮೀನನ್ನು ತಪ್ಪಿಸಬೇಕು ಎಂದು ವರದಿ ಇದೆ.

(ವಿವಿಧ ವರದಿಗಳಿಂದ)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

2 days ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

2 days ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

2 days ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

3 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

3 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

3 days ago