Advertisement
ಸಂಪಾದಕೀಯ ಆಯ್ಕೆ

ಅಡಿಕೆ ಬಳಕೆ ನಿಯಂತ್ರಣದ ಚರ್ಚೆ, ರೈತರ ಭವಿಷ್ಯದ ಎಚ್ಚರಿಕೆ? | ಆರೋಗ್ಯದ ಹೆಸರಿನಲ್ಲಿ ಕೃಷಿಗೆ ಮೌನ ಒತ್ತಡ?

Share

ವಿಶ್ವ ಆರೋಗ್ಯ ಸಂಸ್ಥೆ(WHO)ಯ ದಕ್ಷಿಣ ಏಷ್ಯಾ ಪ್ರಾಂತೀಯ ಕಚೇರಿ ಆಯೋಜಿಸಿದ ಅಡಿಕೆ ಬಳಕೆ–ಆರೋಗ್ಯ ಕುರಿತ ವೆಬಿನಾರ್‌ ಮೇಲ್ನೋಟಕ್ಕೆ ಸಾರ್ವಜನಿಕ ಆರೋಗ್ಯದ ಚರ್ಚೆಯಂತೆ ಕಾಣಬಹುದು. ಆದರೆ ಅದರ ದೀರ್ಘಾವಧಿಯ ಒಳನೋಟದಲ್ಲಿ ಭಾರತ ಸೇರಿದಂತೆ ದಕ್ಷಿಣ–ಪೂರ್ವ ಏಷ್ಯಾದ ಅಡಿಕೆ ಆಧಾರಿತ ಗ್ರಾಮೀಣ ಆರ್ಥಿಕತೆಗೆ ದೀರ್ಘಾವಧಿಯ ಸಂದೇಶವನ್ನು ನೀಡುತ್ತಿದೆ. ಈಗಾಗಲೇ ಹಂತ ಹಂತವಾಗಿ ಅಡಿಕೆಯ ಮೇಲೆ ಮೌನವಾದ ಒತ್ತಡವನ್ನು ತರಲಾಗುತ್ತಿದೆ. ಈಗ  ವೆಬಿನಾರ್‌ನ ಕೇಂದ್ರ “ಅಡಿಕೆ ಬಳಕೆ” ಆಗಿದ್ದರೂ, ಅದರ ಪರಿಣಾಮ ಕೃಷಿ, ಮಾರುಕಟ್ಟೆ ಮತ್ತು ರೈತರ ಜೀವನೋಪಾಯ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ.

WHO ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರು ಅಡಿಕೆಯನ್ನು ಕ್ಯಾನ್ಸರ್‌ ಸೇರಿದಂತೆ ಇತರ ಸಮಸ್ಯೆಗಳೊಂದಿಗೆ ಮುಂದಿಡುತ್ತಾರೆ ಇದರಿಂದಾಗಿ ಬಳಕೆಯನ್ನು ನಿಯಂತ್ರಿಸುವ ನೀತಿ, ಕಠಿಣ ಜಾಗೃತಿ ಅಭಿಯಾನ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಅಡಿಕೆ ವಿರೋಧಿ ನಿಲುವು ಇವೆಲ್ಲವೂ ಮುಂದಿನ ಹಂತಗಳಲ್ಲಿ ಸರ್ಕಾರಗಳ ನೀತಿಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಹಂತದಲ್ಲಿ WHO  ಅಡಿಕೆ ಕೃಷಿ ನಿಷೇಧ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಅಡಿಕೆ ಬಳಕೆಯ ಮೇಲೆ ಮರುಚಿಂತನೆಯ ಮೇಲೆ ಒತ್ತಡ ಹೇರುತ್ತದೆ. ಇದರ ಅರ್ಥ ಅಡಿಕೆ ಬೆಳೆಯ ಮೇಲೆ ಒತ್ತಡ ಇರುವುದು ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ ಅಡಿಕೆ ಕೇವಲ ಕೃಷಿಯಲ್ಲ. ಇದು ಲಕ್ಷಾಂತರ ಸಣ್ಣ ರೈತರ ಆದಾಯದ ಆಧಾರವಾಗಿದೆ.  ಗ್ರಾಮೀಣ ಮಾರುಕಟ್ಟೆಗಳ ಆರ್ಥಿಕ ಕೇಂದ್ರ, ಕೆಲವು ಪ್ರದೇಶಗಳಲ್ಲಿ “ಪರ್ಯಾಯವೇ ಇಲ್ಲದ” ಬೆಳೆಯಾಗಿದೆ. ಅನೇಕ ಕುಟುಂಬಗಳು ಅಡಿಕೆ ಬೆಳೆಯನ್ನು ನಂಬಿ ಇದ್ದಾರೆ. ಆದ್ದರಿಂದ, ಬಳಕೆಯ ಮೇಲಿನ ನಿರಂತರ ನಕಾರಾತ್ಮಕ ಅಭಿಯಾನಗಳು, ನಿರಂತರವಾಗಿ ಕ್ಯಾನ್ಸರ್‌ ಹೆಸರಿನ ಭೀತಿಯು ನೇರವಾಗಿ ಅಲ್ಲದಿದ್ದರೂ ಬೇಡಿಕೆ ಕುಸಿತ, ಬೆಲೆ ಅಸ್ಥಿರತೆ ಮತ್ತು ರೈತರ ಆದಾಯದ ಅನಿಶ್ಚಿತತೆಗೆ ಕಾರಣವಾಗಬಹುದು.

ಇಂತಹ ಸ್ಥಿತಿಯಲ್ಲಿ ಆರೋಗ್ಯ ಹಾಗೂ ಕೃಷಿ ಸಂಘರ್ಷ ಎಂದು ನೋಡಿದರೆ, ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಹೀಗಾಗಿ ಈಗ ಆರೋಗ್ಯ ವಲಯ ಮತ್ತು ಕೃಷಿ–ಆರ್ಥಿಕ ವಲಯ ಇವುಗಳ ನಡುವೆ ಸಮನ್ವಯದ ನೀತಿ ಅಗತ್ಯ ಇದೆ. ಅನಗತ್ಯವಾಗಿ ಅಡಿಕೆ ಹಾನಿಕಾರಕ ಎಂದು ಬಿತ್ತುವುದು ನಿಲ್ಲಬೇಕು.  WHO ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರೆ,  ರೈತರ ಬಗ್ಗೆ  ಸರ್ಕಾರಗಳು ಮಾತನಾಡಬೇಕು. ಆದರೆ ಅವರೂ ಮೌನವಾಗಿದ್ದಾರೆ. ಹೀಗಾಗಿ ರೈತರ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಈಗಿನ ವೆಬಿನಾರ್‌ ಸದ್ಯ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ಅಡಿಕೆ ಮಾರುಕಟ್ಟೆ, ಅಡಿಕೆಯ ಸದ್ಯದ ಭವಿಷ್ಯದ ಮೇಲೆ ಯಾವ ಪರಿಣಾಮವೂ ಇಲ್ಲ.  ಆದರೆ,  ಮುಂದಿನ ದಿನಗಳಲ್ಲಿ ಅಡಿಕೆ ಬಳಕೆಯ ಮೇಲೆ ನಿಯಂತ್ರಣ ಹೆಚ್ಚುವ ಸಾಧ್ಯತೆ ಇದೆ. ಕೆಲವು ರಾಜ್ಯಗಳಲ್ಲಿ ಕಠಿಣ ನಿಯಮಗಳು ಬರಲೂಬಹುದು, ಸಾರ್ವಜನಿಕ ಅಭಿಪ್ರಾಯ ಅಡಿಕೆ ವಿರುದ್ಧ ತಿರುಗುವ ಸಾಧ್ಯತೆ ಇದೆ. ಇವೆಲ್ಲವೂ ರೈತರಿಗೆ ಮುಂಚಿತ ಎಚ್ಚರಿಕೆಯ ಗಂಟೆ. ಏಕೆಂದರೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪಾನ್‌ಮಸಾಲಾಗಳು ಆರೋಗ್ಯದ ನೆಪವೊಡ್ಡಿ ನಿಷೇಧ ಮಾಡಿದ್ದಾರೆ. ಈಗ ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಕೂಡಾ ಅಷ್ಟು ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆಯ ಬಗ್ಗೆ ನಡೆಯುವ ಇಂತಹ ವೆಬಿನಾರ್‌ ಅಥವಾ ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದ ಚರ್ಚೆಗಳು ಬಹಳ ಗಂಭೀರವಾಗಿರುವುದು ರೈತರ ದೃಷ್ಟಿಯಿಂದ ಮಾತ್ರಾ. ಉಳಿದಂತೆ ರಾಜಕಾರಣಿಗಳು, ಸಂಸ್ಥೆಗಳಿಗೆ, ಸಂಸ್ಥೆಯ ಮುಖ್ಯಸ್ಥರಿಗೆ ಆಡಳಿತ ಅವಧಿಗೆ, ಅಧಿಕಾರದ ಅವಧಿಗೆ ಮಾತ್ರಾ ಇದೊಂದು ಸಮಸ್ಯೆಯಷ್ಟೇ…!. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 days ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

2 days ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

3 days ago