ದೇಶೀ ಆಹಾರ ಸೇವನೆಯಿಂದ  ಆರೋಗ್ಯ ವೃದ್ಧಿ | ಡಾ.ಖಾದರ್‌ ಅಭಿಪ್ರಾಯ |

November 5, 2024
7:39 AM
ಅಕ್ಕಿ, ಗೋಧಿ, ಸಕ್ಕರೆಯಿಂದ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಿ ಲವಣಾಂಶಗಳು ಜೀವಸತ್ವಗಳನ್ನು ಹೀರುವ ಶಕ್ತಿಯನ್ನು ನಾಶಪಡಿಸಿ ಡಯಾಬಿಟಿಸ್, ಕ್ಯಾನ್ಸರ್ ನಂತಹ ಮಾರಕ ರೋಗಗಳು ಬಾಧಿಸುತ್ತಿವೆ ಎಂದು ಪದ್ಮಶ್ರೀ ಡಾ. ಖಾದರ್ ಹೇಳಿದರು.

ದೇಶೀ ಆಹಾರ ಸಂಪೂರ್ಣವಾಗಿ ಆರೋಗ್ಯವನ್ನು ತಂದು ಕೊಡುತ್ತದೆ. ಸಂಪತ್ತನ್ನು ಗಳಿಸುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮೈಸೂರಿನ ಪದ್ಮಶ್ರೀ ಡಾ. ಖಾದರ್ ಯಾದಗಿರಿಯಲ್ಲಿ ತಿಳಿಸಿದ್ದಾರೆ.

Advertisement
Advertisement

ಯಾದಗಿರಿ ನಗರದ ಲಕ್ಷ್ಮಿ ದೇವಸ್ಥಾನದಲ್ಲಿ ಹಮ್ಮಿಕೊಂಡದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬಂದ ಮೇಲೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವ ಬದಲು ರೋಗ ಬರುವುದಕ್ಕೆ ಮೊದಲೇ ಆಹಾರ ಪದ್ದತಿಯನ್ನು ಬದಲಾಯಿಸಿ. ಅಕ್ಕಿ, ಗೋಧಿ, ಸಕ್ಕರೆಯಿಂದ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಿ ಲವಣಾಂಶಗಳು ಜೀವಸತ್ವಗಳನ್ನು ಹೀರುವ ಶಕ್ತಿಯನ್ನು ನಾಶಪಡಿಸಿ ಡಯಾಬಿಟಿಸ್, ಕ್ಯಾನ್ಸರ್ ನಂತಹ ಮಾರಕ ರೋಗಗಳು ಬಾಧಿಸುತ್ತಿವೆ ಎಂದರು. ನಮ್ಮ ಪೂರ್ವಜರು ನವಣೆ, ಸಾಬಿ, ಸಜ್ಜಿ, ಕೊರಲೇ, ಹುಚ್ಚೆಳ್ಳು, ಕೊಬ್ಬರಿಯಂತಹ ಸಿರಿಧಾನ್ಯಗಳನ್ನು ಆಹಾರ ಪದ್ದತಿಯಲ್ಲಿ ಬಳಸುತ್ತಿದ್ದರು. ಅವರ ಆರೋಗ್ಯವು ಸಧೃಡವಾಗಿ ಇರುತ್ತಿತ್ತು. ಹಿಂದಿನ ಪದ್ಧತಿ, ಜೀವನ ಶೈಲಿ ಮರೆಯಾಗಿದೆ. ವಿಷವರ್ತುಲದಿಂದ ಹೊರಬಂದು ಅಮೂಲಾಗ್ರವಾಗಿ ಆಹಾರ ಪದ್ಧತಿಯನ್ನ ಬದಲಾಯಿಸಿ. ಸಿರಿಧಾನ್ಯಗಳನ್ನು ಬೆಳೆಸುವುದು ಸರಳವಾಗಿದೆ. ಒಣಭೂಮಿ ಬೇಸಾಯದಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ಇದರ ಸೇವೆಯಿಂದ ರೋಗಮುಕ್ತ ಜೀವನ ನಡೆಸಬಹುದು ಎಂದರು.

According to Dr. Khadar, diseases can be caused by rice, wheat, and sugar. He explained that plastic particles can enter the body, disrupt the absorption of vitamins, and potentially lead to serious illnesses such as diabetes and cancer. Khader also emphasized the negative impact of these substances on health.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರ ಜಿಲ್ಲೆಯಲ್ಲಿ ನಾಳೆ ಮಾವು ಬೆಳೆಗಾರರಿಂದ ಬಂದ್ ಕರೆ |
June 10, 2025
10:31 PM
by: The Rural Mirror ಸುದ್ದಿಜಾಲ
ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಿ
June 10, 2025
10:05 PM
by: The Rural Mirror ಸುದ್ದಿಜಾಲ
ಚಾಮರಾಜನಗರದ ಬೇಡುಗುಳಿ ಬಳಿ ಹುಲಿ ದಾಳಿಗೆ ಮೃತಪಟ್ಟ ಮಹಿಳೆ
June 10, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ವಿವಿದೆಡೆ ಭಾರೀ ಮಳೆ  ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ
June 10, 2025
9:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group