ಹೌದು, ಪಾನಿಪುರಿ ತಿನ್ನುವವರಿಗೆ ಇದು ಸಂತೋಷದ ವಿಷಯ. ಯಾರಾದಾದರೂ ನಿಮ್ಮಲ್ಲಿ ಪಾನಿಪುರಿ ತಿನ್ನಬೇಡಿ ಅದು ಆರೋಗ್ಯಕರವಲ್ಲ ಅಂದರೆ ಅವರಿಗೆ ಸ್ವಲ್ಪ ಈ ವಿಷಯವನ್ನು ತಿಳಿಸಿ.
ಇದೊಂದು ಜಂಕ್ಫುಡ್ ಅನ್ನೋ ಭಾವನೆ ಪ್ರತಿಯೊಬ್ಬರ ತಲೆಯಲ್ಲೂ ಇದೆ. ಆದರೆ ಈ ಸ್ವೀಟ್ ಫುಡ್ ಆರೋಗ್ಯನಿಧಿಯೂ ಹೌದು. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಮಾತ್ರವಲ್ಲ ಮಧುಮೇಹ ರೋಗಿಗಳು ಸಹ ಯಾವುದೇ ಹೆದರಿಕೆ ಇಲ್ಲದೆ ಪಾನಿಪುರಿಯನ್ನು ಸೇವಿಸಬಹುದು. ಈ ಪಾನಿಪುರಿಯಲ್ಲಿ ಬಳಸುವ ಪದಾರ್ಥಗಳೆಲ್ಲ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.
ಮೂತ್ರದ ಸಮಸ್ಯೆಗಳು, ಬೊಜ್ಜು ಕಡಿಮೆ ಮಾಡುವಲ್ಲಿ, ಅಸಿಡಿಟಿ ಸಮಸ್ಯೆಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಹಾಗೂ ಬಾಯಿ ಹುಣ್ಣಿಗೆ ಸಹ ಇದು ಬೆಸ್ಟ್ ಮದ್ದಾಗಿದೆ. ಪಾನಿಪುರಿಗೆ ಬಳಸುವ ವಸ್ತುಗಳಾದ ಶುಂಠಿ, ಜೀರಿಗೆ, ಪುದಿನಾ, ಬ್ಲಾಕ್ ಸಾಲ್ಟ್, ಕೊತ್ತಂಬರಿ ಸೊಪ್ಪುಗಳಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಪೋಲೇಟ್, ಸತು ಮತ್ತು ವಿಟಮಿನ್ ಎ,ಬಿ-6, ಬಿ-12,ಸಿ ಮತ್ತು ಡಿ ಇರುತ್ತದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಯಾವುದೇ ಒಂದು ವಸ್ತುವಾಗಲಿ ಅತೀಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಗೊತ್ತೆ ಇದೆ. ಹಾಗಾಗಿ ಪಾನಿಪುರಿ ಆರೋಗ್ಯದಾಯಕವಾದರೆ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳಿತಲ್ಲ.
ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…
ಕಿಸಾನ್ ಸಮ್ಮಾನ್ ನಿಧಿಯಿಂದ 9 ಕೋಟಿ 50 ಲಕ್ಷ ರೈತರಿಗೆ 21 ಸಾವಿರ…
ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…
ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16 ಸಾವಿರದ 114…
ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…