Opinion

ಬೇರೆ ಬೇರೆ ದೇಶಗಳಿಗೆ ಇರುವಂತೆ ಸ್ವರ್ಗಕ್ಕೂ ಇದೆ ವಿಶೇಷ ಕರೆನ್ಸಿ..! | ಯಾವುದು ಅದು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಒಬ್ಬ ಅತಿಯಾದ ಶ್ರಿಮಂತ(Rich man) ಇದ್ದ. ಅವನು ಧರ್ಮದ(Dharma) ಮೇಲೆ ನಂಬಿಕೆಯನ್ನೂ ಇಟ್ಟಿದ್ದ. ಅವನಿಗೆ 10-15 ಕಂಪೆನಿ(Company)ಹಾಗೂ ಬೇರೆ ಬೇರೆ ವ್ಯವಹಾರ(Business) ಇತ್ತು. ಸಾವಿರಾರು ಜನರು, ಅವನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಕಾರಿನಲ್ಲಿ ಹೋಗುವಾಗ, ರೇಡಿಯೋದಲ್ಲಿ(Radio) ಯಾರೋ ಸ್ವಾಮಿಗಳು, “ಸತ್ತಾಗ, ಮೇಲೆ ಹೋಗುವಾಗ, ಮನುಷ್ಯ(Human), ಅವನ ಸಂಪತ್ತನ್ನು(Wealth) ಮೇಲೆ ಕೊಂಡು ಹೋಗಲು ಸಾಧ್ಯ ಇಲ್ಲ” ಹೇಳುವುದನ್ನು ಕೇಳಿದ. ಹಾಗೆ, ಅವನ ಕಚೇರಿ(Office) ತಲುಪುತ್ತಲೇ, ಅವನಿಗೆ ಒಂದು ಉಪಾಯ ಹೊಳೆಯಿತು.

Advertisement
Advertisement

ತನ್ನ ಎಲ್ಲಾ ಕಂಪೆನಿಯ ನೋಟೀಸ್ ಬೋರ್ಡ್ ನಲ್ಲಿ, ಹೀಗೆ ಬರೆದು ಹಾಕಿದ “ನನಗೆ ಯಾರಾದರೂ, ನನ್ನ ಸಂಪತ್ತನ್ನು, ಸತ್ತಾಗ, ಮೇಲೆ ಸ್ವರ್ಗಕ್ಕೆ ಕೊಂಡು ಹೋಗುವ ಉಪಾಯ ತಿಳಿಸಿದರೆ, ಅವರಿಗೆ 5 ಕೋಟಿ ರುಪಾಯಿ ಬಹುಮಾನ ಕೊಡುವೆನು.” ತಿಂಗಳು ಕಳೆದರೂ, ಯಾರೂ ಉಪಾಯ ಹೇಳಲು ಬರಲಿಲ್ಲ. ಶ್ರೀಮಂತನಿಗೆ ನಿರಾಶೆ ಆಯಿತು. ಆದರೆ, ಒಂದು ದಿನ, ಒಬ್ಬ ಭಿಕ್ಷುಕ(Bugger), ಅವನ ಕಚೇರಿಗೆ ಬಂದು, ತಾನು ಉಪಾಯ ತಿಳಿಸುತ್ತೇನೆ ಎಂದು ಹೇಳಿದ. ಶ್ರೀಮಂತನಿಗೆ ತುಂಬಾ ಆತುರ ಆಯಿತು. ಭಿಕ್ಷುಕ, ಶ್ರೀಮಂತನಿಗೆ ಕೇಳಿದ, ಒಡೆಯಾ, ನೀವು ಅಮೇರಿಕಾ, ಇಂಗ್ಲೆಂಡ್ ಅಥವಾ ಜಪಾನಿಗೆ ಹೋದಾಗ, ಅಲ್ಲಿ, ಭಾರತದ ರುಪಾಯಿ ಉಪಯೋಗಿಸುವಿರಾ ? ಶ್ರಿಮಂತ ಉತ್ತರಿಸಿದ, ಇಲ್ಲ. ಅಮೇರಿಕಾದಲ್ಲಿ ಡಾಲರ್, ಇಂಗ್ಲೆಂಡ್ನಲ್ಲಿ ಪೌಂಡ್, ಜಪಾನಿನಲ್ಲಿ ಯೆನ್ನ್ ಉಪಯೋಗ ಮಾಡ ಬೇಕಾಗುವುದು. ಅಲ್ಲಿಯ ಹಣ(ಕರೆನ್ಸಿ) ಬೇರೆ.

ಭಿಕ್ಷುಕ ಹೇಳಿದ, ಹಾಗಾದರೆ, ಭಾರತದಲ್ಲಿ ಉಪಯೋಗಿಸಿದ ರೂಪಾಯಿಯನ್ನು , ಸ್ವರ್ಗ ಲೋಕದಲ್ಲಿ ಉಪಯೋಗಿಸಲು ಸಾಧ್ಯವೇ ? ಅದು ಕೂಡಾ, ಬೇರೆಯೇ ಲೋಕ. ಸ್ವರ್ಗದ ಕರೆನ್ಸಿಯೇ ಬೇರೆ. ನಿಮ್ಮ ಸಂಪತ್ತನ್ನು, ಆ ಕರೆನ್ಸಿಯಲ್ಲಿ ಬದಲಾವಣೆ ಮಾಡಿ, ಸಾಯುವಾಗ, ತೆಗೆದು ಕೊಂಡು ಹೋಗ ಬೇಕಲ್ಲವೇ ? ಶ್ರೀಮಂತನಿಗೆ, ಕುತೂಹಲ ಇನ್ನೂ ಹೆಚ್ಚಾಯಿತು. ಅವನು ಭಿಕ್ಷುಕನಿಗೆ ಹೇಳಿದ, ಸುಮ್ಮನೆ ಸಮಯ ವ್ಯರ್ಥ ಮಾಡಬೇಡ, ಬೇಗ, ಸ್ವರ್ಗದ ಕರೆನ್ಸಿ ಏನು ಎಂದು ಹೇಳು.

ಭಿಕ್ಷುಕ ಹೇಳಿದ, ಸ್ವರ್ಗದಲ್ಲಿ, “ಪುಣ್ಯ” ಎಂಬ ಕರೆನ್ಸಿ ನಡೆಯುವುದು. ಭೂಮಿಯಲ್ಲಿ, ನಿನ್ನ ಸಂಪತ್ತಿನಿಂದ ಪುಣ್ಯವನ್ನು ಸಂಪಾದಿಸು, ಅದರಿಂದ ನೀನು ಸ್ವರ್ಗದಲ್ಲಿ ಸಂತೋಷವಾಗಿ ವ್ಯವಹರಿಸಬಹುದು. ನಿನ್ನ ಸಂಪತ್ತನ್ನು “ಪುಣ್ಯ” ಆಗಿ ಬದಲಾವಣೆ ಮಾಡಿಕೊಳ್ಳು. ಶ್ರೀಮಂತನ ಮನಸ್ಸು ಹಾಗು ಆತ್ಮ ಎರಡೂ ಬಾಗಿಲು ತೆಗೆಯಿತು. ಭೀಕ್ಷುಕನಿಗೆ ಹೇಳಿದ ಬಹುಮಾನ ಕೊಟ್ಟು ಕಳುಹಿಸಿದ. ಆ ದಿನದಿಂದಲೇ, ತನ್ನ ಸಂಪತ್ತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ಧಾನ ಮಾಡಲು ಪ್ರಾರಂಭ ಮಾಡಿದ. ಅವನ ಸಂಪತ್ತು “ಪುಣ್ಯ”ಎಂಬ ಕರೆನ್ಸಿ ಗೆ ಬದಲಾವಣೆ ಆಗಲು ಪ್ರಾರಂಭ ಆಯಿತು.

ಪುಣ್ಯವೇ ಸ್ವರ್ಗದ ಕರೆನ್ಸಿ…

Advertisement

(ಸಂಗ್ರಹ : ಡಿಜಿಟಲ್‌ ಮೀಡಿಯಾ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

2 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

3 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

4 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

4 hours ago

ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ

2025 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ…

4 hours ago