ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಾಗಿದೆ. ಮೆಟ್ಟಿನಡ್ಕ, ಕಂದ್ರಪ್ಪಾಡಿ, ಗುತ್ತಿಗಾರು, ಕಮಿಲ, ಬಳ್ಪ, ಸಂಪಾಜೆ, ಕಲ್ಲುಗುಂಡಿ, ಮಡಪ್ಪಾಡಿ ಮೊದಲಾದ ಕಡೆಗಳಲ್ಲಿ ಭೀಕರ ಮಳೆಯಾಗಿದೆ. ಭಾರೀ ಮಳೆಗೆ ವಳಲಂಬೆ ದೇವಸ್ಥಾನದ ಹೊರಾಂಗಣ ಮುಳುಗಿದೆ. ಅನೇಕ ವರ್ಷಗಳಿಂದ ಈ ಮಾದರಿಯ ಮಳೆ ಕಂಡಿರಲಿಲ್ಲ ಎಂದು ಜನರು ಹೇಳುತ್ತಾರೆ. ಚಿಲ್ತಡ್ಕ. ಮೆಟ್ಟಿನಡ್ಕ ಮೊದಲಾದ ಕಡೆಗಳಲ್ಲೂ ಹೊಳೆ ಉಕ್ಕಿ ಹರಿದಿದೆ. ಸದ್ಯ ಮಳೆ ಕಡಿಮೆಗೊಂಡಿದೆ.
ಭಾರೀ ಮಳೆಗೆ ಬಳ್ಪದ ಬೋಗಾಯನಕೆರೆ ತುಂಬಿ ರಸ್ತೆಗೆ ನೀರು ಉಕ್ಕಿದರೆ, ಪಂಜ ಹೊಳೆ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಲ್ಲುಗುಂಡಿ ಸಂಪಾಜೆಯಲ್ಲೂ ಸತತ ಮೂರನೇ ದಿನವೂ ಭಾರೀ ಮಳೆಯಾಗಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಕಲ್ಲುಗುಂಡಿ ಪ್ರದೇಶದಲ್ಲಿ ರಸ್ತೆಯಲ್ಲಿ ಭಾರೀ ನೀರು ಹರಿಯುತ್ತಿದೆ. ಕೆಲವು ಹೆದ್ದಾರಿಯಲ್ಲಿ ಹೊಳೆಯ ನೀರು ಹಿನ್ನೀರಿನಂತೆ ನಿಂತಿದೆ. ವಾಹನ ಸಂವಾರ ಸ್ಥಗಿತಗೊಂಡಿದೆ.
ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…
18-25 ವರ್ಷ ವಯಸ್ಸಿನ Gen Z ಯುವಕರನ್ನು ಸೆಳೆಯಲು ಬಿಜೆಪಿ ‘ತರುಣ ಮೋರ್ಚಾ’…
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ದಾಖಲೆಯ ಮಟ್ಟದಿಂದ ಭಾರೀ ಕುಸಿತ ಕಂಡಿದ್ದು, ಚೀನಾದ ಖರೀದಿ…
ಕರ್ನಾಟಕದಲ್ಲಿ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಚುರುಕುಗೊಂಡಿಲ್ಲ. ಎಲ್ ನಿನೋ ಪ್ರಭಾವದಿಂದ ಮಳೆಯ…
2026ರ ಖಾರಿಫ್ ಹಂಗಾಮಿಗೆ ಸಿದ್ಧತೆ ಪರಿಶೀಲಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್…
ಇಂಡೋನೇಷ್ಯಾದ ಸ್ಟಾರ್ಟ್ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…