ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಾಗಿದೆ. ಮೆಟ್ಟಿನಡ್ಕ, ಕಂದ್ರಪ್ಪಾಡಿ, ಗುತ್ತಿಗಾರು, ಕಮಿಲ, ಬಳ್ಪ, ಸಂಪಾಜೆ, ಕಲ್ಲುಗುಂಡಿ, ಮಡಪ್ಪಾಡಿ ಮೊದಲಾದ ಕಡೆಗಳಲ್ಲಿ ಭೀಕರ ಮಳೆಯಾಗಿದೆ. ಭಾರೀ ಮಳೆಗೆ ವಳಲಂಬೆ ದೇವಸ್ಥಾನದ ಹೊರಾಂಗಣ ಮುಳುಗಿದೆ. ಅನೇಕ ವರ್ಷಗಳಿಂದ ಈ ಮಾದರಿಯ ಮಳೆ ಕಂಡಿರಲಿಲ್ಲ ಎಂದು ಜನರು ಹೇಳುತ್ತಾರೆ. ಚಿಲ್ತಡ್ಕ. ಮೆಟ್ಟಿನಡ್ಕ ಮೊದಲಾದ ಕಡೆಗಳಲ್ಲೂ ಹೊಳೆ ಉಕ್ಕಿ ಹರಿದಿದೆ. ಸದ್ಯ ಮಳೆ ಕಡಿಮೆಗೊಂಡಿದೆ.
Heavy rain waterlogged into Valalambe temple.
ಭಾರೀ ಮಳೆಗೆ ವಳಲಂಬೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ನೀರು.
#rain #HeavyRain #KarnatakaRain #sulliarains #ruralmirror #ಮಳೆ #ವಳಲಂಬೆ pic.twitter.com/Aezl4KoBc8Advertisement— theruralmirror (@ruralmirror) August 3, 2022
ಭಾರೀ ಮಳೆಗೆ ಬಳ್ಪದ ಬೋಗಾಯನಕೆರೆ ತುಂಬಿ ರಸ್ತೆಗೆ ನೀರು ಉಕ್ಕಿದರೆ, ಪಂಜ ಹೊಳೆ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಲ್ಲುಗುಂಡಿ ಸಂಪಾಜೆಯಲ್ಲೂ ಸತತ ಮೂರನೇ ದಿನವೂ ಭಾರೀ ಮಳೆಯಾಗಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಕಲ್ಲುಗುಂಡಿ ಪ್ರದೇಶದಲ್ಲಿ ರಸ್ತೆಯಲ್ಲಿ ಭಾರೀ ನೀರು ಹರಿಯುತ್ತಿದೆ. ಕೆಲವು ಹೆದ್ದಾರಿಯಲ್ಲಿ ಹೊಳೆಯ ನೀರು ಹಿನ್ನೀರಿನಂತೆ ನಿಂತಿದೆ. ವಾಹನ ಸಂವಾರ ಸ್ಥಗಿತಗೊಂಡಿದೆ.

ಬೋಗಾಯನಕೆರೆಯ ಪರಿಸರ

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಭಾರೀ ಮಳೆ | ಗ್ರಾಮೀಣ ಭಾಗದಲ್ಲಿ ಮಳೆ ಅಬ್ಬರ | ವಳಲಂಬೆ ದೇವಸ್ಥಾನಕ್ಕೆ ನುಗ್ಗಿದ ನೀರು |"