ಆರೋಗ್ಯ

ಎಸಿಡಿಟಿ ಸಮಸ್ಯೆಗೆ ಇದೆಯೇ… ? ಏನಿದೆ ಪರಿಹಾರ…? ಇಲ್ಲಿದೆ ಟಿಪ್ಸ್…‌ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಆಸಿಡಿಟಿ ಸಮಸ್ಯೆ ಇಂದಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಬಿಟ್ಟಿದೆ..!.ಹೌದು , ಆಸಿಡಿಟಿ ಸಮಸ್ಯೆ ಈಗ ಎಲ್ಲರಿಗೂ  ಸಮಸ್ಯೆಯಾಗಿ ಬಿಟ್ಟಿದೆ.

Advertisement

ಇದಕ್ಕೆ ಪ್ರಮುಖ ಕಾರಣ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು, ಹೆಚ್ಚು ಮಸಾಲೆಯುಕ್ತ ಅಥವಾ ಖಾರವಾಗಿರುವ ಆಹಾರ -ಪದಾರ್ಥಗಳ ಸೇವನೆ ಮಾಡುವುದು, ಎಣ್ಣೆಯಾಂಶ ಹೆಚ್ಚಿರುವ ಜಂಕ್‌ ಫುಡ್‌ಗಳ ಸೇವನೆ, ಪ್ರತಿದಿನ ಮೂರು-ನಾಲ್ಕು ಬಾರಿ ಕಾಫಿ ಕುಡಿಯವುದು, ಸರಿಯಾಗಿ ನೀರು ಕುಡಿಯದೇ ಇರುವುದು, ಹೀಗೆ ಇಂತಹ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ದೇಹದಲ್ಲಿರುವ ಪಿಎಚ್ ಪ್ರಮಾಣ ದಲ್ಲಿ ವ್ಯತ್ಯಾಸ ಉಂಟಾಗಿ ಮೊದಲು ಕಾಡುವ ಸಮಸ್ಯೆಯೇ ಈ ಆಸಿಡಿಟಿ ಇಲ್ಲಾಂದ್ರೆ ಹುಳಿತೇಗು. ಈ ಸಮಸ್ಯೆಗೆ ಏನೆಲ್ಲಾ ಆಯುರ್ವೇದ ಮನೆಮದ್ದುಗಳು ಇವೆ ಎನ್ನುವುದನ್ನು ನೋಡೋಣ…

ಆಸಿಡಿಟಿ ನಿಯಂತ್ರಣಕ್ಕೆ ಬರಬೇಕೆಂದರೆ, ಮೊದಲಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ಮಾಡಬೇಕು. ಕೆಲವೊಮ್ಮೆ ಕೆಲಸದ ಒತ್ತಡದಿಂದ ಅಥವಾ ಪ್ರತಿ ದಿನದ ಜಂಜಾಟದ ಜೀವನ ಶೈಲಿಯಿಂದಾಗಿ, ಸರಿ ಯಾದ ಸಮಯಕ್ಕೆ ಊಟ-ತಿಂಡಿ ಮಾಡದೇ, ತಮಗೆ ಸಮಯ ಸಿಕ್ಕಾಗಿ ಊಟ-ತಿಂಡಿ ಮಾಡುತ್ತಾ ಬಂದರೆ, ಆಸಿಡಿಟಿ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ ಹಸಿವು ಶುರುವಾದ ಸಮಯದಲ್ಲಿ ಕೂಡಲೇ ಟೀ-ಕಾಫಿ ಕುಡಿಯುವ ಬದಲು ಊಟ ಅಥವಾ ಆರೋಗ್ಯಕರ ತಿಂಡಿಗಳನ್ನು ಸೇವನೆ ಮಾಡುವುದರಿಂದ ಆಸಿಡಿಟಿಯನ್ನು ನಿಯಂತ್ರಿಸಬಹುದಾಗಿದೆ.

ಹಾಲಿನ ಉಪ ಉತ್ಪನ್ನವಾದ ಮೊಸರು ಮಜ್ಜಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪ್ರತಿದಿನ ಊಟದ ಬಳಿಕ ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.

ಪ್ರಮುಖವಾಗಿ ಮಜ್ಜಿಗೆಯಲ್ಲಿ ಕಂಡುಬರುವ ಆರೋಗ್ಯಕಾರಿ ಅಂಶಗಳು ಆಸಿಡಿಟಿಗೆ ಕಾರಣವಾಗುವ ಆಮ್ಲೀಯತೆ ಪ್ರಭಾವವನ್ನು ಹೋಗಲಾಡಿಸಿ ಹುಳಿ ತೇಗು ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕುತ್ತದೆ.​

ಶುಂಠಿ ಮತ್ತು ಉಪ್ಪು ಆಸಿಡಿಟಿಗೆ ಸಮಸ್ಯೆಗೆ ಒಳ್ಳೆಯ ಮನೆ ಮದ್ದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಪದೇ ಪದೇ ಆಸಿಡಿಟಿ ಸಮಸ್ಯೆ ಎದುರಿಸುವವರು ಊಟ ಮಾಡುವ ಹತ್ತು ನಿಮಿಷದ ಮೊದಲು, ಚಿಟಿಕೆ ಯಷ್ಟು ಉಪ್ಪಿನ ಜೊತೆಗೆ ಸಣ್ಣ ತುಂಡು ಹಸಿಶುಂಠಿ ಅಗೆಯಿರಿ ಹಾಗೂ ಇದರ ರಸವನ್ನು ನಿಧಾನಕ್ಕೆ ನುಂಗುತ್ತಾ ಬನ್ನಿ. ಹೀಗೆ ವಾರದಲ್ಲಿ ಮೂರು-ನಾಲ್ಕು ಬಾರಿ ಮಾಡುತ್ತಾ ಬಂದರೆ, ಆಸಿಡಿಟಿ, ಹುಳಿತೇಗು ಹಾಗೂ ಅಜೀರ್ಣದಂತಹ ಸಮಸ್ಯೆಗಳು ಬಹಳ ಬೇಗನೇ ದೂರವಾ ಗುತ್ತದೆ.​

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

15 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

16 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

16 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

1 day ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

2 days ago