Advertisement
ಸುದ್ದಿಗಳು

ವೀಳ್ಯದೆಲೆಯ ಬೆಲೆ ಗಗನಕ್ಕೆ | ಈಗ ನಾಲಿಗೆ ಜೊತೆ ಕಿಸೆನೂ ಕೆಂಪು..! |

Share

ಶುಭ ಸಮಾರಂಭಗಳಿಗೆ ತಾಂಬೂಲ ತುಂಬಾ ಭಾರ..! ವೀಳ್ಯದೆಲೆ ಒಂದು ಕಟ್ಟಿಗೆ ಒಂದುನೂರ ಐವತ್ತು ರೂಗಳಷ್ಟುಏರಿದ ದರ. ಇನ್ನು ದಿನಂಪ್ರತಿ ಎಲೆಅಡಿಕೆ ಹಾಕಿಕೊಳ್ಳುವವರ ನಾಲಿಗೆಗಿಂತ ಕಣ್ಣೇ ಕೆಂಪಾಗಿಸುತ್ತೆ ವೀಳ್ಯದೆಲೆ. ಇನ್ನು ಮುಂಗಾರು ಮಳೆ ಆರಂಭಗೊಳ್ಳುವವರೆಗೂ ದರ ಇಳಿಯುವುದು ಅನುಮಾನವೇ.

Advertisement
Advertisement
Advertisement
Advertisement

ಹೌದು ಸಮಾರಂಭ ಯಾವುದೇ ಇರಲಿ, ಪೂಜಾ ಕಾರ್ಯಕ್ರಮಗಳೇ ಇರಲಿ ವೀಳ್ಯದೆಲೆ ಬೇಕೇಬೇಕು. ಆದರೆ ಈ ವೀಳ್ಯದೆಲೆಯ ಬೆಲೆ ನೋಡಿದರೆ ಮುಗಿಲೆತ್ತರಕ್ಕೇರಿದೆ. ಹತ್ತುರೂಗೆ, ಇಪ್ಪತ್ತು ರೂಪಾಯಿಗಳಿಗೆ ವಿಳ್ಯದೆಲೆ ಕೊಡಿ ಎಂದರೆ ಇಲ್ಲಾ ರೀ..ಬರೋದಿಲ್ಲ, ಯಾಕಪ್ಪಾ ಎಂದರೆ ಸ್ವಾಮಿ ಒಂದು ಕಟ್ಟು ವಿಳ್ಯದೆಲೆ ನೂರೈವತ್ತು ರೂಪಾಯಿ ಎಂದಾಗ ದಿನವೂ ಎಲೆಅಡಿಕೆ ಜಗಿಯುವವರಿಗೆ ಹಾಗೆ ಎಲೆಅಡಿಕೆ ತಲೆಗೆರುತ್ತೆ. ಮಳೆಗಾಲ ಕೊನೆಯಾಗಿ ಚಳಿಗಾಲದ ಆರಂಭದೊತ್ತಿಗೆ ವಿಳ್ಳೆದೆಲೆ ಬಳ್ಳಿಯಲ್ಲಿ(ಅಂಬು) ಚಿಗುರುವುದಿಲ್ಲ. ಈ ಕಾರಣ ವಿಳ್ಳೆದೆಲೆಯ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು ವಿಳ್ಯದೆಲೆ ತೋಟದಲ್ಲಿ ನೀರು ನಿಂತುಕೊಂಡಿದ್ದರ ಪರಿಣಾಮ, ಸಾಕಷ್ಟು ತಂಗಾಳಿ ಬೀಸಿರುವುದರಿಂದ ಸಾಕಷ್ಟು ಎಲೆಬಳ್ಳಿಗಳು ಕೊಳೆತುಹೋಗಿವೆ. ಹಾಗಾಗಿ ಮಾರುಕಟ್ಟೆಗೆ ಯಥೇಚ್ಛಾ ವೀಳ್ಯದೆಲೆ ದಾಸ್ತಾನು ಆಗುತ್ತಿಲ್ಲ.

Advertisement

ನಿಮ್ಮ ಮನೆ ಕೈ ತೋಟದಲ್ಲಿ ಒಂದು ಬಳ್ಳಿ ನೆಟ್ಟಿದ್ದರೆ ಬಚಾವ್. ಇಲ್ಲಾಂದ್ರೆ ಎಲೆ ಹಾಕದೆ ಬರೀ ಅಡಿಕೆಯಲ್ಲಿ ಬಾಯಿ ಅಲ್ಲಾಡಿಸ ಬೇಕಷ್ಟೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2025′

ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ `ಸ್ವರಶ್ರೀ 2025'  ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ…

3 hours ago

ತಮಿಳುನಾಡು ಅಡಿಕೆ | ಬೆಲೆ ಕುಸಿತದಿಂದ ತಮಿಳುನಾಡು ಅಡಿಕೆ ಬೆಳೆಗಾರರಿಗೆ ಸಮಸ್ಯೆ | ನೇರ ಖರೀದಿ ಕೇಂದ್ರ ತೆರೆಯಲು ಬೆಳೆಗಾರರ ಒತ್ತಾಯ |

ಕಳೆದ 5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಇದುವರೆಗೂ…

8 hours ago

ಅಡಿಕೆಯ ಸಂಶೋಧನೆಗೆ ಆಯುರ್ವೇದ ಕಾಲೇಜು ಸ್ಥಾಪನೆಗೆ ಒತ್ತಾಯ

ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದರೆ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ…

16 hours ago

ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿ ವಿಸ್ತರಣೆ

ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ   ಕೇಂದ್ರ ಕೃಷಿ ಸಚಿವರಲ್ಲಿ…

17 hours ago

ದಾವಣಗೆರೆ | ಅಂತರ್ಜಲ ಬಳಕೆಗೆ ನಿರಾಪೇಕ್ಷಣಾ ಪತ್ರ ಕಡ್ಡಾಯ

ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಕಡ್ಡಾಯವಾಗಿ…

17 hours ago

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದಲ್ಲಿ ಅನುಷ್ಠಾನ ಸಾಧ್ಯವಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…

1 day ago