ಶುಭ ಸಮಾರಂಭಗಳಿಗೆ ತಾಂಬೂಲ ತುಂಬಾ ಭಾರ..! ವೀಳ್ಯದೆಲೆ ಒಂದು ಕಟ್ಟಿಗೆ ಒಂದುನೂರ ಐವತ್ತು ರೂಗಳಷ್ಟುಏರಿದ ದರ. ಇನ್ನು ದಿನಂಪ್ರತಿ ಎಲೆಅಡಿಕೆ ಹಾಕಿಕೊಳ್ಳುವವರ ನಾಲಿಗೆಗಿಂತ ಕಣ್ಣೇ ಕೆಂಪಾಗಿಸುತ್ತೆ ವೀಳ್ಯದೆಲೆ. ಇನ್ನು ಮುಂಗಾರು ಮಳೆ ಆರಂಭಗೊಳ್ಳುವವರೆಗೂ ದರ ಇಳಿಯುವುದು ಅನುಮಾನವೇ.
ಹೌದು ಸಮಾರಂಭ ಯಾವುದೇ ಇರಲಿ, ಪೂಜಾ ಕಾರ್ಯಕ್ರಮಗಳೇ ಇರಲಿ ವೀಳ್ಯದೆಲೆ ಬೇಕೇಬೇಕು. ಆದರೆ ಈ ವೀಳ್ಯದೆಲೆಯ ಬೆಲೆ ನೋಡಿದರೆ ಮುಗಿಲೆತ್ತರಕ್ಕೇರಿದೆ. ಹತ್ತುರೂಗೆ, ಇಪ್ಪತ್ತು ರೂಪಾಯಿಗಳಿಗೆ ವಿಳ್ಯದೆಲೆ ಕೊಡಿ ಎಂದರೆ ಇಲ್ಲಾ ರೀ..ಬರೋದಿಲ್ಲ, ಯಾಕಪ್ಪಾ ಎಂದರೆ ಸ್ವಾಮಿ ಒಂದು ಕಟ್ಟು ವಿಳ್ಯದೆಲೆ ನೂರೈವತ್ತು ರೂಪಾಯಿ ಎಂದಾಗ ದಿನವೂ ಎಲೆಅಡಿಕೆ ಜಗಿಯುವವರಿಗೆ ಹಾಗೆ ಎಲೆಅಡಿಕೆ ತಲೆಗೆರುತ್ತೆ. ಮಳೆಗಾಲ ಕೊನೆಯಾಗಿ ಚಳಿಗಾಲದ ಆರಂಭದೊತ್ತಿಗೆ ವಿಳ್ಳೆದೆಲೆ ಬಳ್ಳಿಯಲ್ಲಿ(ಅಂಬು) ಚಿಗುರುವುದಿಲ್ಲ. ಈ ಕಾರಣ ವಿಳ್ಳೆದೆಲೆಯ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು ವಿಳ್ಯದೆಲೆ ತೋಟದಲ್ಲಿ ನೀರು ನಿಂತುಕೊಂಡಿದ್ದರ ಪರಿಣಾಮ, ಸಾಕಷ್ಟು ತಂಗಾಳಿ ಬೀಸಿರುವುದರಿಂದ ಸಾಕಷ್ಟು ಎಲೆಬಳ್ಳಿಗಳು ಕೊಳೆತುಹೋಗಿವೆ. ಹಾಗಾಗಿ ಮಾರುಕಟ್ಟೆಗೆ ಯಥೇಚ್ಛಾ ವೀಳ್ಯದೆಲೆ ದಾಸ್ತಾನು ಆಗುತ್ತಿಲ್ಲ.
ನಿಮ್ಮ ಮನೆ ಕೈ ತೋಟದಲ್ಲಿ ಒಂದು ಬಳ್ಳಿ ನೆಟ್ಟಿದ್ದರೆ ಬಚಾವ್. ಇಲ್ಲಾಂದ್ರೆ ಎಲೆ ಹಾಕದೆ ಬರೀ ಅಡಿಕೆಯಲ್ಲಿ ಬಾಯಿ ಅಲ್ಲಾಡಿಸ ಬೇಕಷ್ಟೆ.
ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ `ಸ್ವರಶ್ರೀ 2025' ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ…
ಕಳೆದ 5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಇದುವರೆಗೂ…
ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದರೆ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ…
ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ ಕೇಂದ್ರ ಕೃಷಿ ಸಚಿವರಲ್ಲಿ…
ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಕಡ್ಡಾಯವಾಗಿ…
ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…