Advertisement
ಸುದ್ದಿಗಳು

ಗರ್ಭಶುದ್ಧಿಗೆ ಸಂಸ್ಕೃತ ಪಠಣ , ದೇಶಭಕ್ತಿ-ಸಂಸ್ಕೃತಿ ಕಲಿಸಲು ಗರ್ಭಸಂಸ್ಕಾರ ಅಭಿಯಾನಕ್ಕೆ ಮುಂದಾದ RSS

Share

ಪ್ರತೀ ತಾಯಿಗೂ ತನ್ನ ಮಗು ಶ್ರೀರಾಮನಂತ ಗುಣವುಳ್ಳವನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಅವಳು ತನ್ನ ಜೀವನವನ್ನೇ ಮುಡಿಪಿಟ್ಟು ಮಕ್ಕಳನ್ನು ಬೆಳೆಸುತ್ತಾಳೆ. ಅವಳ ಪ್ರಯತ್ನ ಕೆಲವೊಮ್ಮೆ ಕೈ ಕೊಡಿಕೊಡುತ್ತದೆ.  ಇತ್ತೀಚೆಗೆ ಬಾಲಾಪರಾಧಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳೇ ತಂದೆ ತಾಯಿಯನ್ನು ಕೊಲೆ ಮಾಡುವುದು, ಅತ್ಯಾಚಾರಿಗಳಾಗುವುದು ನೋಡಿದ್ದೇವೆ. ಇಂತಹ ಸನ್ನಿವೇಶಗಳಿಂದ ಹೊರತರಲು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮುಂದಾಗಿದೆ. ಈ ಮೂಲಕ ಗರ್ಭ ಸಂಸ್ಕೃತಿ ಅಳವಡಿಸಿಕೊಂಡು ತಾಯಂದಿರು ಶ್ರೀರಾಮನಂತಹ ಮಕ್ಕಳಿಗೆ ಜನ್ಮ ನೀಡಲು ಸಾಧ್ಯ. ಹಾಗೆ ಮಕ್ಕಳು ಪೋಷಕರಿಗೆ ಬದ್ಧರಾಗಿ ಮತ್ತು ದೇಶ ಕಾಪಾಡುವ ಪ್ರಜೆಗಳಾಗುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕುತ್ತಿದೆ RSS.

ಮಕ್ಕಳಿಗೆ ಶಿಶು ಕಾಲದಲ್ಲೇ ದೇಶಭಕ್ತಿ, ಸಂಸ್ಕೃತಿ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಲು ‘ಗರ್ಭಸಂಸ್ಕಾರ’ ಎಂಬ ಅಭಿಯಾನವನ್ನು ನಡೆಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.

ದೆಹಲಿಯ ಜೆಎನ್‌ಯೂ ವಿಶ್ವವಿದ್ಯಾಲಯದಲ್ಲಿ ನಡೆದ ಗರ್ಭ ಸಂಸ್ಕಾರ (ಗರ್ಭಧಾರಣೆ ಸಂಸ್ಕೃತಿ) ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಮುಂದಿನ ಪೀಳಿಗೆಗೆ ಹಿಂದೂ ಸಂಸ್ಕೃತಿ ಆಚರಣೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಗರ್ಭದಲ್ಲಿಯೇ ಶಿಶುಗಳಿಗೆ ಹಿಂದೂ ಸಂಸ್ಕೃತಿ ಪಾಠ ಕಲಿಸಲು ಮುಂದಾಗಿದೆ ಎಂದರು.

ಗರ್ಭಾವಸ್ಥೆಯಲ್ಲಿ ಗೀತ ಪಠಣ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೆಹಲಿಯ ಏಮ್ಸ್ ಸೇರಿದಂತೆ ದೇಶದ ವಿವಿಧ ಭಾಗದ ವೈದ್ಯರು, ಸ್ತ್ರೀರೋಗ ತಜ್ಞರು, ಯೋಗ ತರಬೇತುದಾರರು ಮತ್ತು ಆಯುರ್ವೇದ ವೈದ್ಯರು ಸೇರಿದಂತೆ 12 ರಾಜ್ಯಗಳಿಂದ 70 ರಿಂದ 80 ವೈದ್ಯರು ಅದರಲ್ಲಿಯೂ ಹೆಚ್ಚಾಗಿ ಸ್ತ್ರೀ ರೋಗ, ಆಯುರ್ವೇದ ತಜ್ಞರು ಭಾಗವಹಿಸಿದ್ದರು. ಗರ್ಭದಲ್ಲಿರುವ ಶಿಶುಗಳಿಗೆ ಹಿಂದೂ ಸಂಸ್ಕೃತಿಯ ಆಚರಣೆ, ಮೌಲ್ಯಗಳನ್ನು ತಿಳಿಸಲು ಗರ್ಭಾವಸ್ಥೆಯಲ್ಲಿಯೇ ಭಗವದ್ಗೀತೆ ಪಠಣ, ರಾಮಾಯಣ, ಯೋಗಾಭ್ಯಾಸ ಮುಂತಾದ ಸಂಸ್ಕೃತಿ ಪಾಠ ಕಲಿಸಲು ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್‌ ಮುಂದಾಗಿದೆ ಎಂದು ಮಾಧುರಿ ಮರಾಠೆ ಹೇಳಿದರು.

1000 ಮಹಿಳೆಯರನ್ನು ತಲುಪುವ ಗುರಿಗರ್ಭಾವಸ್ಥೆಯಲ್ಲಿ ಪ್ರಾರಂಭವಾಗುವ ಈ ಕಾರ್ಯಕ್ರಮವು ಶಿಶುಗಳಿಗೆ ಎರಡು ವರ್ಷ ತಲುಪುವವರೆಗೆ ಮುಂದುವರಿಯುತ್ತದೆ. ಗರ್ಭದಲ್ಲಿರುವ ಮಗು 500 ಪದಗಳನ್ನು ಕಲಿಯಬಹುದು. ಈ ಅಭಿಯಾನದ ಗುರಿ ಮತ್ತು ಉದ್ದೇಶ ಮಗುವಿಗದೆ ಗರ್ಭದಲ್ಲಿಯೇ ಸಂಸ್ಕಾರ ಕಲಿಸುವುದು. ಈ ಅಭಿಯಾನಕ್ಕಾಗಿ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್‌ ಕನಿಷ್ಠ ಆರಂಭಿಕ ಹಂತದಲ್ಲಿ ಕನಿಷ್ಠ 1000 ಮಹಿಳೆಯರನ್ನು ತಲುಪಲು ಯೋಜನೆ ರೂಪಿಸಿಕೊಂಡಿದೆ ಎಂದು ಮಾಧುರಿ ಮರಾಠೆ ಹೇಳಿದರು.

ಗರ್ಭಶುದ್ಧಿಗೆ ಸಂಸ್ಕೃತದ ಓದು: ಇನ್ನು, ಗರ್ಭಶುದ್ಧಿಯ ಭಾಗವಾಗಿ ಮಹಿಳೆಯು ಗರ್ಭಾವಸ್ಥೆಯಲ್ಲಿ ಸಂಸ್ಕೃತವನ್ನು ಓದ ಬೇಕು, ಗೀತಾ ಪಠಣೆ ಮಾಡಬೇಕು ಎಂದು ಹೇಳಿದ ಸಂಸ್ಥೆಯ ಸಹ ಸಂಚಾಲಕಿ ಡಾ ರಜನಿ ಮಿತ್ತಲ್, ಗರ್ಭ ಸಂಸ್ಕಾರವನ್ನು ಸರಿಯಾಗಿ ನಡೆಸಿದರೆ ಗರ್ಭದಲ್ಲಿ ಮಗುವಿನ ಡಿಎನ್ಎ ಕೂಡ ಬದಲಾಯಿಸಬಹುದು. ದೈಹಿಕ ಆರೋಗ್ಯದ ಜೊತೆಗೆ ಗರ್ಭಾಶಯದ ಶುದ್ಧೀಕರಣ ಮತ್ತು ಸಕಾರಾತ್ಮಕತೆಯೂ ಹೆಚ್ಚಿನ ಅಗತ್ಯವಿದೆ. ದೇಶದಲ್ಲಿ ಪ್ರತಿ ವರ್ಷ 1000 ಗರ್ಭ ಸಂಸ್ಕಾರದ ಮಕ್ಕಳನ್ನು ಒದಗಿಸುವುದು ನಮ್ಮ ಉದ್ದೇಶ. ಇದರಿಂದ ಭಾರತದ ಹಳೆಯ ಸಂಸ್ಕೃತಿಯನ್ನು ಮರು ಸ್ಥಾಪಿಸಲು ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

8 hours ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

16 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

24 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

2 days ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago