Advertisement
ಸುದ್ದಿಗಳು

ವೀಳ್ಯದೆಲೆಯ ಬೆಲೆ ಗಗನಕ್ಕೆ | ಈಗ ನಾಲಿಗೆ ಜೊತೆ ಕಿಸೆನೂ ಕೆಂಪು..! |

Share

ಶುಭ ಸಮಾರಂಭಗಳಿಗೆ ತಾಂಬೂಲ ತುಂಬಾ ಭಾರ..! ವೀಳ್ಯದೆಲೆ ಒಂದು ಕಟ್ಟಿಗೆ ಒಂದುನೂರ ಐವತ್ತು ರೂಗಳಷ್ಟುಏರಿದ ದರ. ಇನ್ನು ದಿನಂಪ್ರತಿ ಎಲೆಅಡಿಕೆ ಹಾಕಿಕೊಳ್ಳುವವರ ನಾಲಿಗೆಗಿಂತ ಕಣ್ಣೇ ಕೆಂಪಾಗಿಸುತ್ತೆ ವೀಳ್ಯದೆಲೆ. ಇನ್ನು ಮುಂಗಾರು ಮಳೆ ಆರಂಭಗೊಳ್ಳುವವರೆಗೂ ದರ ಇಳಿಯುವುದು ಅನುಮಾನವೇ.

Advertisement
Advertisement

ಹೌದು ಸಮಾರಂಭ ಯಾವುದೇ ಇರಲಿ, ಪೂಜಾ ಕಾರ್ಯಕ್ರಮಗಳೇ ಇರಲಿ ವೀಳ್ಯದೆಲೆ ಬೇಕೇಬೇಕು. ಆದರೆ ಈ ವೀಳ್ಯದೆಲೆಯ ಬೆಲೆ ನೋಡಿದರೆ ಮುಗಿಲೆತ್ತರಕ್ಕೇರಿದೆ. ಹತ್ತುರೂಗೆ, ಇಪ್ಪತ್ತು ರೂಪಾಯಿಗಳಿಗೆ ವಿಳ್ಯದೆಲೆ ಕೊಡಿ ಎಂದರೆ ಇಲ್ಲಾ ರೀ..ಬರೋದಿಲ್ಲ, ಯಾಕಪ್ಪಾ ಎಂದರೆ ಸ್ವಾಮಿ ಒಂದು ಕಟ್ಟು ವಿಳ್ಯದೆಲೆ ನೂರೈವತ್ತು ರೂಪಾಯಿ ಎಂದಾಗ ದಿನವೂ ಎಲೆಅಡಿಕೆ ಜಗಿಯುವವರಿಗೆ ಹಾಗೆ ಎಲೆಅಡಿಕೆ ತಲೆಗೆರುತ್ತೆ. ಮಳೆಗಾಲ ಕೊನೆಯಾಗಿ ಚಳಿಗಾಲದ ಆರಂಭದೊತ್ತಿಗೆ ವಿಳ್ಳೆದೆಲೆ ಬಳ್ಳಿಯಲ್ಲಿ(ಅಂಬು) ಚಿಗುರುವುದಿಲ್ಲ. ಈ ಕಾರಣ ವಿಳ್ಳೆದೆಲೆಯ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು ವಿಳ್ಯದೆಲೆ ತೋಟದಲ್ಲಿ ನೀರು ನಿಂತುಕೊಂಡಿದ್ದರ ಪರಿಣಾಮ, ಸಾಕಷ್ಟು ತಂಗಾಳಿ ಬೀಸಿರುವುದರಿಂದ ಸಾಕಷ್ಟು ಎಲೆಬಳ್ಳಿಗಳು ಕೊಳೆತುಹೋಗಿವೆ. ಹಾಗಾಗಿ ಮಾರುಕಟ್ಟೆಗೆ ಯಥೇಚ್ಛಾ ವೀಳ್ಯದೆಲೆ ದಾಸ್ತಾನು ಆಗುತ್ತಿಲ್ಲ.

Advertisement

ನಿಮ್ಮ ಮನೆ ಕೈ ತೋಟದಲ್ಲಿ ಒಂದು ಬಳ್ಳಿ ನೆಟ್ಟಿದ್ದರೆ ಬಚಾವ್. ಇಲ್ಲಾಂದ್ರೆ ಎಲೆ ಹಾಕದೆ ಬರೀ ಅಡಿಕೆಯಲ್ಲಿ ಬಾಯಿ ಅಲ್ಲಾಡಿಸ ಬೇಕಷ್ಟೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |

ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…

26 mins ago

ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…

44 mins ago

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

18 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

18 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

18 hours ago