ಶುಭ ಸಮಾರಂಭಗಳಿಗೆ ತಾಂಬೂಲ ತುಂಬಾ ಭಾರ..! ವೀಳ್ಯದೆಲೆ ಒಂದು ಕಟ್ಟಿಗೆ ಒಂದುನೂರ ಐವತ್ತು ರೂಗಳಷ್ಟುಏರಿದ ದರ. ಇನ್ನು ದಿನಂಪ್ರತಿ ಎಲೆಅಡಿಕೆ ಹಾಕಿಕೊಳ್ಳುವವರ ನಾಲಿಗೆಗಿಂತ ಕಣ್ಣೇ ಕೆಂಪಾಗಿಸುತ್ತೆ ವೀಳ್ಯದೆಲೆ. ಇನ್ನು ಮುಂಗಾರು ಮಳೆ ಆರಂಭಗೊಳ್ಳುವವರೆಗೂ ದರ ಇಳಿಯುವುದು ಅನುಮಾನವೇ.
ಹೌದು ಸಮಾರಂಭ ಯಾವುದೇ ಇರಲಿ, ಪೂಜಾ ಕಾರ್ಯಕ್ರಮಗಳೇ ಇರಲಿ ವೀಳ್ಯದೆಲೆ ಬೇಕೇಬೇಕು. ಆದರೆ ಈ ವೀಳ್ಯದೆಲೆಯ ಬೆಲೆ ನೋಡಿದರೆ ಮುಗಿಲೆತ್ತರಕ್ಕೇರಿದೆ. ಹತ್ತುರೂಗೆ, ಇಪ್ಪತ್ತು ರೂಪಾಯಿಗಳಿಗೆ ವಿಳ್ಯದೆಲೆ ಕೊಡಿ ಎಂದರೆ ಇಲ್ಲಾ ರೀ..ಬರೋದಿಲ್ಲ, ಯಾಕಪ್ಪಾ ಎಂದರೆ ಸ್ವಾಮಿ ಒಂದು ಕಟ್ಟು ವಿಳ್ಯದೆಲೆ ನೂರೈವತ್ತು ರೂಪಾಯಿ ಎಂದಾಗ ದಿನವೂ ಎಲೆಅಡಿಕೆ ಜಗಿಯುವವರಿಗೆ ಹಾಗೆ ಎಲೆಅಡಿಕೆ ತಲೆಗೆರುತ್ತೆ. ಮಳೆಗಾಲ ಕೊನೆಯಾಗಿ ಚಳಿಗಾಲದ ಆರಂಭದೊತ್ತಿಗೆ ವಿಳ್ಳೆದೆಲೆ ಬಳ್ಳಿಯಲ್ಲಿ(ಅಂಬು) ಚಿಗುರುವುದಿಲ್ಲ. ಈ ಕಾರಣ ವಿಳ್ಳೆದೆಲೆಯ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು ವಿಳ್ಯದೆಲೆ ತೋಟದಲ್ಲಿ ನೀರು ನಿಂತುಕೊಂಡಿದ್ದರ ಪರಿಣಾಮ, ಸಾಕಷ್ಟು ತಂಗಾಳಿ ಬೀಸಿರುವುದರಿಂದ ಸಾಕಷ್ಟು ಎಲೆಬಳ್ಳಿಗಳು ಕೊಳೆತುಹೋಗಿವೆ. ಹಾಗಾಗಿ ಮಾರುಕಟ್ಟೆಗೆ ಯಥೇಚ್ಛಾ ವೀಳ್ಯದೆಲೆ ದಾಸ್ತಾನು ಆಗುತ್ತಿಲ್ಲ.
ನಿಮ್ಮ ಮನೆ ಕೈ ತೋಟದಲ್ಲಿ ಒಂದು ಬಳ್ಳಿ ನೆಟ್ಟಿದ್ದರೆ ಬಚಾವ್. ಇಲ್ಲಾಂದ್ರೆ ಎಲೆ ಹಾಕದೆ ಬರೀ ಅಡಿಕೆಯಲ್ಲಿ ಬಾಯಿ ಅಲ್ಲಾಡಿಸ ಬೇಕಷ್ಟೆ.
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…