ಆ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು….!

November 30, 2020
11:42 PM

ಇದೊಂದು ಅಭಿಪ್ರಾಯವನ್ನು ರೂರಲ್‌ ಮಿರರ್‌ ಪ್ರಕಟಿಸಲು ಆಸಕ್ತಿ ವಹಿಸಿದೆ. ಶ್ರದ್ಧೆ ಹಾಗೂ ಆ ಪ್ರಾಮಾಣಿಕತೆ ಇಡೀ ಸಮುದಾಯಕ್ಕೆ ಮಾದರಿಯಾಗಿದೆ ಕೂಡಾ.  ಬಾಳಿಲದ ವೈದ್ಯರ ಪತ್ನಿ ಬರೆದಿರುವ ಈ ಅಭಿಪ್ರಾಯ ಹೀಗಿದೆ……

ನಮ್ಮ ಬಾಳಿಲದ ಪಕ್ಕದ ಐವರ್ನಾಡಿನಲ್ಲಿ ಒಂದು ಪುಟ್ಟ ಕುಟುಂಬ.ಅಪ್ಪ,ಅಮ್ಮ,ಮಗಳು.  ಮಗಳು ಪೋಲಿಯೋ ಪೀಡಿತೆ  .ಕಾರಣಾಂತರಗಳಿಂದ ಆ ಕುಟುಂಬ ಪುತ್ತೂರಿನ ಪುರುಷರಕಟ್ಟೆಗೆ ಹೋಗಿ ನೆಲೆಸುತ್ತದೆ.

ಹಿಂದಿನಿಂದಲೂ ಬಾಳಿಲದ ಡಾಕ್ಟರ್ ಬಳಿಗೆ ಔಷಧಕ್ಕೆ ಬರುತ್ತಿದ್ದವರು ಊರು ಬದಲಾದರೂ ವೈದ್ಯರನ್ನು ಬದಲಿಸಿಲ್ಲ. ಈ ಮಧ್ಯೆ ಅಮ್ಮ ಕಿಡ್ನಿ ಸಮಸ್ಯೆಯಿಂದ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುತ್ತಾರೆ.ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಡುತ್ತಾರೆ. 

ಬಾಳಿಲದ ವೈದ್ಯರು ವಿಧಿವಶರಾದಾಗ ಕ್ಲಿನಿಕ್ ಗೆ ಬೇರೆ ವೈದ್ಯರು ಬರುತ್ತಾರಾ ಅಂತ ವಿಚಾರಿಸಿಕೊಳ್ತಾರೆ. ನಿರಾಶರಾಗ್ತಾರೆ. ಆಗ ಅವರು ಹೇಳುತ್ತಾರೆ, ನಾವು ಸ್ವಲ್ಪ ದುಡ್ಡು ಕೊಡಲು ಇದೆ ಡಾಕ್ಟರ್ ಗೆ, ಕೊಡ್ತೇವೆ ಅಂತ ಹೇಳಿದ್ದರು.

ಆ 6 ತಿಂಗಳ ಬಳಿಕ ಮೊನ್ನೆ ಕರೆ ಮಾಡಿ ತಿಳಿಸಿದರು. ನಾಳೆ ಬಂದು ದುಡ್ಡು ಕೊಡ್ತೇವೆ ಅಂತ. ತೊಂದರೆ ಇಲ್ಲಮ್ಮ , ನೀವು ಕೊಡ್ಬೇಕಾಗಿಲ್ಲ ಅಂತ ಹೇಳಿದ್ದಕ್ಕೆ. ಇಲ್ಲ, ಕೊಡುತ್ತೇವೆ ತಕೊಳ್ಬೇಕು ಅಂತ ಉತ್ತರ ನೀಡಿದ್ದರು.

ಮರುದಿನ ಆ ಹುಡುಗಿಯ ತಂದೆ ಬಂದು,  ಪಶ್ಚಾತ್ತಾಪದಿಂದ “ಆಜಿ ತಿಂಗಳಾಂಡ್ ಎಂದು ಹೇಳುತ್ತಾ 300 ರೂಪಾಯಿ ಕೊಟ್ಟಾಗ,  ಒಂದು ಮಾತೂ ಬಾರದ ಸ್ಥಿತಿಯಲ್ಲಿ ಧಾರಾಕಾರ ಕಣ್ಣೀರು ಸುರಿಸಬೇಕಾಯಿತು.

ನಿಜವಾಗಿಯೂ ಡಾಕ್ಟರ್ ಗೆ ಸಲ್ಲ ಬೇಕಾದ ಹಣ ಎಷ್ಟಿದೆಯೋ. ಸಲ್ಲಿಸಬೇಕಾದವರು ಎಷ್ಟು ಜನರಿದ್ದಾರೋ ತಿಳಿಯದು….? ಆದರೆ ತಾವಾಗಿ ಹೇಳಿ ತಂದು ಕೊಟ್ಟ ಆ 300  ರೂಪಾಯಿ ಮೌಲ್ಯಕ್ಕಿಂತಲೂ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು. 

ಇಂತಹ ಪ್ರಾಮಾಣಿಕತೆಗೆ  ಮನಸಾರೆ ವಂದಿಸುತ್ತಾ ಪ್ರಾರ್ಥಿಸುತ್ತಿದ್ದೇನೆ, ಈ ಕುಟುಂಬ ನೆಮ್ಮದಿಯ ಸುಖ ಸಂತೋಷದ ಬದುಕು ಕಂಡು ಕೊಳ್ಳುವಂತಾಗಲಿ.

# ಚಿಕಿತ್ಸಾ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ
July 19, 2026
10:17 PM
by: ದ ರೂರಲ್ ಮಿರರ್.ಕಾಂ
ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ
July 19, 2026
8:42 PM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ
July 19, 2026
8:11 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror