ಸುಳ್ಯದಲ್ಲೊಂದು ಗುಡಿಸಲು ಮನೆ | ಪುತ್ತಿಲ ಪರಿವಾರದ ಸುಳ್ಯ ಘಟಕದಿಂದ ಮನೆ ಕನಸಿಗೆ ನೆರವು | ಸಹೃದಯಿಗಳು ನೆರವು ನೀಡಿ |

January 3, 2024
10:16 PM
ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ನೆರವಾಗಿ...

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರದಲ್ಲಿ ತೀರಾ ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ಪುತ್ತಿಲ ಪರಿವಾರದ ಸುಳ್ಯ ಘಟಕವು ಈಗ ನೆರವಿಗೆ ಇಳಿದಿದೆ. ಇವರ ಜೊತೆ ಸಹೃದಯಿಗಳು ಕೈಜೋಡಿಸಬಹುದು.  ಈ ಮಹಿಳೆ ಸುಮತಿ ಅವರ ಪರಿಸ್ಥಿತಿ ತೀರಾ ಸಂಕಷ್ಟದಿಂದ ಕೂಡಿದೆ.

Advertisement
Advertisement

Advertisement

ಮಹಿಳೆಯ ಪತಿ ಗಣೇಶ ಅಸೌಖ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿವೆ. ಮೂವರು ಮಕ್ಕಳೊಂದಿಗೆ ಮಹಿಳೆಯ ವಾಸ. ಆದರೆ ಮೂರು ಮಕ್ಕಳಲ್ಲಿ ಒಬ್ಬಾತನಿಗೆ ದೃಷ್ಟಿ ದೋಷವಿದ್ದು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ  ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕೂಲಿ ಮಾಡಿ ಬಂದ ಹಣ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ. ಹಾಗಿದ್ದರೂ ಪುಟ್ಟ ಮನೆಯೊಂದನ್ನು ಕಟ್ಟುವ ಹಂಬಲ ಸುಮತಿ ಅವರದಾಗಿತ್ತು. ಪುತ್ತಿಲ ಪರಿವಾರದ ಸುಳ್ಯ ಘಟಕದ ಸಹೃದಯಿಗಳು ಸುಮತಿ ಅವರ ಮನೆಯ ಪರಿಸ್ಥಿತಿ ಗಮನಿಸಿ ಮನೆ ಕಟ್ಟುವ ಕನಸಿಗೆ ಆಸರೆಯಾದರು. ಇದರ ಜೊತೆಗೆ ಸ್ಥಳೀಯಾಡಳಿತ , ಪ್ರತಿನಿಧಿಗಳನ್ನೂ ಮಾತನಾಡಿಸಿದರು. ಈಗ ಮಹಿಳೆ ಸುಮತಿ ಅವರ  ಪುಟ್ಟ ಮನೆ ಕಟ್ಟುವ ಕನಸಿಗೆ ಕಲ್ಲು, ಸಿಮೆಂಟು, ಹೊಯಿಗೆ, ಕಬ್ಬಿಣ…, ಹೀಗೆ  ಸಹಾಯ ಮಾಡಿದರೆ ಮನೆ ಸುಲಭದಲ್ಲಿ ನಿರ್ಮಾಣವಾದೀತು. ಅದಕ್ಕಾಗಿ ನೆರವು ಅಗತ್ಯ ಇದೆ.

Advertisement

The Sullia Unit of Puttila Parivar has now come to help a woman living in a very small hut in Shantinagar, Kasaba village of Sullia taluk. Friends can join hands with them. Sumathi’s situation is very difficult.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror