ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |

May 1, 2024
5:22 PM
ತಾಪಮಾನ ಏರಿಕೆಯಾಗುತ್ತಿದೆ. ಮಳೆಯಾಗುತ್ತಿಲ್ಲ. ಮುಂದೆ ಇನ್ನಷ್ಟು ತಾಪಮಾನ ಏರಿಕೆ ನಿರೀಕ್ಷೆ ಇದೆ. ಹೀಗಾಗಿ ಏನೆಲ್ಲಾ ಮುಂಜಾಗ್ರತೆ ಕೈಗೊಳ್ಳಬಹುದು..? ಈ ಬಗ್ಗೆ ಇಲ್ಲಿದೆ ಕಾಳಜಿಯ ಬರಹ..

ತಾಪಮಾನ ಏರಿಕೆಯಾಗುತ್ತಿದೆ. ಸತತವಾಗಿ 40 ಡಿಗ್ರಿಗಿಂತ ಅಧಿಕವಾಗಿದೆ ತಾಪಮಾನ. ಅದೊಂದು ಸಾಮಾನ್ಯ ಉಷ್ಣತೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ(Heat Wave) ಸಿದ್ಧರಾಗಬೇಕಿದೆ. ಹಾಗಿದ್ದರೆ ಏನು ಮಾಡಬೇಕು ಮುಂದೆ ಎಂಬ ಯೋಚನೆ ಅಗತ್ಯವಿದೆ. ಜಗಲಿ ಕಟ್ಟೆಯಲ್ಲಿ ಕುಳಿತು ಹೋ.. ಹೋ.. ತಾಪಮಾನ ಎಂದು ತಣ್ಣೀರು ಕುಡಿದರೆ ಸಾಲದು. ಯೋಜನೆಗಳು ಅಗತ್ಯವಿದೆ.

ತಾಪಮಾನದ ಸಂದರ್ಭ ದೇಹವನ್ನು ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಯಾವಾಗಲೂ ನಿಧಾನವಾಗಿ ನೀರು ಕುಡಿಯಿರಿ(Drink water). ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದನ್ನು ತಪ್ಪಿಸಿ. ಪ್ರತಿ ವರ್ಷ ಒಂದು ಡಿಗ್ರಿ ಉಷ್ಣಾಂಶ(Temperature) ಜಾಸ್ತಿ ಆದರೂ, ಇನ್ನೈದು ವರ್ಷಗಳಲ್ಲಿ ತಾಪಮಾನ 50 ಡಿಗ್ರಿ ಮುಟ್ಟುತ್ತದೆ…! . ಬಿರು ಬೇಸಿಗೆ ಬಂತು ಅಂತಾ ನೂರಾ ಇಪ್ಪತ್ತು ಕೋಟಿ ಜನ ಹಿಮಾಚಲ ಪ್ರದೇಶಕ್ಕೋ(Himachal Pradesh), ಊಟಿಗೋ(Ooty) ಹೋಗಕ್ಕೆ ಸಾಧ್ಯವಿಲ್ಲ. ಬಿಸಿಲು ಹೆಚ್ಚಾಯ್ತು ಅಂತ ಜಗಲಿ ಕಟ್ಟೆ ಮೇಲೆ ಕುಳಿತು ಜ್ಯೂಸ್‌ ಕುಡಿಯುತ್ತಾ ಕುಳಿತರೆ, ಎಳನೀರು ಕುಡಿಯುತ್ತಾ ಕುಳಿತರೆ ಸಾಧ್ಯವೂ ಇಲ್ಲ. ಪ್ರಸ್ತುತ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಮತ್ತು ಇತರ ದೇಶಗಳು “ಶಾಖದ ಅಲೆ” ಅನುಭವಿಸುತ್ತಿವೆ.

ಹಾಗಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು: – ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆಯ ನೀರನ್ನು ಕುಡಿಯಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ, ಏಕೆಂದರೆ ನಮ್ಮ ಸಣ್ಣ ರಕ್ತನಾಳಗಳು ಸಿಡಿಯಬಹುದು.

ತುಂಬಾ ಬಿಸಿಯಾಗಿ ಮನೆಗೆ ಬಂದರೊಬ್ಬರು ತುಂಬಾ ಬೆವರುತ್ತಿದ್ದರು ಮತ್ತು ಬೇಗನೆ ತಣ್ಣಗಾಗಲು ಬಯಸಿದ್ದರು. ತಕ್ಷಣ ತಣ್ಣೀರಿನಿಂದ ಪಾದ ತೊಳೆದರು. ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.  ಹೊರಗಿನ ಶಾಖವು 38 ° C ತಲುಪಿದಾಗ ಮತ್ತು ನೀವು ಮನೆಗೆ ಬಂದಾಗ, ತಣ್ಣೀರು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಮಾತ್ರ ನಿಧಾನವಾಗಿ ಕುಡಿಯಿರಿ. ಬಿಸಿಲಿನಿಂದ ಮನೆಗೆ ಬಂದರೆ ತಕ್ಷಣವೇ ಕೈಕಾಲು ತೊಳೆಯಬೇಡಿ. ತೀರಾ ತಾಪಮಾನ ಇದ್ದಾಗ ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಸ್ವಲ್ಪ ಸಮಯ ಕಾಯಿರಿ. ದೇಹದ ಉಷ್ಣತೆ ಒಮ್ಮೆಲೇ ತಣ್ಣದಾದರೆ ಸ್ಟ್ರೋಕ್‌ಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.

ದಯವಿಟ್ಟು ಗಮನಿಸಿ: ದೇಹ ರಕ್ಷಣೆಗೆ ಈಗ ಮೊದಲ ಆದ್ಯತೆ ಹೀಗಾಗಿ,  ಬಿಸಿ ತಿಂಗಳುಗಳಲ್ಲಿ ಅಥವಾ ನೀವು ತುಂಬಾ ದಣಿದಿದ್ದರೆ, ತಕ್ಷಣವೇ ತಣ್ಣನೆಯ ನೀರನ್ನು ಕುಡಿಯುವುದನ್ನು ತಪ್ಪಿಸಿ ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ನೀವಿರುವ ಸ್ಥಳದಲ್ಲಿ ಮಳೆ ನೀರು ಬಸಿದು ಹೋಗದಿದ್ದರೆ, ನೀವು ಸಾವಿರದ ಐನೂರು ಅಡಿ ಬೋರ್ ವೆಲ್ ಕೊರೆಸಿ ಏನು ಪ್ರಯೋಜನ? ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕಿದೆ. ಇದಕ್ಕಾಗಿ ಕ್ರಮಗಳು ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಎಲ್ಲೆಲ್ಲಿ ಮರ ಕಡಿಯಬೇಕು ಅನ್ನುವುದು ಮೊದಲ ಸಿದ್ಧತೆಯಾದರೆ, ಉಳಿದ ಕಡೆ ಮರಗಳನ್ನು ಉಳಿಸುವುದು ಹಾಗೂ ಬೆಳೆಸುವ ಕೆಲಸ ತಕ್ಷಣ ಜಾರಿಯಾಗಲಿ. ಬಯಲುಸೀಮೆಗೆ “ರೈನ್ ಟ್ರೀ” ಅಥವಾ ಅಂಟಿನ ಕಾಯಿ ಬಿಡುವ ಮರ ಒಳ್ಳೇಯದು. ಅತಿ ಕಡಿಮೆ ನೀರಿದ್ದರೂ ಬೆಳೆದು, ವಿಶಾಲವಾಗಿ ಹರಡಿಕೊಳ್ಳುತ್ತದೆ. ಬಿಳಲು ಬಿಡದ ಆಲ, ಹುಣಸೆ, ಅರಳಿ ಇನ್ನೂ ಹಲವು ತಳಿಯ ಮರಗಳು ನಗರ ಪ್ರದೇಶಕ್ಕೆ ಬೆಳೆಸಲಿಕ್ಕೆ ಅಂತಲೇ ಇವೆ.

ಮರಗಳನ್ನ ನೋಡಿಕೊಳ್ಳುವ ಜವಾಬ್ದಾರಿ ನಗರ ಪಾಲಿಕೆಯದು, ಪುರಸಭೆಯದು ಇಲ್ಲಾ ಗ್ರಾಮ ಪಂಚಾಯತಿದಲ್ಲ. ಜನ ಅವುಗಳನ್ನ ಪಾಲನೆ ಪೋಷಣೆ ಮಾಡಬೇಕು. ಏಕೆಂದರೆ, ದಾರಿಗಳಲ್ಲಿ ಅಡ್ಡಾಡೋರು, ಸುಸ್ತಾಗೋರು, ಮೂರ್ಛೆ ಹೋಗೋರು, ಸಾಯೋರು ಸಾಮಾನ್ಯ ಜನ. ಕಾರ್ಪೊರೇಟರುಗಳು ಮಿನಿಸ್ಟರುಗಳು ಏಸಿ ಕಾರುಗಳಲ್ಲಿ ಅಡ್ಡಾಡುತ್ತಾರೆ. ಆಫೀಸರುಗಳು ಏಸಿಯಲ್ಲೋ ಫ್ಯಾನಿನಡಿಯಲ್ಲೋ ಕುಳಿತು ಬಿಸಿಲು ತಾಕದಂತೆ ಕೆಲಸ ಮಾಡುತ್ತಾರೆ. ಯಾರಿಗೆ ಬೇಕಾಗಿದೆಯೋ ಅವರೇ ಕೈ ಕೆಸರು ಮಾಡಿಕೊಳ್ಳಬೇಕು.  ತೆಂಗಿನಕಾಯಿ ಮಾರುವವರು, ತರಕಾರಿ ಮಾರುವವರು, ಸಂತೆಗಳಲ್ಲಿ ಮಾರುವವರು ಮತ್ತು ಇನ್ನಿತರೆ ಬೀದಿ ಬದಿ ಮಾರಾಟಗಾರರು “ಸಿಂಗಾಪುರ ಚೆರಿ” ಮರಗಳನ್ನ ಹಾಕಿ. ಅತಿ ಕಡಿಮೆ ಸಮಯ ಅಂದ್ರೆ ಎರಡು ವರ್ಷಗಳಲ್ಲೇ ಐದು ಅಡಿ ಎತ್ತರಕ್ಕೆ ಬೆಳೆದು ಛತ್ರಿಯಂತೆ ಅಗಲವಾಗುತ್ತದೆ.

ಕೃಷಿ ಭೂಮಿಯಲ್ಲಿ ಸಾಕಷ್ಟು ಗಿಡ ನೆಡಿ. ಅನಿವಾರ್ಯವಾದರೆ ಒಂದು ಮರ ಕಡಿದರೆ 10 ಗಿಡ ನೆಡುವ ಯೋಜನೆ ಹಾಕಿಕೊಳ್ಳಿ. ನೀರಿನ ಬಳಕೆಯಲ್ಲಿ ಮಿತಿ ಇರಲಿ ಹಾಗೂ ತೀರಾ ಅನಿವಾರ್ಯವಾದರೆ ಕೊಳವೆ ಬಾವಿ ತೆಗೆಯಿರಿ. ಅನುಕೂಲ ಇದ್ದವರು ಕೆರೆ, ಬಾವಿಯನ್ನೇ ತೋಡಿದರೆ ಉತ್ತಮ.

(ಮೂಲ ಬರಹಗಾರರ ಮಾಹಿತಿ ಇಲ್ಲ-ಸಂಪಾದನೆ ದ ರೂರಲ್‌ ಮಿರರ್.ಕಾಂ ಕಾಳಜಿ )

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror