Advertisement
MIRROR FOCUS

#CycloneBiparjoy |‌ ಗುಜರಾತ್ ಭೀಕರ ಚಂಡಮಾರುತವನ್ನು ಎದುರಿಸಿದ ರೀತಿ ಹೇಗೆ ? | ಹವಾಮಾನ ವರದಿ ಹೇಗೆ ಉಪಯುಕ್ತ ? | 9 ಗಂಟೆಯಲ್ಲಿ 220 ಮಿಮೀ ಮಳೆಯ ಪರಿಣಾಮ ಏನು ?

Share

ಕಳೆದ ಅನೇಕ ವರ್ಷಗಳಲ್ಲಿ ಭೀಕರ ಚಂಡಮಾರುತ ಸಾಲಿನಲ್ಲಿ ಬಿಪರ್‌ ಜಾಯ್‌ ಕಂಡುಬಂದಿತ್ತು. ಸಮುದ್ರದಲ್ಲಿ ಸುದೀರ್ಘ ಕಾಲ ಚಲಿಸಿದ ಚಂಡಮಾರುಗಳ ಸಾಲಿನಲ್ಲಿಯೂ ಬಿಪರ್‌ ಜಾಯ್‌ ಕಂಡಿತ್ತು. ಈ ಭೀಕರ ಚಂಡಮಾರುತವನ್ನು ಒಂದೇ ಒಂದು ಜೀವ ಹಾನಿಯಾಗದಂತೆ ತಡೆದು ಗುಜರಾತ್‌ ರಾಜ್ಯವು  ಚಂಡಮಾರುತವನ್ನು ಎದುರಿಸಿದ ರೀತಿ ಎಲ್ಲರ ಗಮನ ಸೆಳೆದಿದೆ. ಭಾರತೀಯ ಹವಾಮಾನ ಇಲಾಖೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ. 25 ವರ್ಷಗಳ ನಂತರ ಅಪ್ಪಳಿಸಿದ ಭೀಕರ ಚಂಡಮಾರುತವನ್ನು ಗುಜರಾತ್‌ ಸಶಕ್ತವಾಗಿ ಎದುರಿಸಿದೆ. ದ್ವಾರಾ ಜಿಲ್ಲೆಯಲ್ಲಿ 9 ಗಂಟೆಯಲ್ಲಿ 220 ಮಿಮೀ ಹಾಗೂ ಕಚ್‌ ಪ್ರದೇಶದಲ್ಲಿ 150 ಮಿಮೀ ಮಳೆ ದಾಖಲಾಗಿತ್ತು.

Advertisement
Advertisement

ಅರಬ್ಬಿ ಸಮುದ್ರದಲ್ಲಿ ಎದ್ದ ಶಕ್ತಿಶಾಲಿ ಬಿಪರ್‌ ಜಾಯ್‌ ಚಂಡಮಾರುತದ ಸವಾಲನ್ನು ಗೆಲ್ಲುವಲ್ಲಿ ಗುಜರಾತ್‌ ಯಶಸ್ವಿಯಾಗಿದೆ. ಗುರುವಾರ ಜಕಾವು ಬಂದರಿಗೆ ಅಪ್ಪಳಿಸಿದ ಚಂಡಮಾರುತ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ ಸುರಿಸಿದೆ. ಶುಕ್ರವಾರ ಸಂಜೆಯವರೆಗೂ ಅಪಾರ ಹಾನಿ ಉಂಟುಮಾಡಿದೆ. ಆದರೆ ಗುಜರಾತ್‌  ರಾಜ್ಯ ಸರ್ಕಾರ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದ ಕಾರಣ ಒಂದೇ ಒಂದು ಜೀವಹಾನಿ ಸಂಭವಿಸಿಲ್ಲ. ಇತರ ಹಾನಿಗಳನ್ನೂ ನಿರ್ವಹಿಸಲು ತಂಡವೂ ಸಜ್ಜಾಗಿದೆ. 24 ಗಂಟೆಯಲ್ಲಿ ಹಲವು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವನ್ನೂ ಮಾಡುವಲ್ಲಿ ಯಶಸ್ಸಾಗಿದೆ. ಇತ್ತೀಚಿನ ವರ್ಷಗಳಲ್ಲೇ ಭೀಕರ ಚಂಡಮಾರುತಕ್ಕೆ ಜೀವಹಾನಿ ಸಂಭವಿಸಿದೆ ಎದುರಿಸಿದ ಚಂಡಮಾರುಗಳಲ್ಲಿ ಇದು ಒಂದಾಗಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಅತ್ಯಂತ ನಿಖರವಾದ ಎಚ್ಚರಿಕೆಯನ್ನು ಆಗಾಗ ನೀಡುತ್ತದೆ. ಈ ಬಾರಿಯ ಚಂಡಮಾರುತದ ಸಂದರ್ಭವೂ ಹವಾಮಾನ ಇಲಾಖೆ ಆಗಾಗ ಮಾಹಿತಿ ನೀಡಿತ್ತು. ಬಿಪರ್‌ ಜಾಯ್ ಚಂಡಮಾರುತವು ಭಾರತದ ಕರಾವಳಿಯಲ್ಲಿ ವಿನಾಶಕಾರಿಯಾಗಿ ಬರುತ್ತಿದೆ ಎಂದು ಎಚ್ಚರಿಕೆ ನೀಡಿತ್ತು. ಹವಾಮಾನ ಇಲಾಖೆಯ ಎಲ್ಲಾ ಅಧಿಕಾರಿಗಳೂ 24 ಗಂಟೆಯೂ ಸೇವೆಗೆ ಲಭ್ಯರಾದವರು. ತಕ್ಷಣವೇ ಗುಜರಾತ್‌ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಆಯಾ ರಾಜ್ಯಗಳು ಎಲರ್ಟ್‌ ಘೋಷಿಸಿದರು. ಪಾಕಿಸ್ತಾನ ಕರಾವಳಿಯಲ್ಲೂ ಎಚ್ಚರಿಕೆ ವಹಿಸಿತು.

Advertisement

ಗುಜರಾತ್‌ ಕರಾವಳಿಗೆ ಅಪ್ಪಳಿಸುವ ಸೂಚನೆ ದೊರೆತ ತಕ್ಷಣವೇ  ಚಂಡಮಾರುತ ಅಪ್ಪಳಿಸುವ ಮೊದಲು 100,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.ಪಾಕಿಸ್ತಾನ 80,000 ಜನರನ್ನು ಸ್ಥಳಾಂತರ ಮಾಡಿತು. ಭಾರತದ ಗುಜರಾತ್ ರಾಜ್ಯ ಮತ್ತು ಪಾಕಿಸ್ತಾನದ ನೆರೆಯ ಸಿಂಧ್ ಪ್ರಾಂತ್ಯದಲ್ಲಿ 180,000 ಕ್ಕೂ ಹೆಚ್ಚು ಜನರು ಗುರುವಾರ ಸಂಜೆ ಒಳಗೆ ಸ್ಥಳಾಂತರವಾದರು.

ಚಂಡಮಾರುತವು  ಭಾರತೀಯ ಕರಾವಳಿಯನ್ನು ಅಪ್ಪಳಿಸಿದ ನಂತರ ವಿದ್ಯುತ್ ಕಂಬಗಳನ್ನು ಮತ್ತು ಮರಗಳನ್ನು ಧ್ವಂಸ ಮಾಡಿತು. ಚಂಡಮಾರುತವು ಗಂಟೆಗೆ 125 ಕಿಲೋಮೀಟರ್ (78 ಮೈಲುಗಳು) ವೇಗದಲ್ಲಿ ಗಾಳಿ ಬೀಸಿತು. ಆದರೆ ರಾತ್ರಿಯ ವೇಳೆಗೆ ದುರ್ಬಲಗೊಂಡಿತು. ಗುರುವಾರ ಸಂಜೆ ಭಾವನಗರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ರಾಜ್ಯ ಸರ್ಕಾರ ತಿಳಿಸಿದೆ. 23 ಜನರು ಚಂಡಮಾರುತದಿಂದ ಗಾಯಗೊಂಡಿದ್ದಾರೆ,  ಸುಮಾರು 500 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಭುಜ್‌ನಲ್ಲಿ 80,000 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಗುಜರಾತ್ ಸಚಿವರು ಹೇಳಿದ್ದಾರೆ. ಸುಮಾರು 30,000 ಹೆಕ್ಟೇರ್‌ ಕೃಷಿ ಭೂಮಿಗೆ ಹಾನಿಯಾಗಿದೆ. 1150 ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

Advertisement

ಈಗ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಮತ್ತು ಗ್ರಾಮಗಳಿಗೆ ಪ್ರವೇಶವನ್ನು ಪುನಃಸ್ಥಾಪಿಸಲು ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.  ಬಿಪರ್‌ ಜಾಯ್ ಚಂಡಮಾರುತದ ಕಾರಣದಿಂದ ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಗಳ ದೃಷ್ಟಿಯಿಂದ 101 ರೈಲುಗಳನ್ನು ರದ್ದುಗೊಳಿಸಲಾಗಿದೆ, 42 ರೈಲುಗಳನ್ನು ನಿಲ್ಲಿಸಲಾಗಿತ್ತು.

ಇದರ ಜೊತೆಗೆ ಭೀಕರ ಚಂಡಮಾರುತದ ಸೂಚನೆ ದೊರೆತ ತಕ್ಷಣವೇ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದು ಅದೆಲ್ಲವನ್ನೂ ಸರ್ಕಾರಗಳು ಕೈಗೊಂಡವು.  ಜೀವ ಹಾನಿ ತಪ್ಪಿಸಲು  ಕರಾವಳಿ ಪ್ರದೇಶದಿಂದ 1 ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು,  ಚಂಡಮಾರುತದ ವೇಳೆ ಬಿದ್ದು ಅನಾಹುತ ಉಂಟುಮಾಡಬಹುದಾದ 4 ಸಾವಿರಕ್ಕೂ ಹೆಚ್ಚು ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗಿತ್ತು.  ಗಿರ್‌ ಅರಣ್ಯದಲ್ಲಿ 200 ಸಿಬ್ಬಂದಿಗಳನ್ನು ಬಳಸಿ ಸುಮಾರು 700 ಏಷ್ಯಾಟಿಕ್‌ ಸಿಂಹಗಳನ್ನು ಸುರಕ್ಷಿತ ಸ್ಥಳಗಳ ಕಡೆಗೆ ಓಡಿಸಲಾಗಿತ್ತು. ಪ್ರವಾಹದಿಂದ ಜನರನ್ನು ರಕ್ಷಿಸಲು 18 ಎನ್‌ಡಿಆರ್‌ಎಫ್‌, 12 ಎಸ್‌ಡಿಆರ್‌ಎಫ್‌, 115 ರಸ್ತೆ ನಿರ್ಮಾಣ ತಂಡಗಳ ನಿಯೋಜನೆ ಮಾಡಲಾಯಿತು. ವಿದ್ಯುತ್‌ ಇಲಾಖೆಯ 400 ತಂಡ ನಿಯೋಜನೆ. ಜೊತೆಗೆ ಸೇನೆ, ನೌಕಾಪಡೆ, ವಾಯಪಡೆ, ಕರಾವಳಿ ಪಡೆ ಕೂಡಾ ಕಾರ‍್ಯಸನ್ನದ್ಧವಾಗಿರಿಸಲಾಗಿತ್ತು.  ಸಮುದ್ರ ತೀರದ ಬಂದರುಗಳಲ್ಲಿ ನಿಂತಿದ್ದ ಬೃಹತ್‌ ಹಡಗುಗಳನ್ನು ಮೊದಲೇ ಸ್ಥಳಾಂತರಿಸಿ ಸಂಭವನೀಯ ಹಾನಿಯಿಂದ ರಕ್ಷಣೆಗೆ ಸೂಚಿಸಲಾಯಿತು.  ಬಿರುಗಾಳಿಯಿಂದ ಬೀಳಬಹುದು ಎಂದು ದ್ವಾರಕಾದಲ್ಲಿರುವ ರೇಡಿಯೋ ಸ್ಟೇಶನ್‌ನ ಟವರ್‌ ಕೂಡ ಮೊದಲೇ ಕಳಚಿಡಲಾಗಿತ್ತು, ಇದೆಲ್ಲದರ ಜೊತೆಗೆ ಸಮನ್ವಯ ಸಾಧಿಸುವ ಕೆಲಸವನ್ನೂ ಸರ್ಕಾರ ಬಹಳ ನಾಜೂಕಿನಿಂದ ಮಾಡಲಾಗಿತ್ತು. ಹೀಗಾಗಿ ಕೆಲಸಗಳು ಬಹುಬೇಗನೆ ನಡೆದವು.

Advertisement

ಭೀಕರ ಚಂಡಮಾರುತ ಅಪ್ಪಳಿದ ಬಳಿಕ ಹಾನಿಗಳು ನಡೆದವು. ಸುಮಾರು 5000 + ವಿದ್ಯುತ್‌ ಕಂಬಗಳು ಉರುಳಿದವು.
4600 ಕ್ಕೂ ಅಧಿಕ  ಗ್ರಾಮಗಳಿಗೆ ವಿದ್ಯುತ್‌ ಕಡಿತಗೊಂಡಿತ್ತು. ಇಲಾಖೆಗಳ ತಕ್ಷಣ ಸೇವೆಯ ಕಾರಣದಿಂದ ಬಹುಪಾಲು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಸಾಧ್ಯವಾಯಿತು. ಈಗಲೂ 1000 ಹಳ್ಳಿಗಳಿಗೆ ವಿದ್ಯುತ್‌ ಸೇವೆ ನೀಡಲು ಸಿದ್ಧತೆ ನಡೆಯುತ್ತಿದೆ. 550 ಕ್ಕೂ ಹೆಚ್ಚು ಸಾಕುಪ್ರಾಣಿಗಳು ಮೃತಪಟ್ಟವು. 500 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಹಳ್ಳಿಗಳಿಗೆ ಸಂಪರ್ಕ ಸಾಧಿಸಲು ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಮತ್ತು ಗ್ರಾಮಗಳಿಗೆ ಪ್ರವೇಶವನ್ನು ಪುನಃಸ್ಥಾಪಿಸಲು ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವರುಣ ಕೃಪೆ ತೀರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

1 hour ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

3 hours ago

ಭಾರತವು 5.3 ಮಿಲಿಯನ್‌ ಮರಗಳನ್ನು ಕಳೆದುಕೊಂಡದ್ದು ಹೇಗೆ..?

ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…

3 hours ago

ಬೇಸಗೆಯಲ್ಲಿ ವೇದ ಶಿಬಿರ

https://youtu.be/0oQrAPjmTJY?si=7lSz7iQuaLABTKMj

4 hours ago