ಅಡಿಕೆ ವಿಷ ರಹಿತ ದಾಸ್ತಾನು | ಫೆ.2 ಮಾಹಿತಿ ಕಾರ್ಯಕ್ರಮ | ಹೊಸ ವಿಧಾನದ ಚೀಲ ಪ್ರಾತ್ಯಕ್ಷಿಕೆ |

January 29, 2024
10:34 PM
ಕೊಯ್ಲೋತ್ತರ ವಿಷ ರಹಿತ ದಾಸ್ತಾನಿಗೆ ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್‌ ಡ್ರೈಯರ್ ಬಗ್ಗೆ ಮಾಹಿತಿ ಕಾರ್ಯಕ್ರಮವು ಫೆ.2 ರಂದು ಪುತ್ತೂರಿನ ಬೈಪಾಸ್‌ನ ಒಕ್ಕಲಿಗ ಗೌಡ ಸಭಾಭವನ ಬಳಿಯ  ಚುಂಚಶ್ರೀ ಸಭಾಭವನದಲ್ಲಿ ಮಧ್ಯಾಹ್ನ 2.30 ರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಕೊಯ್ಲೋತ್ತರ ವಿಷ ರಹಿತ ದಾಸ್ತಾನು ಬಗ್ಗೆ ಈಚೆಗೆ ಕೃಷಿಕರಲ್ಲಿ ಒಲವು ಹೆಚ್ಚುತ್ತಿದೆ. ಹೀಗಾಗಿ  ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್‌ ಡ್ರೈಯರ್ ಬಗ್ಗೆ ಮಾಹಿತಿ ಕಾರ್ಯಕ್ರಮವು ಫೆ.2 ರಂದು ಪುತ್ತೂರಿನ ಬೈಪಾಸ್‌ನ ಒಕ್ಕಲಿಗ ಗೌಡ ಸಭಾಭವನ ಬಳಿಯ  ಚುಂಚಶ್ರೀ ಸಭಾಭವನದಲ್ಲಿ ಮಧ್ಯಾಹ್ನ 2.30 ರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮುಂದೆ ಓದಿ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಬೆಳೆಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಸಂಘಟಿಸಿದ್ದು,
ಅಡಿಕೆ , ಕಾಳುಮೆಣಸು ಸಹಿತ ಕೃಷಿ ವಸ್ತುಗಳನ್ನು ವಿಷ ರಹಿತ ದಾಸ್ತಾನು ಮಾಡುವ ವಿಧಾನ ಹಾಗೂ
ಇಲ್ಲಿದೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ‌ ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್‌ ಡ್ರೈಯರ್ ಬಗ್ಗೆ ಚೆನ್ನೈ ಮೂಲದ ಕಂಪನಿ ಗ್ರೈನ್‌ ಪ್ರೋ ಪ್ರಮುಖರು ಮಾಹಿತಿ ನೀಡಲಿದ್ದಾರೆ. ಆಸಕ್ತ ಕೃಷಿಕರು ಕಾರ್ಯಕ್ರಮಮದಲ್ಲಿ ಭಾಗವಹಿಸಬಹುದಾಗಿದೆ.ಮುಂದೆ ಓದಿ
ಈ ಚೀಲಗಳನ್ನು ಕೃಷಿ ವಸ್ತುಗಳು ರಫ್ತು ಹಾಗೂ ದೀರ್ಘ ಕಾಲ ಬಾಳ್ವಿಕೆಯ ದೃಷ್ಟಿಯಿಂದ ವಿವಿಧ ಕಡೆ ಬಳಕೆ ಮಾಡುತ್ತಾರೆ. ಆದರೆ ಅಡಿಕೆ ಕೃಷಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಿರಲಿಲ್ಲ. ಇದೀಗ ಅಡಿಕೆ ಕೃಷಿಕರಿಗೂ ಈ ತಾಂತ್ರಿಕತೆ ಲಭ್ಯವಾಗಲು ಹಾಗೂ ಈ ಬಗ್ಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಕಾಫಿ ಸೇರಿದಂತೆ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳು ದಾಸ್ತಾನಿಗೆ ಈ ಚೀಲವನ್ನು ಉಪಯೋಗಿಸಲಾಗುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ಬಾರಿಯ ಮುಂಗಾರು ದುರ್ಬಲವೇ..? ಐಎಂಡಿ ಎರಡನೇ ಮುನ್ಸೂಚನೆ ಬಿಡುಗಡೆ – 11 ವರ್ಷಗಳಲ್ಲೇ ಅತೀ ದುರ್ಬಲ ಮುಂಗಾರು ಸಾಧ್ಯತೆ..?
May 29, 2026
10:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 29.05.2026 | ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ | ಜೂನ್ 7 ಬಳಿಕ ಕರಾವಳಿಯಲ್ಲಿ ಭಾರೀ ಮಳೆಯ ಸೂಚನೆ!
May 29, 2026
2:43 PM
by: ಸಾಯಿಶೇಖರ್ ಕರಿಕಳ
ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲೆ – ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಬಹಿರಂಗವಾದ ಅಚ್ಚರಿಯ ಜೀವ ವೈವಿಧ್ಯ
May 29, 2026
7:12 AM
by: ದ ರೂರಲ್ ಮಿರರ್.ಕಾಂ
ಜೈಸಲ್ಮೇರ್‌ ಘಟನೆ ಬಳಿಕ ಎಚ್ಚೆತ್ತ ಆಡಳಿತ | ಕೊಳೆತ ಸ್ಥಿತಿಯಲ್ಲಿದ್ದ ನೂರಾರು ಹಸುಗಳನ್ನು ಹೂಳುವ ಕಾರ್ಯ ಆರಂಭ
May 29, 2026
7:00 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror