Advertisement
ಸುದ್ದಿಗಳು

ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? | ಅಡಿಕೆ ಅಥವಾ ಅಡಿಕೆ ಬೆಳೆಗಾರರ ರಕ್ಷಣೆ ಮಾಡುವರು ಯಾರು…?

Share

ಅಡಿಕೆ ಬೆಳೆಯುವ ಕ್ಷೇತ್ರದಲ್ಲಿ ಇಂದು ಕೇವಲ ಇಪ್ಪತ್ತು ಪ್ರತಿಶತ ಮಾತ್ರ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಬೆಳೆ ಇರುವುದು.  ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಅತಿ ಹೆಚ್ಚು ನಿಸರ್ಗದ ಜೊತೆಗೆ ಹೋರಾಡಿ ಬೆಳೆ ಪಡಿಯಬೇಕಾಗಿರುತ್ತದೆ. ಚಾನಲ್ ಹಾಗೂ ಬೋರ್ ವೆಲ್ ಅಡಿಕೆ ಬೆಳೆಗಾರರಿಗೆ ಹೋಲಿಸಿದರೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರಿಗೆ ಇಳುವರಿ ತೀರಾ ಕಡಿಮೆ ಮತ್ತು ಅಡಿಕೆ ಉತ್ಪನ್ನ ಕ್ಕೆ ಖರ್ಚು ಅತಿ ಹೆಚ್ಚು…!! ಎಲೆಚುಕ್ಕಿ ಹಳದಿಎಲೆ , ಅಡಿಕೆ ಕೊಳೆ ರೋಗ ಇತರೆ ಗಂಭೀರ ಸಮಸ್ಯೆ ಗಳೊಂದಿಗೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರ ಹೋರಾಡುತ್ತಿದ್ದಾನೆ…!!!

ಇದೆಲ್ಲಾ ಹೋರಾಟದ ಜೊತೆಗೆ ಅಡಿಕೆ ಕ್ಯಾನ್ಸರ್ ಕಾರಕ, ವಿದೇಶಿ ಅಕ್ರಮ ಆಮದು ಮತ್ತು ಅಡಿಕೆ ನಿಷೇಧ ಮಾಡಿ ಎಂಬ ಸವಾಲಿಗೂ ಇದೇ ಸಾಂಪ್ರದಾಯಿಕ ಕ್ಷೇತ್ರದ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಮತ್ತು ಬೆಳೆಗಾರ ಸಹಕಾರಿ ಸಂಸ್ಥೆಗಳು ಮೇಲಿಂದ ಮೇಲೆ ಸಂಭಂದಿಸಿದ ಇಲಾಖೆಗಳು, ಸಚಿವರುಗಳ ಬೇಟಿ ಮತ್ತು ನ್ಯಾಯಾಲಯದಲ್ಲಿ ಅಡಿಕೆ ಪರ ವಾದ ಇತರೆ ವಿಚಾರದಲ್ಲಿ ಹೋರಾಟ ಮಾಡುತ್ತಿದೆ. ನಿಜಕ್ಕೂ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದಲ್ಲಿ ದಿನ ದಿನಕ್ಕೂ ಅಡಿಕೆ ಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆಯಾ…?

ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? : ಮೂರು ಮತ್ತು ನಾಲ್ಕನೇ ತಲೆಮಾರಿನ ಪೀಳಿಗೆಗೆ ಊರಲ್ಲಿ ನಾಮಕಾವಸ್ಥೆ ಅಡಿಕೆ ತೋಟ ಇದ್ದರಾಯಿತು. ಮೂಟೆಗಟ್ಟಲೇ ಇಳುವರಿ ಅವರಿಗೆ ಬೇಕಿಲ್ಲ. ಕನಿಷ್ಠ ವೃದ್ದ ಅಪ್ಪ ಅಮ್ಮ ಊರಲ್ಲೇ ಉಳಿಯಲಿ ಎಂದು ಅಡಿಕೆ ಬೆಳೆ ಉಳಿಯಲಿ ಎನ್ನಬಹುದೇನೋ…? ಪಟ್ಟಣದ ದೊಡ್ಡ ದೊಡ್ಡ ಐಟಿ ಬಿಟಿ ಇತರೆ ದೊಡ್ಡ ಸಂಬಳದ ನೌಕರಸ್ಥ ರಾಗಿರುವ ಅಡಿಕೆ ಬೆಳೆಗಾರರ ಮಕ್ಕಳಿಗೆ ಅದೆಷ್ಟೇ ಅಡಿಕೆ ಉತ್ಪತ್ತಿ ಬಂದರೂ, ಬೆಲೆ ಹೆಚ್ಚಾದರೂ ಅಡಿಕೆ ಕೃಷಿ ಮಾಡಲು ಹಳ್ಳಿಗೆ ಬಂದು ಅಪ್ಪ ಅಮ್ಮ ರ ಅಡಿಕೆ ಕೃಷಿ ಮುಂದುವರಿಸೋಲ್ಲ…!! ಮಲೆನಾಡು ಕರಾವಳಿಯ ಮದ್ಯಮ ವರ್ಗ ಮತ್ತು ದೊಡ್ಡ ಬೆಳೆಗಾರರ ಬಹುತೇಕ ಮನೆಯಲ್ಲಿ ಐವತ್ತು ದಾಟಿದವರೇ ಇರುವುದು‌. ಇವರು ತೋಟಕ್ಕೆ ಹೋದರೆ ಎಲೆಚುಕ್ಕಿ ಬಂದು ಹಣ್ಣಾದ ಅಡಿಕೆ ಸೋಗೆ ಗಳು.. ಮನೆಗೆ ಬಂದು ಇವರು ಕನ್ನಡಿ ನೋಡಿಕೊಂಡರೆ ಈ ಬವಣೆಗಳ ವಿರುದ್ಧ ಹೋರಾಡಿ ಹಣ್ಣಾದ ಇವರ ತಲೆಗೂದಲು‌.

ಹಾಗಾಗಿ, ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಅಡಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಅಥವಾ ಎಷ್ಟು ತಲೆಕೆಡಿಸಿಕೊಳ್ಳಬೇಕು..? ಎಲೆಚುಕ್ಕಿ ಯಂತಹ ಸಮಸ್ಯೆ ಯನ್ನು ಅದೆಂಥದೇ ಔಷಧ ಸಿಂಪಡಣೆ ಮಾಡಿದರೂ ಮೇಲಿಂದ ಮೇಲೆ ಬರುವ ಸೈಕ್ಲೋನ್ ಮಳೆ ಆ ಪ್ರಯತ್ನ ವನ್ನು ಧೂಳಿಪಟ ಮಾಡುತ್ತದೆ. ಇನ್ನ ಅಡಿಕೆ ಆಮದು ಕಳ್ಳಸಾಗಣೆ ಬಗ್ಗೆ ರೈತ ಏನನ್ನೂ ಮಾಡಲಾರ.ಸಾಮಾನ್ಯರ ದನಿಗೆಲ್ಲಿದೆ ಮೈಕು…!?? ಹಾಗಾಗಿ ರೈತ ಅಸಾಹಾಯಕ..!!

ಕೇವಲ ಕಾಲು ಭಾಗಕ್ಕಿಂತ ಕಡಿಮೆ ಇರುವ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರು ಈ ಅಡಿಕೆ ಕ್ಯಾನ್ಸರ್ ಕಾರಕ, ಅಡಿಕೆ ನಿಷೇಧ ದ ವಿರುದ್ಧವಾಗಿ ಯಾಕೆ ಹೋರಾಟ ಮಾಡಬೇಕು…? ಅಡಿಕೆ ಕಲಬೆರಕೆ ಮತ್ತು ಅಡಿಕೆ ಗೆ ಅಪಾಯಕಾರಿ ರಾಸಾಯನಿಕ ಬಣ್ಣದ ಮೂಲದ ತಾಯಿಬೇರು ಇರುವುದೇ ಬಯಲು ಸೀಮೆಯ ” ಫಲಗುತ್ತಿಗೆ “” ವ್ಯವಸ್ಥೆ ಯಲ್ಲಿ…. !.  ಈ ಯಾವುದೇ ಅಡಿಕೆ ಸಂಬಂಧಿಸಿದ ಹೋರಾಟದಲ್ಲಿ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಮಾರಾಟ ಸಹಕಾರಿ ಸಂಘಗಳು ಮತ್ತು ಮಲೆನಾಡು ಕರಾವಳಿಯ ಶಾಸಕರು ಮತ್ತು ಸಂಸದರ ಹೋರಾಟ ಮಾತ್ರ ಎದ್ದು ಕಾಣುತ್ತದೆ. ಈ ಅಡಿಕೆ ಸಮಸ್ಯೆ ಸಂಬಂಧಿಸಿದಂತೆ ಎಂಬತ್ತು ಭಾಗ ಅಡಿಕೆ ಇರುವ ಬಯಲು ಪ್ರದೇಶದ ಅಡಿಕೆ ಬೆಳೆಗಾರರ ಹೋರಾಟ ಎಲ್ಲಿ…? ಏನು ಮಾಡುತ್ತಿದ್ದಾರೆ… ? ಪ್ರಶ್ನೆ ನಮ್ಮಲ್ಲೇ ಉಳಿದಿದೆ…

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

16 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

22 hours ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

22 hours ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

1 day ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

2 days ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

2 days ago