Opinion

ಧ್ಯಾನವನ್ನು ಹೇಗೆ ಮಾಡುವುದು?…. ಧ್ಯಾನ ಮತ್ತು ಆಲೋಚನೆಗಳು…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇತ್ತೀಚಿಗೆ ಯಾರು ಬೇಕಾದರೂ ಎದ್ದು ಧ್ಯಾನ(Meditation) ಮಾಡಲು ಸಲಹೆ ನೀಡುತ್ತಾರೆ. ಮನಸ್ಸು ಶಾಂತವಾಗಿರಲಿ ಎಂದು ನಾವು ಆ ಪ್ರಯತ್ನವನ್ನು ಮಾಡುತ್ತೇವೆ, ಆದರೆ, ಮನಸ್ಸು(Mind) ಒಂದೆಡೆ ಎಲ್ಲಿ ನಿಲ್ಲುತ್ತದೆ? ಅಸಂಖ್ಯಾತ ವಿಷಯಗಳಿದ್ದಾಗ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಲು ಪ್ರಯತ್ನಿಸಿದ್ದರೆ ಮನಸ್ಸು ಪ್ರಶಾಂತವಾಗಿರುವ ಬದಲು ಚಂಚಲ(fickle) ಮನಸ್ಸು ಹೆಚ್ಚು ಚಂಚಲವಾಗುತ್ತದೆ. ಧ್ಯಾನ ಮಾಡುವ ಪ್ರತಿಯೊಬ್ಬರ ಪ್ರಾಥಮಿಕ ಅನುಭವ ಇದು. ಏಕೆಂದರೆ, ಧ್ಯಾನವು ಒಂದು ದಿನದಲ್ಲಿ ಕಲಿಯುವಂತಹದ್ದಲ್ಲ. ಇದಕ್ಕಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಹಾಗಾದರೆ, ಅದನ್ನು ಹೇಗೆ ಮಾಡುವುದು, ಎಂಬುದನ್ನು ತಿಳಿಯೋಣ.

Advertisement
Advertisement

ಮನಸ್ಸನ್ನು ಶಾಂತಗೊಳಿಸುವುದು ಅತ್ಯಂತ ಕಷ್ಟದ ವಿಷಯ. ಏಕೆಂದರೆ, ಇಂದಿನ ಬಹುಕಾರ್ಯಕ ಯುಗದಲ್ಲಿ, ನಮ್ಮ ಮನಸ್ಸು ಅನೇಕ ಕಾರ್ಯಗಳಲ್ಲಿ ನಿರತವಾಗಿದೆ, ಅನೇಕ ವಿಷಯಗಳಲ್ಲಿ ಸಿಲುಕಿಕೊಂಡಿದೆ, ಅಲ್ಲಿಂದ ಅದನ್ನು ಬಿಡಿಸಿ ಧ್ಯಾನಿಸಬೇಕೆಂದರೆ ಶಿವಧನುಷ್ಯ ಎತ್ತಿದ ಹಾಗೆ! ಕೇವಲ ಅಭ್ಯಾಸ ಮತ್ತು ಸಕಾರಾತ್ಮಕತೆಯಿಂದ, ಏನನ್ನಾದರೂ ಸಾಧಿಸಬಹುದು. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ….

ಬೆಳಗಿನ ಸಮಯವನ್ನು ಆಯ್ಕೆ ಮಾಡಿ: ಮೇಲಿನ ವಿಷಯಗಳು ಕರಗತವಾದರೆ ಧ್ಯಾನವನ್ನು ಆರಂಭಿಸಬಹುದು. ಅದಕ್ಕಾಗಿ ಬೆಳಗಿನ ಸಮಯವನ್ನು ಆಯ್ಕೆ ಮಾಡಿ. ಎಚ್ಚರವಾದಾಗ ಮೊಬೈಲ್ ನೋಡದೆ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕಣ್ಣು ಮುಚ್ಚಿ ನಿಮ್ಮನ್ನು ನೀವೆ ಗಮನಿಸಿ. ಮುಂಜಾನೆ ಯೋಚನೆಗಳ ಸಂಚಾರ ತೀರ ವಿರಳವಾಗಿರುತ್ತದೆ. ಆದ್ದರಿಂದಲೇ, ಮನಸ್ಸನ್ನು ಏಕಾಗ್ರಗೊಳಿಸುವುದು ಸುಗಮವಾಗುತ್ತದೆ. ಆಗಲೂ ಯೋಚನೆಗಳು ಬಂದರೂ ಬರಲಿ. ಕೆಲ ಕಾಲದ ನಂತರ ಅವು ದೂರವಾಗುತ್ತವೆ. ನಿಧಾನವಾಗಿ ನದಿಯ ಪ್ರಶಾಂತ ಹರಿವಿನಂತೆ ಮನದಲ್ಲಿ ಅಲೆ ನಿಂತು ಧ್ಯಾನಕ್ಕೆ ಮನಸ್ಸು ಸಿದ್ಧವಾಗುತ್ತದೆ.

ಧ್ಯಾನ ಮಾಡುವಾಗ ಸಂಗೀತವನ್ನು ಬಳಸಬೇಡಿ: ಮೂಲಭೂತವಾಗಿ ಧ್ಯಾನವನ್ನು ಎಲ್ಲದರಿಂದ ಮನಸ್ಸನ್ನು ಬೇರ್ಪಡಿಸಲು ಮಾಡಲಾಗುತ್ತದೆ. ಯಾವುದೇ ಪ್ರಕಾರದ ಸಂಗೀತ, ಸಂಗೀತ ಅಥವಾ ಹಾಡನ್ನು ಕೇಳುತ್ತಾ ಧ್ಯಾನದ ಧಾರಣೆಯನ್ನು ಪ್ರಯತ್ನಿಸಿದರೆ ಮನಸ್ಸು ಹಾಡಿನಲ್ಲಿ ಏಕಾಗ್ರವಾಗಿ ಅದಕ್ಕೆ ಸಂಬಂಧಿಸಿದ ಆಲೋಚನೆಗಳು ಬರಲಾರಂಭಿಸುತ್ತವೆ. ಅಲ್ಲದೆ, ಧ್ಯಾನದ ಸಮಯದಲ್ಲಿ ಮನಸ್ಸು ಯಾವುದಾದರೂ ವಿಷಯದ ಮೇಲೆ ಅವಲಂಬಿತವಾಗಬಾರದು, ಇಂಥ ಸಮಯದಲ್ಲಿ ಬೇರೆ ಯಾವುದೇ ಸಂಗೀತ ಅಥವಾ ಹಾಡನ್ನು ಕೇಳದೆ ಕೇವಲ ನಿಮ್ಮ ಉಸಿರಿನ ಸಂಗೀತವನ್ನು ಮಾತ್ರ ಆಲಿಸಬೇಕು, ಇದನ್ನು ಗಮನದಲ್ಲಿಡಿ.

ಯೋಗ್ಯ ಸ್ಥಳದ ಆಯ್ಕೆ ಮಾಡಿ:ಧ್ಯಾನ ಮಾಡುವಾಗ ಸ್ಥಳದ ಮಹತ್ವವು ಇದೆ ಸರಿಯಾದ ಸ್ಥಳದಲ್ಲಿ ಸರಿಯಾದ ಧ್ಯಾನ ಸಾಧ್ಯವಾಗುತ್ತದೆ ಆದ್ದರಿಂದ ನೀವು ಕುಳಿತುಕೊಳ್ಳುವ ಸ್ಥಳ ನಿರ್ಮಲ ಹಾಗೂ ಶಾಂತವಾಗಿರಬೇಕು. ಸ್ವಚ್ಛವಾದ ಗಾಳಿಯ ಚಲನೆ ಇರಬೇಕು. ಸ್ಥಳ ಯಾವುದೇ ಪ್ರಕಾರದ ವಾಸನೆರಹಿತವಾಗಿರಬೇಕು. ಸುಗಂಧವಾಗಲಿ ದುರ್ಗಂಧವಾಗಲಿ ಎರಡೂ ಇರಬಾರದು. ನೀವು ಕುಳಿತುಕೊಳ್ಳುವ ಜಾಗದಲ್ಲಿ ಗಲಾಟೆ ಸದ್ದು ಗದ್ದಲ ಇರದಂತೆ ನೋಡಿಕೊಳ್ಳಿ. ಆದರೆ, ಒಂದು ಮಾತು ನಿಜ, ನೀವು ಮೇಲಿನ ಎಲ್ಲ ಪ್ರತಿಕೂಲ ಪರಿಸ್ಥಿತಿಗಳು ಇರುವ ಜಾಗದಲ್ಲಿ ಧ್ಯಾನವನ್ನು ಸರಿಯಾಗಿ ಮಾಡಲು ಸಾಧ್ಯವಾದರೆ ಆಗ ನೀವೊಬ್ಬ ನಿಜವಾದ ಸಾಧಕರಾಗುತ್ತೀರಿ!

Advertisement

ಮನಸ್ಸಿನ ಮೇಲೆ ನಿಯಂತ್ರಣ:ಮನುಷ್ಯನ ಮನಸ್ಸು ಕೋತಿಯಂತೆ, ಒಂದೆಡೆ ಸ್ಥಿರವಾಗುವುದು ಬಹಳ ಕಷ್ಟ! ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆಲೋಚನೆಗಳನ್ನು ಒಮ್ಮೆಲೇ ಅದುಮಲು ಪ್ರಯತ್ನಿಸಬೇಡಿ ಮೊದಲು ಅವುಗಳನ್ನು ಸ್ವತಂತ್ರವಾಗಿ ಹರಿಯಲು ಬಿಡಿ ನಿಧಾನವಾಗಿ ಮನಸ್ಸನ್ನು ಸಾತ್ವಿಕ ವಿಚಾರಗಳತ್ತ ತಿರುಗಿಸಿ ಇದಕ್ಕೆ ಒಂದು ಉತ್ತಮ ಉಪಾಯವುಂದರೆ ದೇವರ ನಾಮ ಸ್ಮರಣೆ ಮಾಡುವುದು. ನಿಮಗೆ ಇಷ್ಟವಾದ ದೇವರನ್ನು ನೆನೆಸಿಕೊಂಡು ಆತನ ರೂಪವನ್ನು ಮುಚ್ಚಿದ ಕಣ್ಣುಗಳ ಮುಂದೆ ತಂದುಕೊಳ್ಳಿ ಆ ರೂಪವನ್ನು ಆನಂದ್ ಆನಂದಿಸಿ ಆ ದೇವರು ನಾಮದ ಸ್ಮರಣೆ ಮಾಡುತ್ತಾ ಮೈಮರೆಯಿರಿ! ಕೆಲಸ ಸಮಯ ಇದನ್ನು ನೀವು ಯಶಸ್ವಿಯಾಗಿ, ನಿರಂತರವಾಗಿ, ನಿಯಮಿತವಾಗಿ ಮಾಡಿದರೆ ಕಾಲಕ್ರಮೇಣ ನಿಮ್ಮ ಆತ್ಮ, ಮನಸ್ಸು ಹಾಗೂ ದೇಹಕ್ಕೆ ಸಿಗುವ ಲಾಭಗಳಿಂದ ನೀವೇ ಆಶ್ಚರ್ಯ ಪಡುತ್ತೀರಿ!

ಸಂಕಲನ ಮತ್ತು ಸಂಪಾದನೆ: ಡಾ. ಕುಲಕರ್ಣಿ ಪಿ. ಎ.

Calming the mind is the most difficult thing. Because, in today’s multi-tasking era, our mind is busy with many tasks, stuck in many things, to free it from there and meditate is like lifting the bow of Shiva! Just with practice and positivity, anything can be achieved. Everything is possible if you try.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

4 hours ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

7 hours ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

7 hours ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಐಪಿಎಲ್‌ ಫೈನಲ್‌ ಕದನ | ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲವು

ಐಪಿಎಲ್  ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…

13 hours ago

ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ | ನೂರಾರು ಗ್ರಾಮಗಳು ಜಲಾವೃತ, ಬೆಳೆ ನಷ್ಟ | 5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು |

ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…

16 hours ago