ಮೊಳಕೆ ಬರಿಸಿದ ಕಾಳುಗಳನ್ನು ಹೇಗೆ ಬಳಸುವುದು? | ಅತಿಯಾದ ಮೊಳಕೆ ಅಪಾಯಕಾರಿಯೇ?

April 20, 2024
5:19 PM

ನಮ್ಮ ನಿಯಮಿತ ಆಹಾರದ(Food) ಪ್ರಮುಖ ಭಾಗವೆಂದರೆ ಗೋಧಿ(Wheat), ಅಕ್ಕಿ(Rice), ಬೇಳೆ, ಸಜ್ಜೆ, ಕೆಲವು ಸಿರಿಧಾನ್ಯಗಳು(Serials) ಮತ್ತು ಬೇಳೆಕಾಳುಗಳಾದ(Pulses) ಹೆಸರು ಚೆನ್ನಂಗಿ, ಮಟ್ಕಿ ಮತ್ತು ಇತರ ಅನೇಕ ಕಾಳುಗಳು. ಇತ್ತೀಚಿನ ದಿನಗಳಲ್ಲಿ, ಧಾನ್ಯಗಳನ್ನು ಮೊಳಕೆಯೊಡಿಸಲು(Sprouted) ಕೆಲವು ವಿಶೇಷ ರೀತಿಯ ಪಾತ್ರೆಗಳು ಸಹ ಲಭ್ಯವಿದೆ. ದ್ವಿದಳ ಧಾನ್ಯಗಳ ಮೊಳಕೆಯೊಡೆಯುವುದು ನೈಸರ್ಗಿಕ ಪ್ರಕ್ರಿಯೆ.

ಈ ದ್ವಿದಳ ಧಾನ್ಯಗಳು ಡಬ್ಬಿಯಲ್ಲಿ ಮತ್ತು ಒಣಗಿರುವವರೆಗೆ, ಅವು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುತ್ತವೆ. ಅವು ಮೊಳಕೆಯೊಡೆಯಲು ಕೆಲವು ಪರಿಸ್ಥಿತಿಗಳು ಅವಶ್ಯಕತೆ ಇದೆ. ಆರ್ದ್ರತೆ ಮತ್ತು ಕತ್ತಲೆ ಅದರ ಪ್ರಮುಖ ಭಾಗಗಳು! ನಾವು ಧಾನ್ಯಗಳನ್ನು ನೀರಿನಲ್ಲಿ ನೆನೆಸುತ್ತೇವೆ. ನಂತರ ಅವು ಮೊಳಕೆಯೊಡೆಯುತ್ತವೆ ಮತ್ತು ದಿನ ದಿನಕ್ಕೆ ಬೆಳೆಯಲು ಪ್ರಾರಂಭಿಸುತ್ತವೆ. ಮೊಳಕೆಯೊಡೆಯುವ ಮೊದಲು, ಧಾನ್ಯದಲ್ಲಿನ ಪಿಷ್ಟವು ನಿಧಾನವಾಗಿ ಪ್ರೋಟೀನ್ ಆಗಿ ಬದಲಾಗುತ್ತದೆ; ಅದೇ ಸಮಯದಲ್ಲಿ, ‘ಬಿ’, ‘ಸಿ’ ಅಥವಾ ಕೆಲವೊಮ್ಮೆ ‘ಇ’ ವಿಟಮಿನ್‌ಗಳ ಪ್ರಮಾಣವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಮೊಳಕೆಯೊಡೆದ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯವೂ ಹೆಚ್ಚಾಗುತ್ತದೆ. ಆದರೆ ಆದರೆ ನಾವು ಈ ಕಾಳು ಮೊಳಕೆಯನ್ನು ಎಷ್ಟು ಬೆಳೆಯಲು ಬಿಡಬೇಕು?

ಮೊಳಕೆಯೊಡೆದ ಬೇಳೆಕಾಳುಗಳಲ್ಲಿ ಜೀವಸತ್ವಗಳ ಪ್ರಮಾಣವು ಹೆಚ್ಚಾಗಿರುತ್ತದೆ ಎಂಬುದು ನಿಜವಾದರೂ, ಈ ಕ್ರಮವು ಮತ್ತಷ್ಟು ಹೆಚ್ಚಾದರೆ, ವಿಟಮಿನ್ಗಳ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮತ್ತು ಕೆಲವೊಮ್ಮೆ ದೀರ್ಘಕಾಲ ಮೊಳಕೆಯೊಡೆದ ಬೇಳೆಕಾಳುಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆಹಾರದಲ್ಲಿ ಯಾವುದೇ ಬೇಳೆಕಾಳುಗಳು ಸ್ವಲ್ಪ ಮೊಳಕೆ ಬಂದರೆ ಅವುಗಳನ್ನು ಬಳಸುವುದು ಉತ್ತಮ! ಅಂದರೆ, ಮೊಳಕೆಯು ಸುಮಾರು ಎರಡರಿಂದ ಮೂರು ಮಿಮಿ ಉದ್ದ ಬೆಳೆದರೆ ಸಾಕು. ಅಲ್ಲದೆ, ಅಂಕುರಿಸುವ ಪರಿಸ್ಥಿತಿಗಳನ್ನು ನಾವು ತಿಳಿದಿರುವ ಕಾರಣ, ನಾವು ಅದಕ್ಕಾಗಿ ಪ್ರತ್ಯೇಕ ಬಾಕ್ಸ್ ಅನ್ನು ಖರೀದಿಸಬೇಕಾಗಿಲ್ಲ.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ
ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು
August 30, 2026
5:57 AM
by: ದ ರೂರಲ್ ಮಿರರ್.ಕಾಂ
ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!
August 30, 2026
5:41 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌
August 29, 2026
6:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror