ನಮ್ಮ ನಿಯಮಿತ ಆಹಾರದ(Food) ಪ್ರಮುಖ ಭಾಗವೆಂದರೆ ಗೋಧಿ(Wheat), ಅಕ್ಕಿ(Rice), ಬೇಳೆ, ಸಜ್ಜೆ, ಕೆಲವು ಸಿರಿಧಾನ್ಯಗಳು(Serials) ಮತ್ತು ಬೇಳೆಕಾಳುಗಳಾದ(Pulses) ಹೆಸರು ಚೆನ್ನಂಗಿ, ಮಟ್ಕಿ ಮತ್ತು ಇತರ ಅನೇಕ ಕಾಳುಗಳು. ಇತ್ತೀಚಿನ ದಿನಗಳಲ್ಲಿ, ಧಾನ್ಯಗಳನ್ನು ಮೊಳಕೆಯೊಡಿಸಲು(Sprouted) ಕೆಲವು ವಿಶೇಷ ರೀತಿಯ ಪಾತ್ರೆಗಳು ಸಹ ಲಭ್ಯವಿದೆ. ದ್ವಿದಳ ಧಾನ್ಯಗಳ ಮೊಳಕೆಯೊಡೆಯುವುದು ನೈಸರ್ಗಿಕ ಪ್ರಕ್ರಿಯೆ.
ಈ ದ್ವಿದಳ ಧಾನ್ಯಗಳು ಡಬ್ಬಿಯಲ್ಲಿ ಮತ್ತು ಒಣಗಿರುವವರೆಗೆ, ಅವು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುತ್ತವೆ. ಅವು ಮೊಳಕೆಯೊಡೆಯಲು ಕೆಲವು ಪರಿಸ್ಥಿತಿಗಳು ಅವಶ್ಯಕತೆ ಇದೆ. ಆರ್ದ್ರತೆ ಮತ್ತು ಕತ್ತಲೆ ಅದರ ಪ್ರಮುಖ ಭಾಗಗಳು! ನಾವು ಧಾನ್ಯಗಳನ್ನು ನೀರಿನಲ್ಲಿ ನೆನೆಸುತ್ತೇವೆ. ನಂತರ ಅವು ಮೊಳಕೆಯೊಡೆಯುತ್ತವೆ ಮತ್ತು ದಿನ ದಿನಕ್ಕೆ ಬೆಳೆಯಲು ಪ್ರಾರಂಭಿಸುತ್ತವೆ. ಮೊಳಕೆಯೊಡೆಯುವ ಮೊದಲು, ಧಾನ್ಯದಲ್ಲಿನ ಪಿಷ್ಟವು ನಿಧಾನವಾಗಿ ಪ್ರೋಟೀನ್ ಆಗಿ ಬದಲಾಗುತ್ತದೆ; ಅದೇ ಸಮಯದಲ್ಲಿ, ‘ಬಿ’, ‘ಸಿ’ ಅಥವಾ ಕೆಲವೊಮ್ಮೆ ‘ಇ’ ವಿಟಮಿನ್ಗಳ ಪ್ರಮಾಣವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಮೊಳಕೆಯೊಡೆದ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯವೂ ಹೆಚ್ಚಾಗುತ್ತದೆ. ಆದರೆ ಆದರೆ ನಾವು ಈ ಕಾಳು ಮೊಳಕೆಯನ್ನು ಎಷ್ಟು ಬೆಳೆಯಲು ಬಿಡಬೇಕು?
ಮೊಳಕೆಯೊಡೆದ ಬೇಳೆಕಾಳುಗಳಲ್ಲಿ ಜೀವಸತ್ವಗಳ ಪ್ರಮಾಣವು ಹೆಚ್ಚಾಗಿರುತ್ತದೆ ಎಂಬುದು ನಿಜವಾದರೂ, ಈ ಕ್ರಮವು ಮತ್ತಷ್ಟು ಹೆಚ್ಚಾದರೆ, ವಿಟಮಿನ್ಗಳ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮತ್ತು ಕೆಲವೊಮ್ಮೆ ದೀರ್ಘಕಾಲ ಮೊಳಕೆಯೊಡೆದ ಬೇಳೆಕಾಳುಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆಹಾರದಲ್ಲಿ ಯಾವುದೇ ಬೇಳೆಕಾಳುಗಳು ಸ್ವಲ್ಪ ಮೊಳಕೆ ಬಂದರೆ ಅವುಗಳನ್ನು ಬಳಸುವುದು ಉತ್ತಮ! ಅಂದರೆ, ಮೊಳಕೆಯು ಸುಮಾರು ಎರಡರಿಂದ ಮೂರು ಮಿಮಿ ಉದ್ದ ಬೆಳೆದರೆ ಸಾಕು. ಅಲ್ಲದೆ, ಅಂಕುರಿಸುವ ಪರಿಸ್ಥಿತಿಗಳನ್ನು ನಾವು ತಿಳಿದಿರುವ ಕಾರಣ, ನಾವು ಅದಕ್ಕಾಗಿ ಪ್ರತ್ಯೇಕ ಬಾಕ್ಸ್ ಅನ್ನು ಖರೀದಿಸಬೇಕಾಗಿಲ್ಲ.
ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ
ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯವಾಗಲಿದೆ ಎಂದು ದಾವಣಗೆರೆ…
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ತಕ್ಷಣವೇ ಶಾಲಾ ಶಿಕ್ಷಣ ಇಲಾಖೆಗೆ 17 ಸಾವಿರ ಶಿಕ್ಷಕರ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಎರಡು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ…
18.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದ ಮೊದಲ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್…
ರಾಜ್ಯದ ನೈಋತ್ಯ ಒಳನಾಡಿನಲ್ಲಿ ಸಕ್ರಿಯವಾಗಿದ್ದು ಕರಾವಳಿಯಲ್ಲಿ ಸಾಮಾನ್ಯವಾಗಿತ್ತು. ಆ.20 ರ ವರೆಗೆ ಭಾರಿ…