ಸುದ್ದಿಗಳು

ಹಣ್ಣುಗಳ ರಾಜ ಮಾವಿನ ಹಣ್ಣಿಗೆ ವಿದೇಶದಲ್ಲಿ ಭಾರಿ ಬೇಡಿಕೆ | ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಭಾರತದ ಮಾವೇ ಮಹಾರಾಜ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತದಲ್ಲಿ 1000 ಕ್ಕೂ ಹೆಚ್ಚಿನ ವಿವಿಧ ತಳಿಯ ಮಾವುಗಳಿವೆ. ಅವುಗಳಲ್ಲಿ 20 ತಳಿಯ ಹಣ್ಣುಗಳನ್ನು ಮಾತ್ರ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಭಾರತದ ಪಾಲು ಬರೋಬರಿ 36%. ಭಾರತದಲ್ಲಿ ವಾರ್ಷಿಕವಾಗಿ 18 ಮಿಲಿಯನ್ ಟನ್‌ಗಳಷ್ಟು ಮಾವು ಬೆಳೆಯಲಾಗುತ್ತದೆ. ಮಾವಿನ ಬೆಳವಣಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ಬೆಳೆಯುವ ಮಾವಿನ ಪ್ರಮಾಣ ಕೇವಲ 4 ಮಿಲಿಯನ್ ಟನ್ ಮಾತ್ರ. ಈ ಹಿನ್ನಲೆಯಲ್ಲಿ ಮಾವು ಅಕ್ಷರಶಃ ಭಾರತದ ಹಣ್ಣು; ಭಾರತದ ರಾಷ್ಟ್ರೀಯ ಹಣ್ಣಾಗಿರುವುದಕ್ಕೂ ಸಾರ್ಥಕ.

Advertisement

ಭಾರತದಲ್ಲಿ ಬೆಳೆಯುವ ಒಟ್ಟು ಮಾವಿಹಣ್ಣುಗಳಲ್ಲಿ 23% ಉತ್ತರ ಪ್ರದೇಶದಲ್ಲಿ ಬೆಳೆದರೆ, ಆಂದ್ರದಲ್ಲಿ 22% ಮತ್ತು ಕರ್ನಾಟಕದಲ್ಲಿ 11% ಬೆಖೆಯಲಾಗುತ್ತದೆ. ಕೇವಲ ಈ ಮೂರು ರಾಜ್ಯಗಳು ದೇಶದ ಒಟ್ಟಾರೆ ಮಾವಿನ ಹಣ್ಣುಗಳಲ್ಲಿ 50% ಕ್ಕಿಂತ ಹೆಚ್ಚು ಬೆಳೆಯುತ್ತವೆ.ಮಾವಿನ ಕೆಲವು ಪ್ರಮುಖ ತಳಿಗಳ ವಿವರ ತಿಳಿಯುವುದಾದರೆ.

ಅಲ್ಫೊನ್ಸೋ (ಬಾದಾಮಿ): ಈ ತಳಿಯ ಹಣ್ಣಿಗೆ ಕರ್ನಾಟಕದಲ್ಲಿ ಬಾದಾಮಿ ಮತ್ತು ಮಹಾರಾಷ್ಟ್ರದಲ್ಲಿ ಹಪ್ಪುಸ್ ಎಂದು ಕರೆಯಲಾಗುತ್ತದೆ. ಅಲ್ಫೋನ್ಸೋಸ್ ಅನ್ನು “ಮಾವಿನ ರಾಜ” ಎಂದು ಕರೆಯಲಾಗುತ್ತದೆ.

ತೋತಾಪುರಿ: ದೊಡ್ಡಗಾತ್ರದ ಉದ್ದನೆಯ ಈ ತಳಿ ನಮ್ಮ ಕರ್ನಾಟಕ ಮೂಲದ್ದು. ಹಳದಿ‌ ಮಿಶ್ರಿತ ಕೆಂಬಣ್ಣದ ಈ ತಳಿ ಕಾಯಿ ಇದ್ದಾಗಲೂ ಹೆಚ್ಚಾಗಿ ಬಳಸುತ್ತಾರೆ. ಸಂಸ್ಕರಣೆ ಮಾಡಲು ಕೂಡ ವ್ಯಾಪಕವಾಗಿ ಬಳಸಲಾಗುತ್ತದೆ.

ಬಂಗನಪಲ್ಲಿ: ಸಫೇದಾ ಎಂದೂ ಕರೆಯಲ್ಪಡುವ ಇದು ಆಂಧ್ರ ಮತ್ತು ತಮಿಳುನಾಡಿನ ವಾಣಿಜ್ಯ ತಳಿಯಾಗಿದೆ.

ದಶೇರಿ: ಲಕ್ನೋ ಬಳಿಯ ದಶೆಹರಿ ಎಂಬ ಹಳ್ಳಿಯಿಂದ ಈ ತಳಿಯ ಹೆಸರು ಬಂದಿದೆ. ತನ್ನ ಸಿಹಿ ಮತ್ತು ವಿಶಿಷ್ಟ ರುಚಿಯಿಂದ ಖ್ಯಾತಿ ಗಳಿಸಿದೆ.

ಹಿಮ್ಸಾಗರ್: ಇದು ಬಂಗಾಳದ ಸ್ಥಳೀಯ ತಳಿಯಾಗಿದ್ದು, ಆ ಭಾಗದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.

ಕೇಸರ್: ಇದು ಗುಜರಾತ್‌ನ ಮೂಲದ ಕೇಸರ್ ದೇಶದ ದುಬಾರಿ ಬೆಲೆಯ ಮಾವಿನ ತಳಿಗಳಲ್ಲಿ ಪ್ರಮುಖವಾದ್ದದ್ದಾಗಿದೆ. ಮಧ್ಯಮ ಗಾತ್ರದ ಈ ಹಣ್ಣು ಹೆಚ್ಚು ಉದ್ದವಾಗಿದ್ದು ಹೆಚ್ಚು ದಿನ ಸಂಗ್ರಹಿಸಿಡಬಹುದಾಗಿದೆ.

ಲಾಂಗ್ರಾ: ಉತ್ತರ ಪ್ರದೇಶದ ವಾರಣಾಸಿ ಪ್ರದೇಶದ ಸ್ಥಳೀಯ ಮೂಲದ ತಳಿ. ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಈ ತಳಿಯ ಒಂದು ಪ್ರಾಚೀನ ಮಾವಿನ ಮರ ಈಗಲೂ ಇದ್ದು, ಆ ಮರದ ಮಾಲೀಕನ ಹೆಸರು ಈ‌ ತಳಿಗೆ ಬಂದಿದೆ ಎಂದು ಹೇಳಲಾಗುತ್ತದೆ.

ಅಂಬಿಕಾ: ಇದು ಅಮ್ರಪಾಲಿ ಮತ್ತು ಜನಾರ್ದನ್ ಪಸಂದ್ ತಳಿಗಳಿಂದ ಅಭಿವೃದ್ಧಿ ಪಡಿಸಿದ ಮಿಶ್ರತಳಿ. ಈ ತಳಿಯನ್ನು ವಾಣಿಜ್ಯ ಕೃಷಿಗಾಗಿ 2000 ರಲ್ಲಿ ಅಭಿವೃದ್ಧಿ ಪಡಿಸಲಾಯಿತು.

ಮುಲ್ಗೋವಾ: ಇದು ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ತಳಿಯಾಗಿದೆ. ಉತ್ತಮ ಗುಣಮಟ್ಟದ ಕಾರಣದಿಂದಾಗಿ ಮಾವಿನ ಪ್ರಿಯರಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದೆ.

ವನರಾಜ್: ಇದು ಗುಜರಾತ್‌ನ ವಡೋದರ ಜಿಲ್ಲೆಯ ದುಬಾರಿ ಬೆಲೆಯ ತಳಿಯಾಗಿದ್ದು, ಕೃಷಿಕರಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಹಣ್ಣು ಮಧ್ಯಮ ಗಾತ್ರದಲ್ಲಿರುತ್ತದೆ.

ಸುವರ್ಣರೇಖಾ: ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಾಣಿಜ್ಯ ತಳಿಯಾಗಿದೆ.

ಚೌಸಾ : ಈ ತಳಿಯು ಉತ್ತರ ಪ್ರದೇಶದ ಸ್ಯಾಂಡಿಲಾ ಜಿಲ್ಲೆಯ ಹರ್ಡೋಯಿಯ ತೋಟವೊಙದರಲ್ಲಿ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ತಳಿ ಎನ್ನಲಾಗಿದೆ.

Source: India.in.fixels

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

5 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

10 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

18 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

19 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago