Advertisement
ಕಿಟಕಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

Share

ಅಡುಗೆ ಏನು ಮಹಾ. ಅನ್ನ ಸಾರು ಮಾಡಿ ಊಟ ಮಾಡಲು ಎಷ್ಟು ಹೊತ್ತು ಬೇಕಾಪ್ಪಾ ? ಎಂದು ಕೇವಲವಾಗಿ ಮಾತಾಡುವವರು ಕಮ್ಮಿ ಇಲ್ಲ. ಆದರೆ ಅನ್ನ ಸರಿಯಾಗಿ ಬೆಂದರೆ ರುಚಿ, ಇಲ್ಲವಾದರೆ ಅಜೀರ್ಣವಾದೀತು….!

ಅವಸರದವರಿಗೆ ಬೆಳ್ತಿಗೆ ಅನ್ನವೇ ಸೂಕ್ತ. ಅದು ಕುಕ್ಕರ್ ಲ್ಲಿ ಇಟ್ಟರಂತೂ ಹತ್ತಿಪ್ಪತ್ತು ನಿಮಿಷದಲ್ಲಿ ತಯಾರು. ಆದರೆ ತೆಳಿ ಬಗ್ಗಿಸಿ ಮಾಡುವ ಅನ್ನದ ರುಚಿಯೂ , ಕುಕ್ಕರಿನಲ್ಲಿ ಬೇಯಿಸಿದ ಅನ್ನದ ಸ್ವಾದಕ್ಕೂ ವ್ಯತ್ಯಾಸಗಳಿವೆ. ಕುದಿಯುವ ನೀರಿಗೆ ತೊಳೆದ ಅಕ್ಕಿ ಹಾಕಿ ಮಡಿಕೆಯಲ್ಲಿ ಬೇಯಿಸಿ ಬಗ್ಗಿಸಿದರೆ ವಾವ್ ಏನು ರುಚಿ.ಅನ್ನ ಬೇಯುವಾಗ ಇಡೀ ಮನೆ ಪರಿಮಳ. ಅದೂ ಮನೆಯ ಗದ್ದೆಯಲ್ಲಿ ಬೆಳೆಸಿದ ಭತ್ತದ ಅಕ್ಕಿಯಾದರೆ ವಿಶೇಷ. ಹಿಂದೆಲ್ಲಾ ಉಪ್ಪಿಟ್ಟು ಮಾಡಲೆಂದೇ ಒಂದು ಗದ್ದೆಯಲ್ಲಿ ಗಂಧಸಾಲೆ ಭತ್ತ ಬೆಳೆಸುತ್ತಿದ್ದರಂತೆ. ಇದು ಅತ್ತೆಯವರ ಗತಕಾಲದ ನೆನಪುಗಳು. ಅವರು ಹಾಗೆ ನೆನಪು ಮಾಡಿ ಕೊಂಡರಲ್ಲಾ ಅಂತ ನಮ್ಮ ಯಜಮಾನರು ಗಂಧಸಾಲೆ ಅಕ್ಕಿ ಉಪ್ಪಿಟ್ಟು ಮಾಡಲೆಂದೇ ತಂದರು. ಅದನ್ನು ತೊಳೆಯುವಾಗಲೇ ಘಮಘಮ. ಸ್ವಲ್ಪ ನೀರು ಆರಲಿ ಎಂದು ಪ್ಯಾನ್ ಅಡಿಯಲ್ಲಿ ಆರಲು ಬಿಟ್ಟೆ .ಇಡೀ ಮನೆ ಪರಿಮಳ ಬರಲಾರಂಭಿಸಿತು. ಅತ್ತೆಯವರಿಗೂ ಹಳೆಯ ನೆನಪುಗಳು ಕಾಡಲಾರಂಭಿಸಿತು.

ಮರು ದಿನ ಬೆಳಿಗ್ಗೆ ಇವರು ಕೇಳ್ತಾರೆ ಅಲ್ಲಾ ನಿನ್ನೆ ಅಕ್ಕಿಯೆಲ್ಲಾ ತರಿಸಿದೆ, ಅದರ ಉಪ್ಪಿಟ್ಟು ಯಾಕೆ ಮಾಡಲಿಲ್ಲ ಅಂತ. ಓಹ್ ರಾಮ , ಬೆಳಿಗ್ಗೆ ತಿಂಡಿಗೆ ಮಾಡಿದ್ದಲ್ವಾ? ಮರೆತು ಹೋಯಿತಾ ಇಷ್ಟು ಬೇಗ . ಉಪ್ಪಿಟ್ಟು ಎಂತ ಪರಿಮಳವೂ ಇರಲಿಲ್ಲ, ಶುಂಠಿ, ಬೇವಿನ ಸೊಪ್ಪೇ ಭರ್ಜರಿ ಹಾಕಿ ಬಿಟ್ಯಾ ಅಂತ.‍ ನನಗೂ ಹಾಗೇ ಅನ್ನಿಸಿತು. ಅಕ್ಕಿ ತೊಳೆಯುವಾಗ ಇದ್ದ ಪರಿಮಳ ಬೇಯಿಸುವಾಗ ಬರುತ್ತಿಲ್ಲವಲ್ಲಾ ಅಂತ. ಈ ಅಕ್ಕಿಯ ಕ್ರಮವೇ ಹಾಗೆಯಾ ಏನೋ ಅಂದು ಕೊಂಡೆ. ಆದರೆ ನಮ್ಮ ಗದ್ದೆಯಲ್ಲಿ ಬೆಳೆಯುತ್ತಿದ್ದ ಅಕ್ಕಿಯ ಉಪ್ಪಿಟ್ಟು ಮಾಡಿದರೆ ಇಡೀ ಮನೆ ಪರಿಮಳ ಬರುತ್ತಿತ್ತು. ಉಪ್ಪಿಟ್ಟಿನ ಮುಚ್ಚಳ ತೆಗೆದರೆ ಸಂಜೆಯಾದರೂ ಪರಿಮಳ ಹೋಗುತ್ತಿರಲಿಲ್ಲ. ಆದರೆ ಈ ಅಕ್ಕಿಯ ಉಪ್ಪಿಟ್ಟು ಹಾಗಿಲ್ಲವಲ್ಲ…..ಆ ಕಾಲವೇ ಚೆಂದ . ನಮ್ಮ ಆಹಾರದ ಹೆಚ್ಚಿನ ಭಾಗವನ್ನು ಮನೆಯಲ್ಲೇ ಬೆಳೆಯುತ್ತಿದ್ದೆವು. ಅಕ್ಕಿ, ಬೇಳೆ ತರಕಾರಿ, ಹಣ್ಣುಗಳು……. ಪೇಟೆಯಿಂದ ಎಲ್ಲೋ ಕೆಲವು ಸಾಮಾನುಗಳು ಮಾತ್ರ ತರುತ್ತಿದ್ದುದು.

ಆದರೆ ಈಗ ಮನೆಯಲ್ಲೇ ಬೆಳೆದ ಸೌತೆಯೂ ಕಹಿ, ಕುಂಬಳ, ಹೀರೆಕಾಯಿಯೂ ಕಹಿ. ಹಾಗಲಕಾಯದ್ದಾದರೆ ಗುಣವೇ ಕಹಿ. ಆದರೆ ಉಳಿದ ತರಕಾರಿಗಳ ಗುಣಧರ್ಮ ಬದಲಾದದ್ದಾದರೂ ಹ್ಯಾಗೆ ಯಾಕೇ.. !? ನಿಮ್ಮಲ್ಲಿ ಉತ್ತರವಿದ್ದರೆ ನನಗೂ ಹೇಳಿ ಆಯ್ತಾ!’.

“ದ ರೂರಲ್‌ ಮಿರರ್.ಕಾಂ” WhatsApp ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

2 days ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

3 days ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

3 days ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

3 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

4 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

4 days ago