ಭಾರತದಲ್ಲಿ 1000 ಕ್ಕೂ ಹೆಚ್ಚಿನ ವಿವಿಧ ತಳಿಯ ಮಾವುಗಳಿವೆ. ಅವುಗಳಲ್ಲಿ 20 ತಳಿಯ ಹಣ್ಣುಗಳನ್ನು ಮಾತ್ರ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಭಾರತದ ಪಾಲು ಬರೋಬರಿ 36%. ಭಾರತದಲ್ಲಿ ವಾರ್ಷಿಕವಾಗಿ 18 ಮಿಲಿಯನ್ ಟನ್ಗಳಷ್ಟು ಮಾವು ಬೆಳೆಯಲಾಗುತ್ತದೆ. ಮಾವಿನ ಬೆಳವಣಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ಬೆಳೆಯುವ ಮಾವಿನ ಪ್ರಮಾಣ ಕೇವಲ 4 ಮಿಲಿಯನ್ ಟನ್ ಮಾತ್ರ. ಈ ಹಿನ್ನಲೆಯಲ್ಲಿ ಮಾವು ಅಕ್ಷರಶಃ ಭಾರತದ ಹಣ್ಣು; ಭಾರತದ ರಾಷ್ಟ್ರೀಯ ಹಣ್ಣಾಗಿರುವುದಕ್ಕೂ ಸಾರ್ಥಕ.
ಭಾರತದಲ್ಲಿ ಬೆಳೆಯುವ ಒಟ್ಟು ಮಾವಿಹಣ್ಣುಗಳಲ್ಲಿ 23% ಉತ್ತರ ಪ್ರದೇಶದಲ್ಲಿ ಬೆಳೆದರೆ, ಆಂದ್ರದಲ್ಲಿ 22% ಮತ್ತು ಕರ್ನಾಟಕದಲ್ಲಿ 11% ಬೆಖೆಯಲಾಗುತ್ತದೆ. ಕೇವಲ ಈ ಮೂರು ರಾಜ್ಯಗಳು ದೇಶದ ಒಟ್ಟಾರೆ ಮಾವಿನ ಹಣ್ಣುಗಳಲ್ಲಿ 50% ಕ್ಕಿಂತ ಹೆಚ್ಚು ಬೆಳೆಯುತ್ತವೆ.ಮಾವಿನ ಕೆಲವು ಪ್ರಮುಖ ತಳಿಗಳ ವಿವರ ತಿಳಿಯುವುದಾದರೆ.
ಅಲ್ಫೊನ್ಸೋ (ಬಾದಾಮಿ): ಈ ತಳಿಯ ಹಣ್ಣಿಗೆ ಕರ್ನಾಟಕದಲ್ಲಿ ಬಾದಾಮಿ ಮತ್ತು ಮಹಾರಾಷ್ಟ್ರದಲ್ಲಿ ಹಪ್ಪುಸ್ ಎಂದು ಕರೆಯಲಾಗುತ್ತದೆ. ಅಲ್ಫೋನ್ಸೋಸ್ ಅನ್ನು “ಮಾವಿನ ರಾಜ” ಎಂದು ಕರೆಯಲಾಗುತ್ತದೆ.
ತೋತಾಪುರಿ: ದೊಡ್ಡಗಾತ್ರದ ಉದ್ದನೆಯ ಈ ತಳಿ ನಮ್ಮ ಕರ್ನಾಟಕ ಮೂಲದ್ದು. ಹಳದಿ ಮಿಶ್ರಿತ ಕೆಂಬಣ್ಣದ ಈ ತಳಿ ಕಾಯಿ ಇದ್ದಾಗಲೂ ಹೆಚ್ಚಾಗಿ ಬಳಸುತ್ತಾರೆ. ಸಂಸ್ಕರಣೆ ಮಾಡಲು ಕೂಡ ವ್ಯಾಪಕವಾಗಿ ಬಳಸಲಾಗುತ್ತದೆ.
ಬಂಗನಪಲ್ಲಿ: ಸಫೇದಾ ಎಂದೂ ಕರೆಯಲ್ಪಡುವ ಇದು ಆಂಧ್ರ ಮತ್ತು ತಮಿಳುನಾಡಿನ ವಾಣಿಜ್ಯ ತಳಿಯಾಗಿದೆ.
ದಶೇರಿ: ಲಕ್ನೋ ಬಳಿಯ ದಶೆಹರಿ ಎಂಬ ಹಳ್ಳಿಯಿಂದ ಈ ತಳಿಯ ಹೆಸರು ಬಂದಿದೆ. ತನ್ನ ಸಿಹಿ ಮತ್ತು ವಿಶಿಷ್ಟ ರುಚಿಯಿಂದ ಖ್ಯಾತಿ ಗಳಿಸಿದೆ.
ಹಿಮ್ಸಾಗರ್: ಇದು ಬಂಗಾಳದ ಸ್ಥಳೀಯ ತಳಿಯಾಗಿದ್ದು, ಆ ಭಾಗದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.
ಕೇಸರ್: ಇದು ಗುಜರಾತ್ನ ಮೂಲದ ಕೇಸರ್ ದೇಶದ ದುಬಾರಿ ಬೆಲೆಯ ಮಾವಿನ ತಳಿಗಳಲ್ಲಿ ಪ್ರಮುಖವಾದ್ದದ್ದಾಗಿದೆ. ಮಧ್ಯಮ ಗಾತ್ರದ ಈ ಹಣ್ಣು ಹೆಚ್ಚು ಉದ್ದವಾಗಿದ್ದು ಹೆಚ್ಚು ದಿನ ಸಂಗ್ರಹಿಸಿಡಬಹುದಾಗಿದೆ.
ಲಾಂಗ್ರಾ: ಉತ್ತರ ಪ್ರದೇಶದ ವಾರಣಾಸಿ ಪ್ರದೇಶದ ಸ್ಥಳೀಯ ಮೂಲದ ತಳಿ. ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಈ ತಳಿಯ ಒಂದು ಪ್ರಾಚೀನ ಮಾವಿನ ಮರ ಈಗಲೂ ಇದ್ದು, ಆ ಮರದ ಮಾಲೀಕನ ಹೆಸರು ಈ ತಳಿಗೆ ಬಂದಿದೆ ಎಂದು ಹೇಳಲಾಗುತ್ತದೆ.
ಅಂಬಿಕಾ: ಇದು ಅಮ್ರಪಾಲಿ ಮತ್ತು ಜನಾರ್ದನ್ ಪಸಂದ್ ತಳಿಗಳಿಂದ ಅಭಿವೃದ್ಧಿ ಪಡಿಸಿದ ಮಿಶ್ರತಳಿ. ಈ ತಳಿಯನ್ನು ವಾಣಿಜ್ಯ ಕೃಷಿಗಾಗಿ 2000 ರಲ್ಲಿ ಅಭಿವೃದ್ಧಿ ಪಡಿಸಲಾಯಿತು.
ಮುಲ್ಗೋವಾ: ಇದು ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ತಳಿಯಾಗಿದೆ. ಉತ್ತಮ ಗುಣಮಟ್ಟದ ಕಾರಣದಿಂದಾಗಿ ಮಾವಿನ ಪ್ರಿಯರಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದೆ.
ವನರಾಜ್: ಇದು ಗುಜರಾತ್ನ ವಡೋದರ ಜಿಲ್ಲೆಯ ದುಬಾರಿ ಬೆಲೆಯ ತಳಿಯಾಗಿದ್ದು, ಕೃಷಿಕರಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಹಣ್ಣು ಮಧ್ಯಮ ಗಾತ್ರದಲ್ಲಿರುತ್ತದೆ.
ಸುವರ್ಣರೇಖಾ: ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಾಣಿಜ್ಯ ತಳಿಯಾಗಿದೆ.
ಚೌಸಾ : ಈ ತಳಿಯು ಉತ್ತರ ಪ್ರದೇಶದ ಸ್ಯಾಂಡಿಲಾ ಜಿಲ್ಲೆಯ ಹರ್ಡೋಯಿಯ ತೋಟವೊಙದರಲ್ಲಿ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ತಳಿ ಎನ್ನಲಾಗಿದೆ.
Source: India.in.fixels
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…