ಮಾನವನ ಹೃದಯವು ಹೂವಿನಂತೆ ಮೃದುವಾಗಿಯೂ, ಅಗ್ನಿಯಂತೆ ದಹಿಸುವಂತೆಯೂ ಇದೆ. ಹೂವು ಅರಳುವಾಗ ಸುಗಂಧ ಹರಡುತ್ತದೆ; ಅಗ್ನಿ ಹೊತ್ತಿಕೊಂಡರೆ ದಹನ. ಇದೇ ರೀತಿಯಾಗಿ ಸಿಟ್ಟು, ಕೋಪ, ಅಸಹನೆ – ಇವು ಮನುಷ್ಯನ ಮನಸ್ಸಿನ ಆಳದಿಂದ ಹೊಮ್ಮುವ ಅಗ್ನಿಶಿಖೆಗಳು. ಕೆಲವೊಮ್ಮೆ ಅವು ನ್ಯಾಯಕ್ಕಾಗಿ ಉರಿಯುತ್ತವೆ, ಕೆಲವೊಮ್ಮೆಅಜ್ಞಾನದಿಂದ ಉಕ್ಕಿ ಎಲ್ಲವನ್ನೂ ಸುಡುತ್ತವೆ. ಭಗವದ್ಗೀತೆಯೊಂದು ಶ್ಲೋಕ ನೆನಪಾಗುತ್ತದೆ:
क्रोधाद्भवति संमोहः संमोहत्स्मृतिविभ्रमः।
स्मृतिभ्रंशाद् बुद्धिनाशो बुद्धिनाशात्प्रणश्यति॥
“ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ಸ್ಮೃತಿವಿಭ್ರಮಃ।
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ॥” (ಗೀತೆ 2.63)
ಕೋಪವು ಬಂದರೆ ಮನುಷ್ಯ ತನ್ನನ್ನು ತಾನು ಮರೆಯುವನು, ಮರೆತರೆ ಬುದ್ಧಿ ನಾಶವಾಗುತ್ತದೆ, ಬುದ್ಧಿ ನಾಶವಾದರೆ ಅವನು ಪತನಗೊಳ್ಳುತ್ತಾನೆ.
ಕೋಪಕ್ಕೆ ಕಾರಣ ಅನ್ಯಾಯವಿರಬಹುದು, ಅವಮಾನವಿರಬಹುದು, ತಡೆಯಲಾಗದ ನಿರೀಕ್ಷಾಭಂಗವಿರಬಹುದು. ಒಂದು ಮಗು ತನ್ನ ಆಟದ ಬೊಂಬೆ ಒಡೆದಾಗ ಅಳುತ್ತಾ ಕಾಲೆಸೆದು ಸಿಟ್ಟುಗೊಳ್ಳುತ್ತದೆ; ಹಾಗೆಯೇ ದೊಡ್ಡವನೂ ತನ್ನ ಬಯಕೆಯ ಕನಸು ಒಡೆದಾಗ ಕೋಪದಿಂದ ಉರಿಯುತ್ತಾನೆ. ಮನುಷ್ಯನ ಮನಸ್ಸು ಯಾವ ವಯಸ್ಸಿನಲ್ಲಾದರೂ ಹಠವನ್ನು ಬಿಡುವುದಿಲ್ಲ.
ಕೋಪವೆಂಬುದು ದೇಹದಲ್ಲಿ ಹೊತ್ತಿ ಉರಿಯುವ ದೀಪ . ಕೋಪ ಬಂದ ಕ್ಷಣದಲ್ಲಿ ದೇಹವೆಲ್ಲ ವಿದ್ಯುತ್ ಸ್ಪಂದನೆಯಂತೆ ಚುರುಕಾಗುತ್ತದೆ.ಹೃದಯ ಬಡಿತವು ಹೆಚ್ಚಾಗುತ್ತದೆ.ಉಸಿರಾಟ ವೇಗಗೊಳ್ಳುತ್ತದೆ.ರಕ್ತದ ಒತ್ತಡ ಏರುತ್ತದೆ. ಸ್ಥೂಲವಾಗಿ . ಸಿಟ್ಟು, ಕೋಪ, ಅಸಹನೆಗೆ ಕಾರಣಗಳನ್ನೂ ಹೀಗೆ ಪಟ್ಟಿ ಮಾಡಬಹುದು.
ಮಾನಸಿಕವಾಗಿ ಸಿಟ್ಟಿನ ಮೂಲ ಹಲವಾರು ಇರುತ್ತವೆ. “ನನ್ನ ಮಾತು ಕೇಳಿಲ್ಲ”, “ನನಗೆ ಅನ್ಯಾಯವಾಯಿತು” ಎಂಬ ಭಾವನೆ , ಕೋಪದಿಂದ ತಾನು ಬಲಶಾಲಿ ಎಂದು ತೋರಿಸುವ ಪ್ರಯತ್ನ., ಹಳೆಯ ನೋವು, ಅವಮಾನ, ಹೀನತೆಗಳು ನೆನಪಾಗಿ ಸಿಟ್ಟಿನ ರೂಪದಲ್ಲಿ ಹೊರಬರುತ್ತವೆ.ಮತ್ತು ದುಃಖ, ಭಯ, ಅಸಹನೆಗಳನ್ನು ಕೋಪದ ಮುಖಾಂತರ ಹೊರಹಾಕುವುದು. ಕೋಪದ ಕೆಲವೊಂದು ದೃಷ್ಟಾ0ತಗಳನ್ನು ನೋಡೋಣ.
ಕವಿ ದ.ರಾ. ಬೇಂದ್ರೆಯ ವರು ಒಂದು ಕಡೆ ಹೇಳುತ್ತಾರೆ,
“ಕೋಪವನು ದಹಿಸುವ ಜ್ವಾಲೆಯಾಗಿ
ಕೈಬಿಡದೆ ಹಿಡಿದರೆ ದೀಪವಾಗುವುದು.”
ಅಂದರೆ ಕೋಪವನ್ನು ನಿಯಂತ್ರಿಸಿದರೆ ಅದು ದೀಪವಾಗಿ ಬೆಳಗುತ್ತದೆ, ನಿಯಂತ್ರಣ ತಪ್ಪಿದರೆ ದಹನವಾಗುತ್ತದೆ. ನಿಯಂತ್ರಣ ತಪ್ಪಿದ ಸಿಟ್ಟು ಒಂದು ಮಾನಸಿಕ ದುರ್ಬಲತೆ.ಯಾರು ಸಿಟ್ಟನ್ನು ನಿಯಂತ್ರಣದಲ್ಲಿಡಬಲ್ಲರೋ ಅವರು ಬಲಿಷ್ಠರು. ಪ್ರಾಚೀನ ಭಾರತೀಯ ಚಿಂತನೆ ಕೋಪವನ್ನು “ಶತ್ರು” ಎಂದು ಪರಿಗಣಿಸಿದೆ.
क्रोधाद्भवति संमोहः , “ಕ್ರೋಧಾತ್ ಭವತಿ ಸಂಮೋಹಃ” (ಗೀತಾ 2.63) ಕೋಪದಿಂದ ವಿವೇಕ ನಾಶ.
ಬೌದ್ಧ ಧರ್ಮವು ಕೋಪವನ್ನು “ತ್ರಿವಿಷ” ಗಳಲ್ಲಿ ಒಂದೆಂದು ಹೇಳುತ್ತದೆ. ಮೋಹ, ಲೋಭ, ಕ್ರೋಧ. ಈ ಮೂರು ವಿಷಗಳನ್ನು ನಿಗ್ರಹಿಸಿದಾಗಲೇ ನಿರ್ವಾಣ.
ಇದನ್ನೆಲ್ಲಾ ಗಮನಿಸಿದಾಗ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಕೋಪವನ್ನು ನಿಯಂತ್ರಿಸಿಕೊಳ್ಳಬಹುದು. ಮುಖ್ಯವಾಗಿ ಕೋಪ ಬಂದಾಗ ಆಳವಾದ ಉಸಿರಾಟ ತೆಗೆದುಕೊಳ್ಳಬೇಕು. ತಕ್ಷಣ ಮಾತು ಬಿಡದೆ ಮೌನದಿಂದ ಕೋಪ ತಣಿಸಿಕೊಳ್ಳುವುದು.
ಧ್ಯಾನ ಮಾಡುವುದರ ಮೂಲಕ ದಿನನಿತ್ಯ ಮನಸ್ಸನ್ನು ಶಾಂತಗೊಳಿಸುವ ಅಭ್ಯಾಸ ಮಾಡಿಕೊಳ್ಳುವುದು. ಪ್ರತೀಕಾರದ ಕೋಪವಿಲ್ಲದೆ.ಅನ್ಯಾಯದ ಎದುರು ಧೈರ್ಯದಿಂದ ನಿಲ್ಲುವುದು. ಕೋಪದ ಶಕ್ತಿಯನ್ನು ಕಲೆ, ಸೇವೆ, ಶ್ರಮಕ್ಕೆ ತಿರುಗಿಸುವುದು.
ಉಪನಿಷತ್ತಿನಲ್ಲಿ ಹೇಳಿದಂತೆ, यः वै क्रोधं जयति स एव विजयी, “ಯೋ ಹ ವೈ ಕ್ರೋಧಂ ಜಯತಿ, ಸ ಏವ ವಿಜಯಿ”, ಯಾರು ಕೋಪವನ್ನು ಜಯಿಸುತ್ತಾರೋ ಅವರೇ ನಿಜವಾದ ವಿಜೇತರು. ವಿವೇಕಾನಂದರು ಹೇಳುತ್ತಾರೆ ಕೋಪವು ಶಕ್ತಿಯಂತೆ ಕಾಣಬಹುದು, ಆದರೆ ನಿಜವಾಗಿ ಅದು ದುರ್ಬಲತೆಯ ಸಂಕೇತ. ನಿಜವಾದ ಶಕ್ತಿ ಎಂದರೆ ತಾಳ್ಮೆ, ಕ್ಷಮೆ, ಸಮಭಾವ. ಯೋಗಶಾಸ್ತ್ರದಲ್ಲಿ ಮನಸ್ಸಿನ ಸಮತೋಲನ (ಸಮಭಾವ) ಕೋಪ ನಿಗ್ರಹಕ್ಕೆ ಮುಖ್ಯ.
ಕೋಪವು ಮನುಷ್ಯ ಹೃದಯದ ಬೆಂಕಿ. ಅದು ನಿಯಂತ್ರಣ ತಪ್ಪಿದರೆ ಮನಸ್ಸೆಂಬ ಮನೆಯನ್ನು ಸುಡುತ್ತದೆ; ನಿಯಂತ್ರಣದಲ್ಲಿದ್ದರೆ ಮನಸ್ಸಿನ ಕತ್ತಲನ್ನು ಬೆಳಗುತ್ತದೆ. ಸಿಟ್ಟು, ಕೋಪ, ಅಸಹನೆ – ಇವುಗಳನ್ನು ನಿರೋಧಿಸುವುದು ಸಾಧ್ಯವಿಲ್ಲ; ಆದರೆ ನಿಯಂತ್ರಿಸುವುದು ಮಾತ್ರ ಸಾಧ್ಯ. ಜೀವನದ ಕಲೆ ಎಂದರೆ ಕೋಪವನ್ನು ಶಾಂತಿಯ ಮಾರ್ಗಕ್ಕೆ ತಿರುಗಿಸುವ ಕಲೆ. “ಸತ್ಯ, ಧರ್ಮ, ಶಾಂತಿ – ಇವು ಕೋಪದ ಎದುರು ನಿಲ್ಲುವ ದೀಪಸ್ತಂಭಗಳು. ಮನಸ್ಸಿನ ಸಮತೋಲನವೇ ಕೋಪವನ್ನು ಸೋಲಿಸುವ ಶ್ರೇಷ್ಠ ಶಕ್ತಿ” ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…
ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…