MIRROR FOCUS

ಅಡಿಕೆ ಬೆಳೆಗಾರರಿಗೆ ಕೊಯ್ಲು- ರೋಗ ನಿರ್ವಹಣೆಯಲ್ಲೂ ರೈತರ ಜೊತೆ ಹೆಜ್ಜೆ ಹಾಕಿದ ಸಿಪಿಸಿಆರ್‌ಐ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈಚೆಗೆ ಅಡಿಕೆ ಬೆಳೆಗಾರರಿಗೆ ಆಸಕ್ತಿ ಮೂಡಿಸಿದ್ದು ಹಾಗೂ ಬೆಳೆಗಾರರಿಗೆ ಭರವಸೆ ಮೂಡಿಸಿದ ಕಾರ್ಯಗಳಲ್ಲಿ  ಪೈಬರ್‌ ದೋಟಿ ಪ್ರಮುಖವಾದ್ದು. ಇದೀಗ ಕೇಂದ್ರ ಸರ್ಕಾರದ ಸಿಪಿಸಿಆರ್‌ಐ ಸಂಸ್ಥೆಯೂ ರೈತರ ಜೊತೆಗೆ ಹೆಜ್ಜೆ ಹಾಕಿ ದೋಟಿ ಶಿಬಿರ ಆಯೋಜನೆ ಮಾಡಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಸದ್ಭಳಕೆ ಮಾಡಿದೆ. ಇದಕ್ಕೊಂದು ಉದಾಹರಣೆ ಫೈಬರ್‌ ದೋಟಿ ಶಿಬಿರ. ಇಷ್ಟೇ ಅಲ್ಲ ರೋಗ ನಿರ್ವಹಣೆ ಬಗ್ಗೆಯೂ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ.

Advertisement
Advertisement

ಈಚೆಗೆ ಫೈಬರ್‌ ದೋಟಿ ಮೂಲಕ ಅಡಿಕೆ ಕೊಯ್ಲು, ಸಿಂಪಡಣೆಯ ಬಗ್ಗೆ ಶಿರಸಿಯ ಮೂರುರು ಕಲ್ಲಬ್ಬೆಯಲ್ಲಿ ಯಶಸ್ವಿಯಾಗಿ ಅಡಿಕೆ ಬೆಳೆಗಾರರು ತಂಡ ಮಾಡಿ ಅಡಿಕೆ ಕೃಷಿಕರ ಬಹುದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಿರುವ ಬಗ್ಗೆ ಅಡಿಕೆ ಪತ್ರಿಕೆ ಸಮಗ್ರವಾದ ವರದಿ ಮಾಡಿತ್ತು. ಅದಾದ ಬಳಿಕ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಆಸಕ್ತಿ ವಹಿಸಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಸಹಕಾರದೊಂದಿಗೆ ಸಿಪಿಸಿಆರ್‌ ಐ ವಠಾರದಲ್ಲಿ ಫೈಬರ್‌ ದೋಟಿ ಶಿಬಿರ ನಡೆದಿತ್ತು. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ  ಮೂರುರು ಕಲ್ಲಬ್ಬೆಯಿಂದಲ ಆಗಮಿಸಿದ ತರಬೇತುದಾರರು ತರಬೇತಿ ನೀಡಿದ್ದರು. ಅದಾದ ಬಳಿಕ ಸಹಕಾರಿ ಸಂಘಗಳ ಮೂಲಕ ವಿವಿದೆಡೆ ತರಬೇತಿ ಶಿಬಿರ ನಡೆದಿತ್ತು. ಇದೀಗ ಕೇಂದ್ರ ಸರ್ಕಾರದ ಸಂಸ್ಥೆ, ಅಡಿಕೆ ಬೆಳೆಗಾರರ ಹಿತಕ್ಕಾಗಿಯೇ ಇರುವ ಸಿಪಿಸಿಆರ್‌ಐ ವಿಟ್ಲದಲ್ಲಿ ಸರಕಾರಿ ಸಂಸ್ಥೆಯ ಪ್ರಥಮ  ದೋಟಿ ಶಿಬಿರ ನಡೆಸುವ ಮೂಲಕ ಗಮನ ಸೆಳೆದಿದೆ.ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್‌ ಭಟ್‌ ಮೈಕ್‌ ಹಾಗೂ ಬಾಬು ಅವರು ತರಬೇತಿ ನೀಡಿದ್ದರು.

ದೋಟಿ ಕೌಶಲ್ಯ ತರಬೇತಿ ಅಡಿಕೆ ಕೃಷಿಕರ  ತಕ್ಷಣದ ಅಗತ್ಯ. ಇದನ್ನು ಮನಗಂಡು ಕೇಂದ್ರ ಸರಕಾರದ ಐಸಿಎಆರ್ ಸಂಸ್ಥೆ, ವಿಟ್ಲ ಸಿಪಿಸಿಆರ್ ಐ ವಿಟ್ಲದಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರ ನಡೆಸಿ ಇದೀಗ ಸಮಾರೋಪ ಹಂತದಲ್ಲಿದೆ. ಇದರಲ್ಲಿ ಸಾಮಾಜಿಕವಾಗಿ ಹಿಂದುಳಿದ 13 ಮಂದಿ ತರುಣರು ಈ ಶಿಬಿರದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಅಡಿಕೆ ಕೊಯ್ಲು, ಸಿಂಪಡಣೆ ಮಾತ್ರವಲ್ಲದೆ ತೆಂಗು ಕೊಯ್ಲು, ಅಡಿಕೆಯ ಸಿಂಗಾರ ಒಣಗುವ ರೋಗ – ಎಲೆ ಚುಕ್ಕಿ ರೋಗ ನಿರ್ವಹಣೆ ಹಾಗೂ ಅಡಿಕೆ ಬೆಳೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Advertisement

’ಆತ್ಮ’(ATMA- ಅಟ್ರಾಕ್ಟಿಂಗ್ ಆಂಡ್ ರಿಟೈನಿಂಗ್ ಯೂತ್ ಇನ್ ಅಗ್ರಿಕಲ್ಚರ್ ) ಯೋಜನೆಯಡಿ ಕೃಷಿ ಇಲಾಖೆ ಮತ್ತು ಅಡಿಕೆ ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳೂ ಇಂತಹ ತರಬೇತಿ ನಡೆಸಬಹುದು. ಸರಕಾರಿ ಮಟ್ಟದಲ್ಲಿ ಹೀಗೊಂದು ಅತ್ಯವಶ್ಯಕ ತರಬೇತಿಯನ್ನು ಬಹುಬೇಗನೆ ಸಂಘಟಿಸಿ ನಡೆಸಿ ಉಳಿದ ಸರಕಾರಿ ಸಂಸ್ಥೆಗಳಿಗೆ ಸಿಪಿಸಿಆರ್ ಐ ಮಾರ್ಗದರ್ಶಕವಾಗಿದೆ.

ಈ ಶಿಬಿರದ ಯಶಸ್ಸಿನ ರುವಾರಿಗಳಲ್ಲಿ ಒಬ್ಬರಾದ ಸಿಪಿಸಿ ಆರ್ ಐ ವಿಜ್ಞಾನಿ ಡಾ.ಭವಿಷ್ಯ ಅವರು ಹೇಳುವಂತೆ, ಈ ತಂಡದಲ್ಲಿ  ಪದವೀಧರರು, ಎಳೆಯರು, ಮರ ಏರಿ ಅಡಿಕೆ ಕೊಯ್ಲು, ಕಳೆ ಕತ್ತರಿಸುವ ಕೆಲಸ ಮಾಡುತ್ತಿರುವವರೂ ಇದ್ದಾರೆ. ಎಲ್ಲರಿಗೂ ಕಲಿಯಬೇಕೆಂಬ ಉತ್ಸಾಹವಿದೆ. ತುಂಬ ಮುತುವರ್ಜಿಯಿಂದ ಕಲಿಯುತ್ತಿದ್ದಾರೆ” ಎನ್ನುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?

ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…

56 minutes ago

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…

9 hours ago

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

11 hours ago

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…

16 hours ago

ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?

ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…

17 hours ago

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

22 hours ago