ಈಚೆಗೆ ಅಡಿಕೆ ಬೆಳೆಗಾರರಿಗೆ ಆಸಕ್ತಿ ಮೂಡಿಸಿದ್ದು ಹಾಗೂ ಬೆಳೆಗಾರರಿಗೆ ಭರವಸೆ ಮೂಡಿಸಿದ ಕಾರ್ಯಗಳಲ್ಲಿ ಪೈಬರ್ ದೋಟಿ ಪ್ರಮುಖವಾದ್ದು. ಇದೀಗ ಕೇಂದ್ರ ಸರ್ಕಾರದ ಸಿಪಿಸಿಆರ್ಐ ಸಂಸ್ಥೆಯೂ ರೈತರ ಜೊತೆಗೆ ಹೆಜ್ಜೆ ಹಾಕಿ ದೋಟಿ ಶಿಬಿರ ಆಯೋಜನೆ ಮಾಡಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಸದ್ಭಳಕೆ ಮಾಡಿದೆ. ಇದಕ್ಕೊಂದು ಉದಾಹರಣೆ ಫೈಬರ್ ದೋಟಿ ಶಿಬಿರ. ಇಷ್ಟೇ ಅಲ್ಲ ರೋಗ ನಿರ್ವಹಣೆ ಬಗ್ಗೆಯೂ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ.
ಈಚೆಗೆ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು, ಸಿಂಪಡಣೆಯ ಬಗ್ಗೆ ಶಿರಸಿಯ ಮೂರುರು ಕಲ್ಲಬ್ಬೆಯಲ್ಲಿ ಯಶಸ್ವಿಯಾಗಿ ಅಡಿಕೆ ಬೆಳೆಗಾರರು ತಂಡ ಮಾಡಿ ಅಡಿಕೆ ಕೃಷಿಕರ ಬಹುದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಿರುವ ಬಗ್ಗೆ ಅಡಿಕೆ ಪತ್ರಿಕೆ ಸಮಗ್ರವಾದ ವರದಿ ಮಾಡಿತ್ತು. ಅದಾದ ಬಳಿಕ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಆಸಕ್ತಿ ವಹಿಸಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಸಹಕಾರದೊಂದಿಗೆ ಸಿಪಿಸಿಆರ್ ಐ ವಠಾರದಲ್ಲಿ ಫೈಬರ್ ದೋಟಿ ಶಿಬಿರ ನಡೆದಿತ್ತು. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಮೂರುರು ಕಲ್ಲಬ್ಬೆಯಿಂದಲ ಆಗಮಿಸಿದ ತರಬೇತುದಾರರು ತರಬೇತಿ ನೀಡಿದ್ದರು. ಅದಾದ ಬಳಿಕ ಸಹಕಾರಿ ಸಂಘಗಳ ಮೂಲಕ ವಿವಿದೆಡೆ ತರಬೇತಿ ಶಿಬಿರ ನಡೆದಿತ್ತು. ಇದೀಗ ಕೇಂದ್ರ ಸರ್ಕಾರದ ಸಂಸ್ಥೆ, ಅಡಿಕೆ ಬೆಳೆಗಾರರ ಹಿತಕ್ಕಾಗಿಯೇ ಇರುವ ಸಿಪಿಸಿಆರ್ಐ ವಿಟ್ಲದಲ್ಲಿ ಸರಕಾರಿ ಸಂಸ್ಥೆಯ ಪ್ರಥಮ ದೋಟಿ ಶಿಬಿರ ನಡೆಸುವ ಮೂಲಕ ಗಮನ ಸೆಳೆದಿದೆ.ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್ ಭಟ್ ಮೈಕ್ ಹಾಗೂ ಬಾಬು ಅವರು ತರಬೇತಿ ನೀಡಿದ್ದರು.
ದೋಟಿ ಕೌಶಲ್ಯ ತರಬೇತಿ ಅಡಿಕೆ ಕೃಷಿಕರ ತಕ್ಷಣದ ಅಗತ್ಯ. ಇದನ್ನು ಮನಗಂಡು ಕೇಂದ್ರ ಸರಕಾರದ ಐಸಿಎಆರ್ ಸಂಸ್ಥೆ, ವಿಟ್ಲ ಸಿಪಿಸಿಆರ್ ಐ ವಿಟ್ಲದಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರ ನಡೆಸಿ ಇದೀಗ ಸಮಾರೋಪ ಹಂತದಲ್ಲಿದೆ. ಇದರಲ್ಲಿ ಸಾಮಾಜಿಕವಾಗಿ ಹಿಂದುಳಿದ 13 ಮಂದಿ ತರುಣರು ಈ ಶಿಬಿರದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಅಡಿಕೆ ಕೊಯ್ಲು, ಸಿಂಪಡಣೆ ಮಾತ್ರವಲ್ಲದೆ ತೆಂಗು ಕೊಯ್ಲು, ಅಡಿಕೆಯ ಸಿಂಗಾರ ಒಣಗುವ ರೋಗ – ಎಲೆ ಚುಕ್ಕಿ ರೋಗ ನಿರ್ವಹಣೆ ಹಾಗೂ ಅಡಿಕೆ ಬೆಳೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ.
’ಆತ್ಮ’(ATMA- ಅಟ್ರಾಕ್ಟಿಂಗ್ ಆಂಡ್ ರಿಟೈನಿಂಗ್ ಯೂತ್ ಇನ್ ಅಗ್ರಿಕಲ್ಚರ್ ) ಯೋಜನೆಯಡಿ ಕೃಷಿ ಇಲಾಖೆ ಮತ್ತು ಅಡಿಕೆ ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳೂ ಇಂತಹ ತರಬೇತಿ ನಡೆಸಬಹುದು. ಸರಕಾರಿ ಮಟ್ಟದಲ್ಲಿ ಹೀಗೊಂದು ಅತ್ಯವಶ್ಯಕ ತರಬೇತಿಯನ್ನು ಬಹುಬೇಗನೆ ಸಂಘಟಿಸಿ ನಡೆಸಿ ಉಳಿದ ಸರಕಾರಿ ಸಂಸ್ಥೆಗಳಿಗೆ ಸಿಪಿಸಿಆರ್ ಐ ಮಾರ್ಗದರ್ಶಕವಾಗಿದೆ.
ಈ ಶಿಬಿರದ ಯಶಸ್ಸಿನ ರುವಾರಿಗಳಲ್ಲಿ ಒಬ್ಬರಾದ ಸಿಪಿಸಿ ಆರ್ ಐ ವಿಜ್ಞಾನಿ ಡಾ.ಭವಿಷ್ಯ ಅವರು ಹೇಳುವಂತೆ, ಈ ತಂಡದಲ್ಲಿ ಪದವೀಧರರು, ಎಳೆಯರು, ಮರ ಏರಿ ಅಡಿಕೆ ಕೊಯ್ಲು, ಕಳೆ ಕತ್ತರಿಸುವ ಕೆಲಸ ಮಾಡುತ್ತಿರುವವರೂ ಇದ್ದಾರೆ. ಎಲ್ಲರಿಗೂ ಕಲಿಯಬೇಕೆಂಬ ಉತ್ಸಾಹವಿದೆ. ತುಂಬ ಮುತುವರ್ಜಿಯಿಂದ ಕಲಿಯುತ್ತಿದ್ದಾರೆ” ಎನ್ನುತ್ತಾರೆ.
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…