ಸುದ್ದಿಗಳು

ಈ ಲಕ್ಕಿ ಗಿಡ ನಿಮ್ಮ ಮನೆಯಲ್ಲಿ ಇರಲಿ : ಎಂತಹ ನೋವು ಇದ್ದರು ನಿವಾರಣೆ ಮಾಡುತ್ತೆ

Share

ಲಕ್ಕಿ
ಲಕ್ಕಿ ಬೀಳು ಜಾಗದಲ್ಲಿ ಅಥವಾ ಬೇಲಿ ಸಾಲಿನಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಹೆಚ್ಚಿನ ನಿಗಾ ಏನು ಬೇಡದ ಹೆಚ್ಚು ಉಪಯುಕ್ತವಾದ ಗಿಡ . ಇದರಲ್ಲಿ ಎರಡು ವಿಧ ಬಿಳಿ ಮತ್ತು ಕಪ್ಪು. ಕಪ್ಪು ವಾಮಾಚಾರ ಮುಂತಾದವುಗಳಲ್ಲಿ ಬಳಕೆಯಾದರೆ, ಬಿಳಿ ಸಾಧಾರಣವಾಗಿ ಎಲ್ಲಾ ಕಡೆ ಬೆಳೆಯುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ .
ನಮ್ಮ ಶಾಲಾ ದಿನಗಳಲ್ಲಿ ಲಕ್ಕಿ ಕೋಲು ಕ್ಲಾಸಿಗೆ ಎಂಟ್ರಿ ಆಗಿದೆ ಎಂದರೆ ಯಾರಿಗೋ ಗ್ರಹಚಾರ ಕಾಡಿದೆ ಎಂದು ಅರ್ಥ. ತುದಿಯವರೆಗೆ ಜಳುಕುತ್ತದೆ, ಆದರೆ ಮುರಿಯುವುದಿಲ್ಲ ಅಷ್ಟು ಗಟ್ಟಿ.
ಇದರ ಕಾಯಿ, ಬೇರು, ಎಲೆ, ಹೂಗಳನ್ನು ಔಷಧಿ ಆಗಿ ಉಪಯೋಗಿಸುತ್ತಾರೆ. ಬಿಳಿಯಲ್ಲೂ ಎರಡು ವಿಧ ಇದೆ. ಒಂದು ಬಿಳಿ ಹೂ ಬಿಡುವ ಸುಂದರಿ, ಮತ್ತೊಂದು ನೀಲಿ ಹೂವು ಬಿಡುವ ಬೆಡಗಿ. ಆದರೆ ಔಷಧೀಯ ಗುಣ ಒಂದೇ.
1) ಬಿಳಿ ಲಕ್ಕಿ ಎಲೆಗಳ ಕಷಾಯ ಸೇವನೆಯಿಂದ ಕೈ ಕಾಲು ಉರಿ ಗುಣವಾಗುತ್ತದೆ.
2) ಎಲೆಗಳನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಕಟ್ಟುವುದರಿಂದ ನೋವು ನಿವಾರಣೆಯಾಗುತ್ತದೆ ಸಂಧಿವಾತಕ್ಕೆ ಒಳ್ಳೆಯ ಔಷದ.
3) ಎಲೆಗಳನ್ನು ಕಷಾಯ ಮಾಡಿ ಕುಡಿಯುವುದರಿಂದ ಜ್ವರ ನಿವಾರಣೆ ಆಗುತ್ತದೆ.
4) ಎಲೆಗಳನ್ನು ತುಪ್ಪದಲ್ಲಿ ಹುರಿದು ಕರಕು ಮಾಡಿ ನುಣ್ಣನೆಯ ಪುಡಿ ಮಾಡಿ ಲೇಪಿಸುವುದರಿಂದ ಸರ್ಪ ಸುತ್ತು ಗುಣವಾಗುತ್ತದೆ.
5) ಎಲೆಯರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಸೇವಿಸುವುದರಿಂದ ಸಂಗ್ರಹಿತ ಕಫ ಹೊರಗೆ ಬರುತ್ತದೆ, ಮಾಹಿತಿ ಇದ್ದವರಲ್ಲಿ ಮಾತ್ರ ಮಾಡಿಕೊಳ್ಳಿ.
6) ಲಕ್ಕಿ ಸೊಪ್ಪನ್ನು ಹರಳೆಣ್ಣೆಯಲ್ಲಿ ಕುಟ್ಟಿ ಬೆಂಬೂದಿಯಲ್ಲಿ ಇಟ್ಟು ಪಕ್ವ ಮಾಡಿ ಅರೆದು ಕುರುವಿಗೆ ಕಟ್ಟುವುದರಿಂದ ಒಡೆದು ಗುಣವಾಗುತ್ತದೆ.
7) ಲಕ್ಕಿ ಕಷಾಯದಲ್ಲಿ ತಲೆತೊಳಿಯುವುದರಿಂದ ತಲೆಯ ಹುಣ್ಣು ಕುರು ಗುಣವಾಗುತ್ತದೆ.
8) ಲೆಕ್ಕಿ ಸೊಪ್ಪಿನ ರಸದೊಂದಿಗೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
9) ಲಕ್ಕಿ ಸೊಪ್ಪಿನಿಂದ ಹದ ವರಿತು ಮಾಡಿದ ಔಷಧಿಯಿಂದ ಅಪಸ್ಮಾರ ಗುಣವಾಗುತ್ತದೆ.
10) ಲಕ್ಕಿ ಚಿಗುರನ್ನು ನೀರಿನಲ್ಲಿ ಬೇಯಿಸಿ ಮಜ್ಜಿಗೆಯಲ್ಲಿ ಅರೆದು ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
11) ಲಕ್ಕಿ ಸೊಪ್ಪು ಮತ್ತು ಆಡು ಮುಟ್ಟದ ಬಳ್ಳಿ ಸೇರಿಸಿ ಮಾಡುವ ಔಷಧಿ ತಲೆದೂಗುವ ಕಾಯಿಲೆಯನ್ನು ಗುಣಪಡಿಸುತ್ತದೆ.
12) ಮೂಳೆ ಮುರಿತದ ಜಾಗದಲ್ಲಿ ಪಟ್ಟು ತೆಗೆದ ನಂತರ ಲಕ್ಕಿ ಸೊಪ್ಪು ಕಾಳುಮೆಣಸು ಅರೆದು ಹಚ್ಚುವುದರಿಂದ ನೋವು ನಿವಾರಣೆ ಆಗುತ್ತದೆ.
13) ಬೇರನ್ನು ಗೋಮೂತ್ರದಲ್ಲಿ ತೈದು ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.
14) ಹೊಟ್ಟೆಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ ಇದು ಹೆಚ್ಚು ಉಷ್ಣ.

Advertisement
Advertisement

🥢 ಸುಮನಾ ಮಳಲಗದ್ದೆ 9980182883.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

45 minutes ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

5 hours ago

ಅಹಮದಾಬಾದ್ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ

ಅಹಮದಾಬಾದ್ ನಲ್ಲಿ  ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…

5 hours ago

ಮುಂದಿನ 1 ತಿಂಗಳು ಈ 4 ರಾಶಿಯವರಿಗೆ ಸೂರ್ಯನಿಂದ ಬ್ಯಾಡ್‌ ಟೈಮ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515690

6 hours ago

ಹೊಸರುಚಿ | ಹಲಸಿನ ಹಣ್ಣಿನ ಮೈಸೂರು ಪಾಕ್

ಹಲಸಿನ ಹಣ್ಣಿನ ಮೈಸೂರು ಪಾಕ್

6 hours ago