MIRROR FOCUS

ಒಣ ಮೇವು ಹುಲ್ಲಿಗೆ ಹೆಚ್ಚಿದ ಬೇಡಿಕೆ | ದುಪ್ಪಟ್ಟು ದರದಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಮಾರಾಟ…! | ಮುಂದಿನ ದಿನಗಳಲ್ಲಿ ಮೇವಿಗೂ ಕಾಡಲಿದೆ ಅಭಾವ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬರಗಾಲ(Drought) ಬಂದ್ರೆ ಜನ- ಜಾನುವಾರು, ಕಾಡು ಪ್ರಾಣಿ ಪಕ್ಷಿಗಳಿಂದ(Animal-Birds) ಹಿಡಿದು ಕ್ರಿಮಿ ಕೀಟಗಳಿಗೂ ತೊಂದರೆ ತಪ್ಪಿದ್ದಲ್ಲ. ಎಲ್ಲೆಲ್ಲೂ ನೀರು ಆಹಾರಕ್ಕಾಗಿ(Water-Food) ಪರದಾಡುವ ಪರಿಸ್ಥಿತಿ ಬಂದೊದಗುತ್ತದೆ. ಮಳೆಯ ಕೊರತೆಯಿಂದ(Less rain) ಈ ಬಾರಿ ಜಾನುವಾರುಗಳ(Cattle) ಮೇವಿಗೂ(Fodder) ಸಂಕಷ್ಟಪಡುವಂತಾಗಿದೆ. ಇದರಿಂದ ಮೇವಿಗೂ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೇನು ಮೇವು ಮಾರಾಟ ಮಾಡುವ ರೈತರಿಗೆ (Farmers) ಸದ್ಯ ಸುಗ್ಗಿ ಕಾಲ ಎನ್ನಬಹುದು. ಮಹಾರಾಷ್ಟ್ರದಿಂದ(Maharastra) ಬೆಳಗಾವಿಗೆ(Belagavi) ಬಂದು ಮೇವು  ಕೊಂಡೊಯ್ಯುವವರ ಸಂಖ್ಯೆಯೂ ಹೆಚ್ಚಾಗಿದೆ.

Advertisement
Advertisement

ಮೇವಿಗೆ ಅಭಾವ : ದನಕರುಗಳಿಗೆ ಜೋಳದ ದಂಟು, ತೊಗರಿ ಹೊಟ್ಟು, ಹುರುಳಿ ಬಳ್ಳಿ, ಶೇಂಗಾ ಹೊಟ್ಟನ್ನು ಮೇವಾಗಿ ಬಳಕೆ ಮಾಡಲಾಗುತ್ತದೆ. ಮಳೆ ಕಡಿಮೆಯಾದ ಪರಿಣಾಮ ತೊಗರಿ ಹೊಟ್ಟು ಹಾಗೂ ಜೋಳದ ದಂಟಿನ ಮೇವಿನ ಅಭಾವ ಉಂಟಾಗಿದೆ. ಹುರುಳಿ ಬಳ್ಳಿಯ ಹೊಟ್ಟು ಹಾಗೂ ಶೇಂಗಾ ಹೊಟ್ಟು ದುಬಾರಿಯಾಗಿದೆ. ತುಸು ಹೆಚ್ಚು ಬೆಲೆಯಾದರೂ ಜೋಳದ ದಂಟಿನ ಮೇವು ಖರೀದಿಗೆ ರೈತರು ಅಲೆದಾಡುತ್ತಿದ್ದಾರೆ.

ದುಪ್ಪಟ್ಟು ರೇಟ್: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದ ಕಾಗವಾಡ ಹಾಗೂ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಾತ್ರ ಜೋಳದ ಬೆಳೆ ಬೆಳೆಯಲಾಗುತ್ತದೆ. ಈ ವರ್ಷನೀರಿನ ಅಭಾವ ಹಿನ್ನೆಲೆ ಕಡಿಮೆ ಇಳುವರಿ ಬಂದಿದ್ದು ಮಹಾರಾಷ್ಟ್ರದಿಂದ ಬರುವ ರೈತರು ಇಲ್ಲಿನ ಮೇವಿನ ಹುಲ್ಲಿಗೆ 2000 ದಿಂದ 2500 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ಹಿಂದೆಲ್ಲ ಸಾವಿರದ ಗಡಿ ದಾಟೋದೆ ಕಷ್ಟ ಅಂತಿದ್ದ ಮೇವಿನ ದರ ಈ ಬಾರಿ ಡಬಲ್‌ ಆಗಿದೆ. ಇದು ಗಡಿನಾಡ ರೈತರಿಗೆ ಒಂದಿಷ್ಟು ಖುಷಿ ತಂದಿರುವುದು ಸುಳ್ಳಲ್ಲ.

ಕೇವಲ ಉತ್ತರದಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಮೇವಿಗೆ ಈ ಬಾರಿ ಕೊರೆತೆ ಉಂಟಾಗುವ ಎಲ್ಲಾ ಲಕ್ಷಣಗಳಿವೆ. ಜಾನುವಾರಗಳನ್ನು ಈ ಬರಗಾಲದ ಸಮಯದಲ್ಲಿ ಸಾಕುವುದೇ ದೊಡ್ಡ ಸವಾಲಾಗಿದೆ. ನೀರಿಗೂ ಅಭಾವ ಉಂಟಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ರೈತರು ಕಷ್ಟ ಪಡಬೇಕಾಗುತ್ತದೆ. ಜಾನುವಾರು ಸಾಕುವ ಅಲ್ಪ ಸ್ವಲ್ಪ ಮಂದಿಯೂ ಇದನ್ನು ಕೈಬಿಡುವ ಯೋಚನೆಯನ್ನು ಮಾಡಬಹುದು. ದನ, ಕರುಗಳು ಕಟುಕರ ಕೈ ಸೇರುವುದರಲ್ಲಿ ಸಂದೇಹವಿಲ್ಲ.

– ಅಂತರ್ಜಾಲ ಮಾಹಿತಿ

Advertisement

Due to the lack of rain (Less rain) this time, cattle fodder (Fodder) is suffering. Due to this, the demand for fodder has also increased. For the farmers who sell fodder, it is harvest season. The number of people coming to Belagavi from Maharashtra to take fodder has also increased.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

1 day ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

1 day ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

1 day ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

1 day ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

1 day ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

1 day ago