Advertisement
MIRROR FOCUS

Karnataka Weather | ದೇಶದಲ್ಲಿ ಉಷ್ಣ ಮಾರುತದ ಆತಂಕ | ರಾಜ್ಯದಲ್ಲಿ ಪರಿಣಾಮ ಏನು ? ಈಗ ಹೇಗಿದೆ ಉಷ್ಣ ಮಾರುತ ಪ್ರಭಾವ |

Share

ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ 2024 ಮಾರ್ಚ್ ನಿಂದ ಮೇ ತಿಂಗಳ ಕೊನೆಯ ತನಕ ಭಾರತದ ಹೆಚ್ಚಿನ ಭಾಗಗಳಲ್ಲಿ (ಮಧ್ಯ ಭಾರತ, ದಕ್ಷಿಣ ಭಾರತದ ಉತ್ತರ ಕರ್ನಾಟಕ, ಆಂಧ್ರಾ ತನಕ) ಉಷ್ಣ ಮಾರುತ ಬೀಸುವ ಆತಂಕ ಇದೆ. ಸದ್ಯ ಉಷ್ಣ ಮಾರುತದ ಪ್ರಭಾವ ತಗ್ಗಿದೆ. 

ಕರ್ನಾಟಕದಲ್ಲಿ ಉಷ್ಣ ಮಾರುತ ಪರಿಣಾಮ : ಉತ್ತರ ಕರ್ನಾಟಕ ಹೆಚ್ಚಿನ ಭಾಗಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉಷ್ಣ ಮಾರುತ ಬೀಸುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಎಲ್ನಿನೋ ಪ್ರಭಾವ ಕುಸಿತಗೊಳ್ಳುತ್ತಿದ್ದರೂ ಸಂಪೂರ್ಣ ಶಿಥಿಲಗೊಂಡಿಲ್ಲ. ಉತ್ತರದ ಕಡೆಯಿಂದ ಉಷ್ಣ ಮಾರುತಗಳು ಆರಂಭವಾದರೆ ಶುಷ್ಕ ಹವೆ ಮುಂದುವರಿಯಬಹುದು. ಮಾರ್ಚ್ ತಿಂಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುವ ಲಕ್ಷಣ ಇದೆ. ವರದಿಯಂತೆ ಪೆಸಿಫಿಕ್ ಸಾಗರ ಹಾಗೂ ಹಿಂದೂಮಹಾಸಾಗರದ ಮೇಲ್ಮೈ ಉಷ್ಣತೆ ಈಗಾಗಲೇ ಸಾಮಾನ್ಯಕ್ಕಿಂತ ಹೆಚ್ಚಿದೆ.ಹಾಗಾಗಿ ಉಷ್ಣ ಮಾರುತದ ಜೊತೆಗೆ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿಯಲ್ಲಿಯ ಮೂಲಕ ಗಾಳಿ ಭೂಮಿಗೆ ಬೀಸಲು ಆರಂಭವಾದರೆ ಮಳೆಯ ಸಾಧ್ಯತೆ ಇರಬಹುದು.

ಹವಾಮಾನ ಇಲಾಖೆಯ ವಿಶ್ಲೇಷಣೆ
ಕಳೆದ ವರ್ಷ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಆದರೆ, ಜಾಗತಿಕ ನಿಯಂತ್ರಕ ಸೂಚ್ಯಂಕದ ಪ್ರಕಾರ ಕಳೆದ ಫೆಬ್ರವರಿಯಿಂದ ಎಲ್ ನಿನೋ ಮಧ್ಯಮ ಹಂತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ಲಾ-ನಿನಾ ಎಂದು ಕರೆಯಲಾಗುತ್ತಿದ ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮಳೆ ಮೇಲೆ ಪರಿಣಾಮ ಬೀರಲಿದೆ. ಈ ವರ್ಷ ಇವೆರಡೂ ಸಾಧಾರಣ ಮಟ್ಟದಲ್ಲಿ ಇರುವುದರಿಂದ ಮುಂಗಾರು, ಹಿಂಗಾರಿನಲ್ಲಿ ಉತ್ತಮ ವರ್ಷಧಾರೆಯಾಗಲಿದೆ.ಏಪ್ರಿಲ್ ಮೊದಲ ವಾರದಿಂದ ಕೆಲವೆಡೆ ವರ್ಷಧಾರೆಯಾಗಲಿದೆ ಎಂದು ಮಾಹಿತಿ ನೀಡಿದರು.

From March to the end of May, there is an heat wave blowing in most parts of India. What can be the effect in the Karnataka state?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

3 hours ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

3 hours ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

21 hours ago

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ

ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…

1 day ago

ಕರ್ನಾಟಕದ 69.60 ಲಕ್ಷ ಹೆಕ್ಟೇರ್ ಭೂಮಿ ಹಾನಿ – ಕೃಷಿ ಉತ್ಪಾದಕತೆಗೆ ದೊಡ್ಡ ಸವಾಲು

ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…

1 day ago

ಮಂಗಳೂರಿನಲ್ಲಿ ರಾಷ್ಟ್ರೀಯ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ತೆರೆ – ಮಣಿ ಸರ್ಬರ್‌ತೋ ಚಾಂಪಿಯನ್

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್–2026ಕ್ಕೆ…

2 days ago