Advertisement
MIRROR FOCUS

ಒಣ ಮೇವು ಹುಲ್ಲಿಗೆ ಹೆಚ್ಚಿದ ಬೇಡಿಕೆ | ದುಪ್ಪಟ್ಟು ದರದಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಮಾರಾಟ…! | ಮುಂದಿನ ದಿನಗಳಲ್ಲಿ ಮೇವಿಗೂ ಕಾಡಲಿದೆ ಅಭಾವ

Share

ಬರಗಾಲ(Drought) ಬಂದ್ರೆ ಜನ- ಜಾನುವಾರು, ಕಾಡು ಪ್ರಾಣಿ ಪಕ್ಷಿಗಳಿಂದ(Animal-Birds) ಹಿಡಿದು ಕ್ರಿಮಿ ಕೀಟಗಳಿಗೂ ತೊಂದರೆ ತಪ್ಪಿದ್ದಲ್ಲ. ಎಲ್ಲೆಲ್ಲೂ ನೀರು ಆಹಾರಕ್ಕಾಗಿ(Water-Food) ಪರದಾಡುವ ಪರಿಸ್ಥಿತಿ ಬಂದೊದಗುತ್ತದೆ. ಮಳೆಯ ಕೊರತೆಯಿಂದ(Less rain) ಈ ಬಾರಿ ಜಾನುವಾರುಗಳ(Cattle) ಮೇವಿಗೂ(Fodder) ಸಂಕಷ್ಟಪಡುವಂತಾಗಿದೆ. ಇದರಿಂದ ಮೇವಿಗೂ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೇನು ಮೇವು ಮಾರಾಟ ಮಾಡುವ ರೈತರಿಗೆ (Farmers) ಸದ್ಯ ಸುಗ್ಗಿ ಕಾಲ ಎನ್ನಬಹುದು. ಮಹಾರಾಷ್ಟ್ರದಿಂದ(Maharastra) ಬೆಳಗಾವಿಗೆ(Belagavi) ಬಂದು ಮೇವು  ಕೊಂಡೊಯ್ಯುವವರ ಸಂಖ್ಯೆಯೂ ಹೆಚ್ಚಾಗಿದೆ.

ಮೇವಿಗೆ ಅಭಾವ : ದನಕರುಗಳಿಗೆ ಜೋಳದ ದಂಟು, ತೊಗರಿ ಹೊಟ್ಟು, ಹುರುಳಿ ಬಳ್ಳಿ, ಶೇಂಗಾ ಹೊಟ್ಟನ್ನು ಮೇವಾಗಿ ಬಳಕೆ ಮಾಡಲಾಗುತ್ತದೆ. ಮಳೆ ಕಡಿಮೆಯಾದ ಪರಿಣಾಮ ತೊಗರಿ ಹೊಟ್ಟು ಹಾಗೂ ಜೋಳದ ದಂಟಿನ ಮೇವಿನ ಅಭಾವ ಉಂಟಾಗಿದೆ. ಹುರುಳಿ ಬಳ್ಳಿಯ ಹೊಟ್ಟು ಹಾಗೂ ಶೇಂಗಾ ಹೊಟ್ಟು ದುಬಾರಿಯಾಗಿದೆ. ತುಸು ಹೆಚ್ಚು ಬೆಲೆಯಾದರೂ ಜೋಳದ ದಂಟಿನ ಮೇವು ಖರೀದಿಗೆ ರೈತರು ಅಲೆದಾಡುತ್ತಿದ್ದಾರೆ.

ದುಪ್ಪಟ್ಟು ರೇಟ್: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದ ಕಾಗವಾಡ ಹಾಗೂ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಾತ್ರ ಜೋಳದ ಬೆಳೆ ಬೆಳೆಯಲಾಗುತ್ತದೆ. ಈ ವರ್ಷನೀರಿನ ಅಭಾವ ಹಿನ್ನೆಲೆ ಕಡಿಮೆ ಇಳುವರಿ ಬಂದಿದ್ದು ಮಹಾರಾಷ್ಟ್ರದಿಂದ ಬರುವ ರೈತರು ಇಲ್ಲಿನ ಮೇವಿನ ಹುಲ್ಲಿಗೆ 2000 ದಿಂದ 2500 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ಹಿಂದೆಲ್ಲ ಸಾವಿರದ ಗಡಿ ದಾಟೋದೆ ಕಷ್ಟ ಅಂತಿದ್ದ ಮೇವಿನ ದರ ಈ ಬಾರಿ ಡಬಲ್‌ ಆಗಿದೆ. ಇದು ಗಡಿನಾಡ ರೈತರಿಗೆ ಒಂದಿಷ್ಟು ಖುಷಿ ತಂದಿರುವುದು ಸುಳ್ಳಲ್ಲ.

ಕೇವಲ ಉತ್ತರದಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಮೇವಿಗೆ ಈ ಬಾರಿ ಕೊರೆತೆ ಉಂಟಾಗುವ ಎಲ್ಲಾ ಲಕ್ಷಣಗಳಿವೆ. ಜಾನುವಾರಗಳನ್ನು ಈ ಬರಗಾಲದ ಸಮಯದಲ್ಲಿ ಸಾಕುವುದೇ ದೊಡ್ಡ ಸವಾಲಾಗಿದೆ. ನೀರಿಗೂ ಅಭಾವ ಉಂಟಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ರೈತರು ಕಷ್ಟ ಪಡಬೇಕಾಗುತ್ತದೆ. ಜಾನುವಾರು ಸಾಕುವ ಅಲ್ಪ ಸ್ವಲ್ಪ ಮಂದಿಯೂ ಇದನ್ನು ಕೈಬಿಡುವ ಯೋಚನೆಯನ್ನು ಮಾಡಬಹುದು. ದನ, ಕರುಗಳು ಕಟುಕರ ಕೈ ಸೇರುವುದರಲ್ಲಿ ಸಂದೇಹವಿಲ್ಲ.

– ಅಂತರ್ಜಾಲ ಮಾಹಿತಿ

Due to the lack of rain (Less rain) this time, cattle fodder (Fodder) is suffering. Due to this, the demand for fodder has also increased. For the farmers who sell fodder, it is harvest season. The number of people coming to Belagavi from Maharashtra to take fodder has also increased.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

11 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

11 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

16 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

16 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

16 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

1 day ago