ಕೈಯಲ್ಲಿ ತಿರಂಗ ಬಣ್ಣದ ಬಳೆ ಹಾಕಿ ,ಅದೇ ಬಣ್ಣದ ಬೊಟ್ಟನ್ನು ಧರಿಸಿ,ಮೊಗದಲ್ಲಿ ನಗುವನ್ನು ತುಂಬಿಕೊಂಡು ಓಡೋಡಿ ಶಾಲೆಗೆ ಆಗಮಿಸಿ ಧ್ವಜಾರೋಹಣವಾದಾಗ ನಮನ ಸಲ್ಲಿಸಿ ಭಾರತ ಮಾತೆಗೆ ವಂದಿಸುವ ಪರಿ ಅಂದಿನಿಂದಲೂ ರೂಢಿಯಲ್ಲಿತ್ತು. ಆದರೆ ಈ ವರ್ಷ ಈ ಹರ್ಷ ಬಲು ಅಧಿಕವಾಗಿಯೇ ಇದೆ .ಇದು ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ವರ್ಷ. ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳಾಗಿವೆ. ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಭಾರತೀಯರೆಲ್ಲರೂ ಸಜ್ಜಾಗಿದ್ದಾರೆ.
ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ ಅಡಚಣೆಗಳು ಎದುರಾದರೂ ಅವೆಲ್ಲವನ್ನು ಮೆಟ್ಟಿನಿಂತು ಸಮರ್ಥವಾಗಿ ಎದುರಿಸುತ್ತಾ ಯಶಸ್ಸಿನೆಡೆಗೆ ದಾಪುಗಾಲಿಡುತ್ತಿದೆ. ಕೃಷಿ, ರಕ್ಷಣೆ ,ವಿದೇಶಾಂಗ, ವಿಜ್ಞಾನ, ಕೈಗಾರಿಕೆ, ಸ್ವ ಉದ್ಯಮ ,ವೈದ್ಯಕೀಯ ,ವಾಣಿಜ್ಯ, ವಿದ್ಯಾಭ್ಯಾಸ ,ಸಾರಿಗೆ ,ಕ್ರೀಡೆ ,ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ತನ್ನದೇ ಛಾಪನ್ನು ಮೂಡಿಸುತ್ತಿದೆ . ತನ್ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ದಿಟ್ಟತನದಿಂದ ಉತ್ತರ ನೀಡಿದೆ. ಇದೀಗ ಅಮೃತೋತ್ಸವದ ಸುಸಂದರ್ಭದಲ್ಲಿ ಸ್ವಾವಲಂಬನೆಯ ಪರಿಕಲ್ಪನೆಯಡಿಯಲ್ಲಿ ಆತ್ಮ ನಿರ್ಭರದೆಡೆಗೆ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಪ್ರತಿಯೊಂದು ವಿಚಾರದಲ್ಲೂ ಸ್ವಾವಲಂಬನೆಯ ತತ್ವವನ್ನಿಟ್ಟುಕೊಂಡು ಇನ್ನಿತರ ದೇಶಗಳಿಗೆ ಮಾದರಿಯಾಗುವಂತೆ ಮುನ್ನುಗ್ಗುತ್ತಿದೆ .ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ಯಶಸ್ಸನ್ನು ಕಾಣುತ್ತಿದೆ.ಬಾಹ್ಯಾಕಾಶ ಕ್ಷೇತ್ರದಲ್ಲೂ ಹಿಂದೆಂದೂ ಕಾಣದ ಅಭೂತಪೂರ್ವ ಬದಲಾವಣೆಗಳು ಕಾಣುತ್ತಿದ್ದು ಮಂಗಳಯಾನ, ಚಂದ್ರಯಾನ ಮೊದಲಾದ ಬಾಹ್ಯಾಕಾಶ ಯೋಜನೆಗಳು ಯಶಸ್ಸನ್ನು ಕಂಡಿದ್ದು ವಿಶ್ವದಲ್ಲಿ ಭಾರತವು ಮತ್ತೊಮ್ಮೆ ಉತ್ತುಂಗಕ್ಕೇರುವಂತೆ ಮಾಡಿದೆ.
ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ತಾಯಿ ಭಾರತೀಯೆಡೆಗಿನ ಗೌರವ ನೂರರಷ್ಟು ಹೆಚ್ಚಿದೆ.’ ವಂದೇ ಮಾತರಂ’ ,’ಜನಗಣಮಣ ‘ಧ್ವನಿ ಮೊಳಗುವಾಗ ಮೈ ನವಿರೇಳುತ್ತದೆ .ಜೋರಾಗಿ ‘ಭಾರತ ಮಾತಾ ಕಿ ಜೈ’ ಎಂಬ ಜೈಕಾರ ಕೂಗುವ ಘಳಿಗೆ ಸಮೀಪಿಸುತ್ತಿದೆ. ಮನೆ ಮನೆಯಲ್ಲೂ, ಮನ ಮನದಲ್ಲೂ ತಿರಂಗ ಪತಾಕೆ ರಾರಾಜಿಸಬೇಕಿದೆ .ಸ್ವಾತಂತ್ರ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮೊಳಗೆ ಎಂದೆಂದೂ ಚಿರಸ್ಥಾಯಿಯಾಗಬೇಕಿದೆ. ರಾಷ್ಟ್ರ ಪ್ರೇಮದ ಕಿಚ್ಚು ಪ್ರಜ್ವಲಿಸಲಿ. ಭಾರತವು ವಿಶ್ವಗುರುವಾಗಿ ಅಗ್ರಸ್ಥಾನಕ್ಕೇರಿ ವಿರಾಜಮಾನವಾಗಲಿ.1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರಂಭವಾಗಲಿದೆ. ಅಲ್ಲಲ್ಲಿ ಸಾಧಾರಣ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರವ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕತೆ 9535156490
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…