Advertisement
ಸುದ್ದಿಗಳು

ಪದೇ ಪದೇ ಭೂಮಿ ಕಂಪನ | ಮತ್ತೆ ಆತಂಕಕ್ಕೆ ಒಳಗಾಗುವ ಜನ | ಕಲ್ಮಕಾರು-ಸಂಪಾಜೆ ಪ್ರದೇಶದಲ್ಲಿ ಮತ್ತೆ ಆತಂಕ | ಭೂಮಿ ಕಂಪನದ ಕಾರಣ ಇದುವರೆಗೂ ನಿಗೂಢ…! |

Share

ವಾರದ ಹಿಂದೆ ದ ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು, ಸಂಪಾಜೆ ಪ್ರದೇಶದಲ್ಲಿ ಭೂಕುಸಿತ, ಪ್ರವಾಹ, ಭಾರೀ ಮಳೆಯ ಸದ್ದಿನ ಬಳಿಕ ಇದೀಗ ಮತ್ತೆ ಭೂಕಂಪನದ ಸುದ್ದಿ ಕೇಳಿದೆ. ಭಾನುವಾರ ಸಂಜೆ ಕಲ್ಮಕಾರು, ಸಂಪಾಜೆ, ದೊಡ್ಡತೋಟ, ಮರ್ಕಂಜ, ಗುತ್ತಿಗಾರು, ದೇವಚಳ್ಳ ಸೇರಿದಂತೆ ವಿವಿದೆಡೆ ಭೂಮಿ ಕಂಪಿಸಿದ ಅನುಭವವಾಗಿದೆ, ಅದರ ಜೊತೆಗೆ ಗುಡುಗು ಮಾದರಿಯ ಸದ್ದು ಕೂಡಾ ಜನರಿಗೆ ಕೇಳಿದೆ. ಹೀಗಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದೆ. 

ಎರಡು ವಾರದ ಹಿಂದೆ ಭಾರೀ ಪ್ರವಾಹದಿಂದ ಕಲ್ಮಕಾರು, ಸಂಪಾಜೆ ಪ್ರದೇಶದ ಜನರನ್ನು ಅಕ್ಷರಶ: ಆತಂಕಕ್ಕೆ ತಳ್ಳಿತ್ತು ಭಾರೀ ಮಳೆ, ಜಲಸ್ಫೋಟ, ಮೇಘಸ್ಫೋಟ. ಅದಕ್ಕೂ ಎರಡು ವಾರದ ಹಿಂದೆ ಇದೇ ಪ್ರದೇಶದಲ್ಲಿ ಸತತವಾಗಿ ಭೂಕಂಪನದ ಮಾದರಿಯ ಸದ್ದುಗಳು ಕೇಳಿತ್ತು, ಭೂಮಿ ನಡುಗಿದ ಅನುಭವವಾಗಿತ್ತು. ಇದೆರಡೂ ಘಟನೆಗಳ ನಂತರ ಜನರು ಆತಂಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವವಾದಂತೆಯೇ ಮತ್ತೆ ಆತಂಕ ಶುರುವಾಗಿದೆ. ನಿಜಕ್ಕೂ ಈ ಕಂಪನಕ್ಕೆ ಕಾರಣವೇನು ? ಎಂಬುದೇ ನಿಗೂಢ , ಯಕ್ಷ ಪ್ರಶ್ನೆ.

ಕಳೆದ ಸುಮಾರು ಒಂದು ತಿಂಗಳಿನಿಂದ ಭೂಮಿ ಕಂಪನದ ಸುದ್ದಿ ಇದೆ. ಸಂಪಾಜೆ ಪ್ರದೇಶದಲ್ಲಿ 8 ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದೆ. ಅದಾದ ನಂತರ ಜನರೂ ಒತ್ತಾಯಿಸಿದರು. ಭೂಮಿ ಕಂಪನಕ್ಕೆ ಅಧ್ಯಯನಗಳು ನಡೆದವು. ಆದರೆ ಇದುವರೆಗೂ ಕಂಪನಕ್ಕೆ ಕಾರಣ ತಿಳಿದಿಲ್ಲ. ಕಂಪನವಾದ ಪ್ರದೇಶದಲ್ಲಿಯೇ ಭೂಕುಸಿತ, ಜಲಸ್ಫೋಟ, ಮೇಘಸ್ಫೋಟ ನಡೆಯಿತು. ಆದರೆ ಭೂಮಿ ಕಂಪನಕ್ಕೆ ಕಾರಣ ತಿಳಿದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿದರು, ಕೆಲವರು ಪರಿಸರ ನಾಶದಿಂದ ಭೂಮಿ ಕಂಪನ ಎಂದರೆ ಇನ್ನೂ ಕೆಲವರು ಕೊಳವೆಬಾವಿ ಕಾರಣ ಎಂದರು. ಇನ್ನೂ ಕೆಲವರು ಗಣಿಗಾರಿಕೆ, ರೆಸಾರ್ಟ್‌ ಗಳು ಕಾರಣ ಎಂದೂ ಹೇಳಿದರು. ಅವರವರ ವಿಶ್ಲೇಷಣೆಗೆ ತಕ್ಕಂತೆ ಕಾರಣಗಳನ್ನು ಹೇಳಿದರು. ವೈಜ್ಞಾನಿಕವಾಗಿ ಕಲ್ಮಕಾರು, ಸಂಪಾಜೆ ಪ್ರದೇಶವೇ ಕೇಂದ್ರೀಕರಿಸಿ ನಡೆಯುತ್ತಿರುವ ಭೂಕಂಪನಕ್ಕೆ , ಭಾರೀ ಮಳೆಗೆ ನಿಖರ ಕಾರಣ  ತಿಳಿದಿಲ್ಲ. ವಿಜ್ಞಾನಿಗಳು, ತಜ್ಞರು ಭೇಟಿ ನೀಡಿದರೂ ಅಧಿಕೃತ ಕಾರಣ ಇನ್ನೂ ಹೊರಬಂದಿಲ್ಲ. 2018 ರಲ್ಲೂ ಇದೇ ಮಾದರಿ ಆಗಿತ್ತು. ಸಂಪಾಜೆ ಪ್ರದೇಶದಲ್ಲಿ ಭೂಕುಸಿತವಾದ ಬಳಿಕ ತಜ್ಞರ ಅಧ್ಯಯನ ವರದಿಯಲ್ಲಿ ನಿಖರವಾದ ಕಾರಣಿವನ್ನೂ ತಿಳಿಸಿಲ್ಲ. ಈ ವರ್ಷವೂ ಅದೇ ಮಾದರಿಯ ಘಟನೆಗಳು ನಡೆದಿವೆ. ಸಂಬಂಧಿತರು ಈ ಬಗ್ಗೆ ಜಾಗೃತಿ ಮೂಡಿಸುವುದು  ಹಾಗೂ ಕಂಪನಕ್ಕೆ ಸೂಕ್ತ ಕಾರಣ ಪತ್ತೆ ಮಾಡಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

4 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

8 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago