Advertisement
MIRROR FOCUS

ಭಾರತದ ಕೃಷಿ ಚೀನಾವನ್ನೂ ಮೀರಿಸಿದೆ : 10 ವರ್ಷಗಳಲ್ಲಿ ದಾಖಲೆ 4.42% ಬೆಳವಣಿಗೆ

Share

ಭಾರತದ ಕೃಷಿ ಕ್ಷೇತ್ರವು 2015 ರಿಂದ 2024 ರವರೆಗೆ ಸರಾಸರಿ 4.42 ಶೇಕಡಾ ಬೆಳವಣಿಗೆ ದಾಖಲಿಸಿ, ಚೀನಾದ 4.10 ಶೇಕಡಾ ವೃದ್ಧಿದರವನ್ನು ಮೀರಿಸಿದೆ ಎಂದು ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌ ಅವರ ವರದಿ ಬಹಿರಂಗಪಡಿಸಿದೆ.

‘Agriculture in Meeting Aspirations of Rising India’ ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ, 2015–16ರಿಂದ 2024–25ರವರೆಗೆ ಭಾರತದ ಕೃಷಿ ಆದಾಯದಲ್ಲಿ ಒಂದು ವರ್ಷವೂ ಋಣಾತ್ಮಕ (Negative) ಬೆಳವಣಿಗೆ ದಾಖಲಾಗಿಲ್ಲ. ಕೋವಿಡ್-19 ಮಹಾಮಾರಿಯ ಸಮಯದಲ್ಲೂ ಕೃಷಿ ಕ್ಷೇತ್ರವು ಇತರೆ ವಲಯಗಳಂತೆ ಕುಸಿತ ಅನುಭವಿಸದೇ ಸ್ಥಿರತೆಯನ್ನು ಪ್ರದರ್ಶಿಸಿದೆ. ಈ ವರದಿಯ ಪ್ರಮುಖ ಅಂಶಗಳು ಹೀಗಿದೆ…

  • 2015–24ರ ಅವಧಿಯಲ್ಲಿ ಭಾರತ ಕೃಷಿ ವೃದ್ಧಿದರ: 4.42%
  • ಚೀನಾದ ಕೃಷಿ ವೃದ್ಧಿದರ: 4.10%
  • 2014–15ರಿಂದ 2023–24ರವರೆಗೆ ಕೃಷಿ ಉತ್ಪಾದಕರ ಆದಾಯ ವಾರ್ಷಿಕವಾಗಿ 10.11% ಏರಿಕೆ
  • ರೈತರ ಆದಾಯ 10 ವರ್ಷಗಳಲ್ಲಿ 126%, ಉತ್ಪಾದಕರ ಆದಾಯ 108% ಹೆಚ್ಚಳ

ರಮೇಶ್ ಚಂದ್ ಅವರ ಪ್ರಕಾರ, 2047ರೊಳಗೆ ‘ವಿಕಸಿತ ಭಾರತ’ (Viksit Bharat) ಸಾಧಿಸುವ ಗುರಿಗೆ ಕೃಷಿ ಕ್ಷೇತ್ರ ಪ್ರಮುಖ ಅಸ್ತಂಭವಾಗಿದೆ. ಪ್ರಸ್ತುತ ಬೆಲೆಯಲ್ಲಿ ಕೃಷಿ ಕ್ಷೇತ್ರವು ದೇಶದ ಒಟ್ಟು ಆದಾಯದ 19.73% ಪಾಲು ಹೊಂದಿದ್ದು, 46% ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತದೆ.  2014–15ರಿಂದ 2024–25ರವರೆಗಿನ ಅವಧಿಯನ್ನು ಅವರು ಭಾರತದ ಕೃಷಿ ಇತಿಹಾಸದಲ್ಲೇ ಅತ್ಯಂತ ವೇಗವಾದ ಬೆಳವಣಿಗೆಯ ಹಂತ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬೇಡಿಕೆ ಆಧಾರಿತವಾಗಿದ್ದು, ಹೈ-ವ್ಯಾಲ್ಯೂ ಬೆಳೆಗಳು ಹಾಗೂ ಸಹಾಯಕ ವಲಯಗಳತ್ತ ಕೃಷಿ ವೈವಿಧ್ಯಗೊಳ್ಳುತ್ತಿದೆ.

ಉತ್ಪಾದನೆ ಹಾಗೂ ರಫ್ತುಗಳಲ್ಲೂ ಸಾಧನೆಯಾಗಿದ್ದು,  ಹಾಲು ಉತ್ಪಾದನೆ: 146 ಮಿಲಿಯನ್ ಟನ್ (2014–15) → 239 ಮಿಲಿಯನ್ ಟನ್‌ಗಿಂತ ಹೆಚ್ಚು (2023–24) ಆಗಿದ್ದು, ಹಣ್ಣು-ತರಕಾರಿ ಉತ್ಪಾದನೆ: 280.7 → 367.72 ಮಿಲಿಯನ್ ಟನ್ ಆಗಿವೆ. ಭಾರತ ಈಗ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಅಕ್ಕಿಯ ಅತಿದೊಡ್ಡ ರಫ್ತುಗಾರನೂ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಕೃಷಿ ಬೆಂಬಲ ಯೋಜನೆಗಳನ್ನೂ ಹೀಗೆ ಹೇಳಿದ್ದಾರೆ..

  • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿ: 3.4 ಕೋಟಿ → 4.1 ಕೋಟಿ ರೈತರು
  • ಕೃಷಿ ಸಾಲದ ಪ್ರಮಾಣ: 29.4% → 41.7%
  • e-NAM ಮೂಲಕ 1,522 ಮಂಡಿಗಳ ಏಕೀಕರಣ

ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಕೃಷಿ ಬೆಳವಣಿಗೆ ಕುಂಠಿತಗೊಂಡ ಸಮಯದಲ್ಲೂ ಭಾರತ ಮಾತ್ರ ವೇಗ ಹೆಚ್ಚಿಸಿದ್ದು, ಇದು ದೇಶದ ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕ ಸ್ಥಿರತೆಗೆ ಬಲ ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕವೇ ರೈತರ ಲಾಭದ ದಾರಿಗಳಾಗಲಿವೆ.

ಈ ವರದಿಯು ರೈತರಿಗೆ  ಮುಖ್ಯ ಸಂದೇಶಗಳನ್ನು ನೀಡುತ್ತದೆ:

  1. ಆದಾಯದಲ್ಲಿ ನಿಜವಾದ ಏರಿಕೆ : ಕಳೆದ 10 ವರ್ಷಗಳಲ್ಲಿ ರೈತರ ಆದಾಯ 126% ಹೆಚ್ಚಾಗಿದೆ. ಇದು ಬೆಲೆ ಬೆಂಬಲ, ಉತ್ಪಾದನೆ ವೃದ್ಧಿ ಮತ್ತು ಸಹಾಯಕ ವಲಯಗಳ (ಹಾಲು, ತೋಟಗಾರಿಕೆ) ಪಾತ್ರವನ್ನು ಸೂಚಿಸುತ್ತದೆ.
  2. ಕೃಷಿ ಈಗ ಅಪಾಯದ ವಲಯವಲ್ಲ : ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ಕೃಷಿ ಕ್ಷೇತ್ರದಲ್ಲಿ ಋಣಾತ್ಮಕ ಬೆಳವಣಿಗೆ ಕಂಡುಬಂದಿಲ್ಲ. ಇದು ಬೆಳೆ ವಿಮೆ, ಸಾಲ ಲಭ್ಯತೆ ಮತ್ತು ಸರ್ಕಾರಿ ಹಸ್ತಕ್ಷೇಪಗಳ ಪರಿಣಾಮ.
  3. ಹಾಲು–ತೋಟಗಾರಿಕೆ ರೈತರಿಗೆ ದೊಡ್ಡ ಅವಕಾಶ : ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕವಾಗಿದ್ದು, ಹಣ್ಣು–ತರಕಾರಿ ಉತ್ಪಾದನೆಯಲ್ಲೂ ವೇಗದ ಏರಿಕೆ ಕಂಡಿದೆ. ಇದು ಸಾಂಪ್ರದಾಯಿಕ ಧಾನ್ಯಗಳ ಹೊರತಾಗಿ ಹೈ-ವ್ಯಾಲ್ಯೂ ಬೆಳೆಗಳಿಗೆ ರೈತರು ತಿರುಗಬೇಕೆಂಬ ಸೂಚನೆ.
  4. ಮಹಿಳಾ ಉದ್ಯೋಗ ಮತ್ತು ಗ್ರಾಮೀಣ ಸ್ಥಿರತೆ: ಕೃಷಿಯಲ್ಲಿ ಮಹಿಳಾ ಕಾರ್ಮಿಕರ ಪಾಲು ಹೆಚ್ಚಿದ್ದು, ಗ್ರಾಮೀಣ ಆರ್ಥಿಕತೆಯನ್ನು ಸ್ಥಿರವಾಗಿಟ್ಟಿದೆ.

-‌ ರೂರಲ್‌ ಮಿರರ್‌ ಡಿಜಿಟಲ್‌ ಡೆಸ್ಕ್

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

1 hour ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

13 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

13 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

13 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

14 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

1 day ago